ನವದೆಹಲಿ: ಪ್ರತಿ ಸಚಿವಾಲಯಕ್ಕೂ ಐದು ವರ್ಷಗಳ ಯೋಜನೆಯನ್ನು ಸಿದ್ಧಪಡಿಸುವಂತೆ ಉನ್ನತ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಆಗ್ರಹಿಸಿದ್ದಾರೆ. ಚುನಾವಣೆಯಲ್ಲಿ ಪಡೆದ ಜನಾದೇಶಕ್ಕೆ ತಕ್ಕಂತೆ ಉದ್ದೇಶಿತ ಗುರಿಗಳು ಮತ್ತು ಮೈಲಿಗಲ್ಲುಗಳನ್ನು ಸಾಧಿಸಿ ಜನರ ಜೀವನ ಮಟ್ಟವನ್ನು ಸುಧಾರಿಸುವ ಯೋಜನೆಯನ್ನು ರೂಪಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.
ಎಲ್ಲಾ ಸಚಿವಾಲಯಗಳ ಕಾರ್ಯದರ್ಶಿಗಳೊಂದಿಗೆ ಸಭೆಯನ್ನು ನಡೆಸಿದ ಅವರು, ಪ್ರತಿ ಸಚಿವಾಲಯವೂ ‘ಪರಿಣಾಮಕಾರಿ ನಿರ್ಧಾರ’ವನ್ನು ತೆಗೆದುಕೊಳ್ಳಬೇಕು, ಈ ನಿರ್ಧಾರಗಳಿಗೆ ಅನುಮೋದನೆ 100 ದಿನಗಳಲ್ಲಿ ಸಿಗಲಿದೆ ಎಂದಿದ್ದಾರೆ.
ಜನರು ಉತ್ತಮ ಜೀವನದ ನಿರೀಕ್ಷೆಯಲ್ಲಿದ್ದಾರೆ ಎಂಬುದನ್ನು ಒತ್ತಿ ಹೇಳಿರುವ ಪ್ರಧಾನಿ, ಸರ್ಕಾರವು ಸುಲಲಿತ ಜೀವನ ಕಲ್ಪಿಸುವತ್ತ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಬೇಕು, ಅಧಿಕಾರಿಗಳು ದೇಶವನ್ನು 5 ಟ್ರಿಲಿಯನ್ ಟಾಲರ್ ಎಕಾನಮಿ ಮಾಡುವತ್ತ ಕಾರ್ಯೋನ್ಮುಖರಾಗಬೇಕು ಎಂದಿದ್ದಾರೆ.
“ಜನರ ಬೃಹತ್ ನಿರೀಕ್ಷೆಯನ್ನು ಸವಾಲಾಗಿ ನೋಡಬಾರದು, ಅವಕಾಶವನ್ನಾಗಿ ನೋಡಬೇಕು ಎಂದು ಮೋದಿ ಹೇಳಿದ್ದಾರೆ. ಜನಾದೇಶ ಜನರ ಆಶೋತ್ತರ ಮತ್ತು ಸ್ಥಾನಮಾನದ ಬದಲಾವಣೆ ಹಾಗೂ ಉತ್ತಮ ಜೀವನದ ಆಶಯವನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ” ಎಂದು ಸರ್ಕಾರದ ಪ್ರಕಟನೆ ತಿಳಿಸಿದೆ.
ಸಭೆಯಲ್ಲಿ ಕೇಂದ್ರ ಸಚಿವರುಗಳಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಜಿತೇಂದ್ರ ಸಿಂಗ್ ಭಾಗಿಯಾಗಿದ್ದರು.
“ಭಾರತೀಯ ಮತದಾರರು ಐದು ವರ್ಷಗಳ ದೂರದೃಷ್ಟಿಯನ್ನು ಈಗಾಗಲೇ ನೀಡಿದ್ದಾರೆ ಮತ್ತು ಇದನ್ನು ತಲುಪುವ ಅವಕಾಶ ನಮ್ಮ ಮುಂದೆ ಇದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.