ನವದೆಹಲಿ: ಗುಜರಾತ್ ಕರಾವಳಿಗೆ ನಾಳೆ ಚಂಡಮಾರುತ ‘ವಾಯು’ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಭಾರೀ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕಚ್ಛ್ ನಿಂದ ಹಿಡಿದು ದಕ್ಷಿಣ ಗುಜರಾತಿನವರೆಗಿನ ಸಂಪೂರ್ಣ ಕರಾವಳಿ ತಟವನ್ನು ಹೈ ಅಲರ್ಟ್ ನಲ್ಲಿ ಇಡಲಾಗಿದೆ. ಇಂದು ಮತ್ತು ನಾಳೆ ಅಲ್ಲಿನ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ.
ಗೃಹಸಚಿವ ಅಮಿತ್ ಶಾ ಅವರು, ಮಂಗಳವಾರ ಚಂಟಮಾರುತ ವಾಯು ಬಗೆಗಿನ ಮುಂಜಾಗೃತ ಕ್ರಮಗಳ ಬಗ್ಗೆ ಪರಿಶೀಲನೆಯನ್ನು ನಡೆಸಿದರು ಮತ್ತು ವಿಸ್ತೃತ ಸಲಹೆಗಳನ್ನು ಗುಜರಾತ್ ಮತ್ತು ಕೇಂದ್ರಾಡಳಿತ ಪ್ರದೇಶ ದಿಯೂಗೆ ಕಳುಹಿಸಿಕೊಟ್ಟಿದ್ದಾರೆ.
ದಿಯೂ ಮತ್ತು ಗುಜರಾತಿನ ಸುಮಾರು 3 ಲಕ್ಷ ಮಂದಿಯನ್ನು ಸುರಕ್ಷಿತವಾದ ಪ್ರದೇಶಗಳಿಗೆ ಸ್ಥಳಾಂತರ ಮಾಡುವ ಕಾರ್ಯ ನಡೆಯುತ್ತಿದೆ. 700 ಶಿಬಿರಗಳನ್ನು ಇವರಿಗಾಗಿ ನಿರ್ಮಾಣ ಮಾಡಲಾಗಿದೆ.
ಪೋರಬಂದರ್ ಮತ್ತು ಮಹುವಾ ನಡುವಣ ಗುಜರಾತ್ ಕರಾವಳಿಗೆ, ದಿಯೂ ಪ್ರದೇಶಕ್ಕೆ ಚಂಡಮಾರುತ ವಾಯು ಅಪ್ಪಳಿಸುವ ನಿರೀಕ್ಷೆ ಇದೆ. ಈ ಪ್ರದೇಶದಲ್ಲಿ ಪ್ರಬಲ ಗಾಳಿಯನ್ನು ಕಾಣಬಹುದಾಗಿದೆ. ಇದು ಹಲವಾರು ಮನೆಗಳನ್ನು ಧ್ವಂಸ ಮಾಡುವ ಆತಂಕ ಎದುರಾಗಿದೆ, ವಿದ್ಯುತ್ ಮತ್ತು ಸಂಪರ್ಕ ಕೂಡ ಕಡಿಯಬಹುದು, ರಸ್ತೆ ಸಂಪರ್ಕ ಕಡಿಯಬಹುದು ಎಂದು ಹೇಳಲಾಗಿದೆ.
ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳವನ್ನು ಗುಜರಾತಿನ ಜಾಮ್ ನಗರಕ್ಕೆ ರವಾನಿಸಲಾಗಿದೆ. ತಟ ರಕ್ಷಣಾ ಪಡೆ, ಬಿಎಸ್ ಎಸ್ ಮತ್ತು ಇತರ ಪಡೆಗಳು ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ಧವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.