ನವದೆಹಲಿ: ಬಿಜೆಪಿ ಸಂಸದ ಡಾ.ವೀರೇಂದ್ರ ಕುಮಾರ್ ಅವರು 17ನೇ ಲೋಕಸಭಾದ ಹಂಗಾಮಿ ಸ್ಪೀಕರ್ ಆಗಿ ನೇಮಕವಾಗಿದ್ದಾರೆ. ಮಧ್ಯಪ್ರದೇಶದ ತಿಕಂಘರ್ ಲೋಕಸಭಾ ಕ್ಷೇತ್ರವನ್ನು ಇವರು ಪ್ರತಿನಿಧಿಸುತ್ತಿದ್ದಾರೆ. 11ನೇ, 12ನೇ, 13ನೇ, 14ನೇ, 15ನೇ ಮತ್ತು 16ನೇ ಲೋಕಸಭೆಗೆ ಇವರು ಸತತವಾಗಿ ಆರಿಸಿ ಬಂದಿದ್ದಾರೆ.
ಲೋಕಸಭೆಗೆ ಹೊಸ ಸದಸ್ಯರಿಗೆ ಪ್ರಮಾಣವಚನವನ್ನು ಬೋಧಿಸುವ ಜವಾಬ್ದಾರಿ ಹಂಗಾಮಿ ಸ್ಪೀಕರ್ ಅವರ ಮೇಲಿರುತ್ತದೆ. ಇದು ತಾತ್ಕಾಲಿಕ ಹುದ್ದೆಯಾಗಿದ್ದು, ಸದನವು ಸ್ಪೀಕರ್ ಮತ್ತು ಡೆಪ್ಯೂಟಿ ಸ್ಪೀಕರ್ ಅವರನ್ನು ಆರಿಸುವವರೆಗೆ ಹಂಗಾಮಿ ಸ್ಪೀಕರ್ ಅವರು ಹುದ್ದೆಯಲ್ಲಿರುತ್ತಾರೆ.
ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಸದಸ್ಯನಾಗಿರುವ ವೀರೇಂದ್ರ ಕುಮಾರ್, 1975ರಲ್ಲಿ ಲೋಕ ನಾಯಕ್ ಜಯಪ್ರಕಾಶ್ ನಾರಾಯಣ್ ಆರಂಭಿಸಿದ ಕ್ರಾಂತಿ ಚಳುವಳಿಯಲ್ಲೂ ಭಾಗಿಯಾಗಿದ್ದರು, ತುರ್ತು ಪರಿಸ್ಥಿತಿಯ ವೇಳೆ ಸಾಗರ್ ಮತ್ತು ಜಬಲ್ ಪುರ ಜೈಲಿನಲ್ಲೂ ಬಂಧಿಯಾಗಿದ್ದರು.
1982ರಲ್ಲಿ ರಾಜಕೀಯವನ್ನು ಸೇರಿದ ಇವರು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.