ಬೆಳ್ತಂಗಡಿ : ಗ್ರಾ.ಪಂ.ಸದಸ್ಯರು, ಕಾರ್ಯಕರ್ತರು ಪಕ್ಷದ ಆಸ್ತಿ. ಪಕ್ಷದ ಸೂಚನೆಗಳಿಗೆ, ಅಪೇಕ್ಷೆಗೆ ಸ್ಪಂದಿಸಿದರೆ ಪಕ್ಷವನ್ನು ಇನ್ನಷ್ಟು ಬಲಗೊಳಿಸಲು ಸಾಧ್ಯ ಎಂದು ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಹೇಳಿದರು.
ಅವರು ಗುರುವಾಯನಕರೆ ಹವ್ಯಕ ಭವನದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಅಭಿನಂದನಾ ಸಭೆಯನ್ನು ಉದ್ಘಾಟಿಸಿ ಈಚೆಗೆ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ ಸದಸ್ಯರನ್ನು, ಚುನಾವಣೆಗೆ ನಿಂತಿದ್ದ ಅಭ್ಯರ್ಥಿಗಳನ್ನು ಮತ್ತು ಚುನಾವಣೆಯಲ್ಲಿ ಕೆಲಸ ಮಾಡಿದ ಕಾರ್ಯಕರ್ತರನ್ನು ಅವರು ಅಭಿನಂದಿಸಿದರು. ತಾಲೂಕಿನಲ್ಲಿ ಮತದಾರರು ಪಕ್ಷ ಬೆಂಬಲಿತ ೩೩೩ ಅಭ್ಯರ್ಥಿಗಳಿಗೆ ಅಪೂರ್ವ ಅವಕಾಶವನ್ನು ನೀಡಿದ್ದಾರೆ. ಆಡಳಿತದ ಈ ಅವಕಾಶವನ್ನು ಕರ್ತವ್ಯ ನಿಷ್ಠೆಯಿಂದ ಗ್ರಾಮದ ಸರ್ವೋತೋಮುಖ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ದಶಂಬರ್ ತಿಂಗಳಲ್ಲಿ ತಾ.ಪಂ. ಮತ್ತು ಜಿ.ಪಂ.ಚುನಾವಣೆಗಳು ನಡೆಯಲಿರುವುದರಿಂದ ಸದಸ್ಯರು, ಕಾರ್ಯಕರ್ತರು ಮತದಾರರ ನಿರಂತರ ಸಂಪರ್ಕವನ್ನು ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್, ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್, ಕಾರ್ಯದರ್ಶಿ ಶಾರದಾ ರೈ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ರಂಜನ್ ಗೌಡ, ತಾಲೂಕಾಧ್ಯಕ್ಷ ಸುಧೀರ್ ಸುವರ್ಣ, ಜಿ.ಪಂ.ಸದಸ್ಯರಾದ ಕೊರಗಪ್ಪ ನಾಯ್ಕ, ಚಂದ್ರಕಲಾ ಸಿ.ಕೆ., ತಾ.ಪಂ.ಅಧ್ಯಕ್ಷ ಜಯಂತಿ ಪಾಲೇದು, ಸದಸ್ಯೆ ಗೀತಾ ರಾಮಣ್ಣ ಗೌಡ, ರೈತ ಮೋರ್ಚಾ ಅಧ್ಯಕ್ಷ ಭಾಸ್ಕರ ಸಾಲಿಯಾನ್, ಎಸ್.ಸಿ.ಮೋರ್ಚಾ ಅಧ್ಯಕ್ಷ ರಾಘವ ಕಲ್ಮಂಜ, ಎಸ್.ಟಿ.ಮೋರ್ಚಾ ಅಧ್ಯಕ್ಷ ಲಿಂಗಪ್ಪ, ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ಸದಾನಂದ ಉಂಗಿಲಬೈಲು ವೇದಿಕೆಯಲ್ಲಿದ್ದರು. ವಿಜೇತ ಎಲ್ಲಾ ಸದಸ್ಯರನ್ನು ಕೇಶರಿ ಶಾಲು ಹಾಕಿ ಅಭಿನಂದಿಸಲಾಯಿತು. ಉಮೇಶ್ ನರ್ತಿಕಲ್ಲು ವಂದೇಮಾತರಂ ಹಾಡಿದರು. ಪಕ್ಷದ ಬೆಳ್ತಂಗಡಿ ಮಂಡಲ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಸೀತಾರಾಮ್ ವಂದಿಸಿದರು. ನಂದಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ತಾಲೂಕಿನ ಮಾಧ್ಯಮ ಮಂದಿ ತಾಲೂಕಿನ ವಿದ್ಯುತ್ ಅವ್ಯವಸ್ಥೆಯ ಬಗ್ಗೆ ಅಧಿಕಾರಿಗಳಿಗೆ ಚುರುಕು ಮಟ್ಟಿಸಿ, ಸರಕಾರವನ್ನು ಎಚ್ಚರಿಸಿರುವುದು ಅಭಿನಂದನೀಯ. ಇದೇ ರೀತಿ ಸದಸ್ಯರು ತಮ್ಮ ಗ್ರಾಮಗಳಲ್ಲಿ ಸಮಸ್ಯೆಗಳಿಗೆ ಸ್ಪಂದಿಸಬೇಕು – ಪ್ರಭಾಕರ ಬಂಗೇರ ತಾಲೂಕಿನ ಓಡಿಲ್ನಾಳ, ಕಲ್ಮಂಜ, ಶಿಬಾಜೆ, ಬಡಕೋಡಿ, ಶಿಬಾಜೆ, ಸವಣಾಲು, ಹತ್ಯಡ್ಕ, ಪಟ್ರಮೆ ಗ್ರಾಮಗಳು ಕಾಂಗ್ರೇಸ್ನಿಂದ ಮುಕ್ತಿ ಪಡೆದಿವೆ. ಇದು ಇನ್ನಷ್ಟು ಗ್ರಾಮಗಳಿಗೆ ವಿಸ್ತರಿಸಬೇಕು- ಪ್ರಭಾಕರ ಬಂಗೇರ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.