ಸಾರ್ವತ್ರಿಕ ಚುನಾವಣೆಗಳಲ್ಲಿ ಉತ್ತರ ಪ್ರದೇಶ ಅತ್ಯಂತ ಮಹತ್ವವಾದ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ. ದೇಶಕಂಡ 14 ಪ್ರಧಾನಿಗಳ ಪೈಕಿ 8 ಮಂದಿ ಈ ರಾಜ್ಯದವರಾಗಿದ್ದಾರೆ. ಇಬ್ಬರು ಪಂಜಾಬಿನವರಾಗಿದ್ದಾರೆ. ಒಬ್ಬರು ಆಂಧ್ರಪ್ರದೇಶದವರು, ಒಬ್ಬರು ಕರ್ನಾಟಕದವರಾಗಿದ್ದಾರೆ. ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ಹಲವು ಬಾರಿ ಉತ್ತರ ಪ್ರದೇಶದ ವ್ಯಕ್ತಿಗಳು ಪ್ರಧಾನಿ ಕುರ್ಚಿಯ ಮೇಲೆ ಕೂತಿದ್ದಾರೆ. ನರೇಂದ್ರ ಮೋದಿಯವರು ಕೂಡ 2014 ಮತ್ತು 2019ರಲ್ಲಿ ಉತ್ತರಪ್ರದೇಶದ ವಾರಣಾಸಿಯಿಂದ ಗೆದ್ದು ಬಂದು ಪ್ರಧಾನಿಯಾಗಿದ್ದಾರೆ. ಲೋಕಸಭಾದ ರಸ್ತೆಯು ಉತ್ತರಪ್ರದೇಶದ ಮೂಲಕ ಹಾದು ಹೋಗುತ್ತದೆ ಎಂಬ ಮಾತಿದೆ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಮತವನ್ನು ದೊರಕಿಸಿಕೊಡುವಲ್ಲಿ ಈ ರಾಜ್ಯ ಅತ್ಯಂತ ಮಹತ್ವದ ಪಾತ್ರವನ್ನು ನಿಭಾಯಿಸಿದೆ.
2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯು ಐತಿಹಾಸಿಕ ಬಹುಮತವನ್ನು ಪಡೆದುಕೊಂಡು ಗದ್ದುಗೆ ಏರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. 2014ರಲ್ಲಿ ಬಿಜೆಪಿಗೆ ದೊರೆತಂತಹ ವಿಜಯವನ್ನು ಈ ಬಾರಿ ಕಟ್ಟಿ ಹಾಕಲೇಬೇಕೆಂದು ಮಹಾಘಟಬಂದನ ಮಾಡಿಕೊಂಡಿದ್ದ ಬಹುಜನ ಸಮಾಜವಾದಿ ಪಾರ್ಟಿ, ಸಮಾಜವಾದಿ ಪಕ್ಷ, ಆರ್ಎಲ್ಡಿ ಪಕ್ಷ ತನ್ನ ಪ್ರಯತ್ನದಲ್ಲಿ ಅತ್ಯಂತ ಹೀನಾಯವಾಗಿ ಸೋತಿದೆ. 59 ಸ್ಥಾನಗಳನ್ನು ಇಲ್ಲಿ ಬಿಜೆಪಿ ಪಡೆದುಕೊಂಡಿದೆ. ಮಹಾಘಟಬಂಧನಕ್ಕೆ ಸಿಕ್ಕಿದ್ದು 20 ಸ್ಥಾನಗಳು. ಕಾಂಗ್ರೆಸ್ಸಿಗೆ ಸಿಕ್ಕಿದ್ದು ಒಂದೇ ಒಂದು ಸ್ಥಾನ. ಮಹಾಘಟಬಂಧನದ ಪೈಕಿ ಬಹುಜನ ಸಮಾಜವಾದಿ ಸ್ವಲ್ಪ ಉತ್ತಮ ಪ್ರದರ್ಶನವನ್ನು ನೀಡಿದೆ. 11 ಸ್ಥಾನಗಳನ್ನು ಅದು ಪಡೆದುಕೊಂಡಿದೆ. ಸಮಾಜವಾದಿ ಪಕ್ಷ ಪಡೆದುಕೊಂಡಿದ್ದು ಕೇವಲ 8 ಸ್ಥಾನಗಳನ್ನು ಮಾತ್ರ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಅಮೇಥಿ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ವಿರುದ್ಧ ಪರಾಭವಗೊಂಡಿದ್ದಾರೆ. ಕಳೆದ ಎರಡು ದಶಕಗಳಿಂದ ಕಾಂಗ್ರೇಸ್ ಸಂಸದರನ್ನೇ ಆಯ್ಕೆಮಾಡಿದ್ದ ಕ್ಷೇತ್ರ ಈ ಬಾರಿ ಬಿಜೆಪಿಯ ಸ್ಮೃತಿ ಇರಾನಿ ಅವರಿಗೆ ಒಲಿದಿದೆ.
ಮಹಾಘಟಬಂಧನವು ದಲಿತ ಯಾದವ ಮತ್ತು ಮುಸ್ಲಿಂ ಮತಗಳನ್ನು ಒಂದುಗೂಡಿಸುವ ಪ್ರಯತ್ನವನ್ನು ನಡೆಸಿದೆ. ಅದಕ್ಕಾಗಿ ಅಪವಿತ್ರ ರೀತಿಯಲ್ಲಿ ಮೈತ್ರಿಯನ್ನು ಮಾಡಿಕೊಂಡಿತ್ತು. ಆದರೂ ಈ ಪಕ್ಷಗಳು ಮೋದಿ ಅಲೆಯನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಬಹುಸಂಖ್ಯಾತ ಯಾದವರು ಬಿಜೆಪಿಯನ್ನು ಬೆಂಬಲಿಸಲು ನಿರ್ಧರಿಸಿದ್ದೇ ಅವರ ವಿಫಲತೆಗೆ ಕಾರಣವಾಗಿದೆ. ಪಕ್ಷಗಳ ಸಾಂಪ್ರದಾಯಿಕ ವೋಟ್ ಬ್ಯಾಂಕ್ ಇತರ ಪಕ್ಷಗಳ ಅಭ್ಯರ್ಥಿಗಳಿಗೆ ವರ್ಗಾವಣೆ ಆಗಿದೆ. ಭಾರತೀಯ ರಾಜಕೀಯದಲ್ಲಿ ನರೇಂದ್ರ ಮೋದಿಯವರ ಉದಯವು ಹಿಂದಿನ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದೆ. 1960ರಿಂದ ಭಾರತೀಯ ರಾಜಕಾರಣದ ಕೇಂದ್ರಬಿಂದುವಾಗಿದ್ದ ಜಾತಿ ಸಮೀಕರಣವು ಮೋದಿ ಯುಗದಲ್ಲಿ ಸಂಪೂರ್ಣ ಬದಲಾಗಿ ಹೋಗಿದೆ. ರಾಜಕೀಯ ಪಕ್ಷಗಳು ತಮ್ಮ ವೋಟ್ ಬ್ಯಾಂಕ್ಗಳನ್ನು ಆಧರಿಸಿ ಮೈತ್ರಿಯನ್ನು ಮಾಡಿಕೊಳ್ಳುತ್ತಿದ್ದವು, ಆದರೀಗ ವೋಟ್ ಬ್ಯಾಂಕ್ ಎಂಬುದು ಪಕ್ಷಗಳಿಗೆ ಸುಲಭದ ತುತ್ತಲ್ಲ. 2014 ಮತ್ತು 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಉತ್ತರಪ್ರದೇಶದ ಬಹುತೇಕ ಯಾದವ ಜನಾಂಗದವರು ಬಿಜೆಪಿಗೆ ಮತ ಚಲಾವಣೆ ಮಾಡಿದ್ದಾರೆ. ಬಹುತೇಕ ಯಾದವ ಯುವಕರು ಅಖಿಲೇಶ್ ಸಿಂಗ್ ಯಾದವ್ ಅಥವಾ ಮುಲಾಯಂಸಿಂಗ್ ಸಿಂಗ್ ಯಾದವ್ ಬದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಮಧ್ಯಮ ವರ್ಗದ ಯಾದವ ಯುವಕರಿಗೆ ರಾಷ್ಟ್ರೀಯ ಭದ್ರತೆ, ವಿದೇಶಿ ನಿಯಮ, ಸಮಾಜ ಕಲ್ಯಾಣ ಯೋಜನೆಗಳು ಜಾತಿಗಿಂತ ಹೆಚ್ಚು ಪ್ರಾಮುಖ್ಯತೆಯ ವಿಷಯಗಳಾಗಿವೆ.
ಸ್ಕ್ರೋಲ್ ಪ್ರಕಟಗೊಳಿಸಿದ ವರದಿಯು ಯಾದವ ಯುವಕರ ಮೋದಿ ಬಗೆಗಿನ ಒಲವಿನ ಭಾವನೆಯನ್ನು ಸ್ಪಷ್ಟಪಡಿಸುತ್ತದೆ. “ನಾನು ಯಾದವನಾದರೂ ನರೇಂದ್ರ ಮೋದಿ ಅವರಿಗೆ ಮತ ಹಾಕುತ್ತೇನೆ. ಯಾಕೆಂದರೆ ಅವರಿಂದಾಗಿ ನನ್ನ ಕುಟುಂಬ ದಿನಕ್ಕೆ ಎರಡು ಹೊತ್ತು ಊಟ ಮಾಡುತ್ತದೆ ” ಎಂಬುದನ್ನು ಕೃಷ್ಣ ಮುರಾರಿ ಯಾದವ್ ಎಂಬ ಯುವಕ ಹೇಳಿಕೊಂಡಿದ್ದಾನೆ. ಗೋರಖಪುರ ದುರ್ಗಾಪುರದ ಕಾಂಟ್ರಾಕ್ಟರ್ ಆಗಿರುವ ಈತ, ಕೇಂದ್ರ ಸರಕಾರದ ಯೋಜನೆಗಳಡಿ ವಸತಿ ಮತ್ತು ಶೌಚಾಲಯಗಳನ್ನು ನಿರ್ಮಾಣ ಮಾಡುತ್ತಿದ್ದಾನೆ. “ನಾನು ಹೋದಲ್ಲೆಲ್ಲಾ ಬಡವರು ನನಗೆ ಆಶೀರ್ವಾದ ಮಾಡುತ್ತಾರೆ, ಆಗ ಅವರಿಗೆ ನಾನು ನೀವು ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ಎನ್ನುತ್ತೇನೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ ಎಂದರೆ ಅದಕ್ಕೆ ಈ ಕಲ್ಯಾಣ ಯೋಜನೆಗಳೇ ಕಾರಣ ಎಂಬುದು ಅವರ ಅಭಿಪ್ರಾಯವಾಗಿದೆ.
ದೇಶದಾದ್ಯಂತದ ಜನರು ಜಾತಿ, ಜನಾಂಗ, ಧರ್ಮದ ಎಲ್ಲೆಯನ್ನು ಮೀರಿ ಬಿಜೆಪಿಯ ಅಭಿವೃದ್ಧಿ ಕಾರ್ಯಗಳಿಗೆ ಮತ ಚಲಾಯಿಸಿದ್ದಾರೆ. ಆಧುನಿಕ ಮತದಾರರು ಜಾತಿ, ಮೈತ್ರಿಗಳ ಬಗ್ಗೆ ಆಸಕ್ತಿ ಇಲ್ಲದವರಾಗಿದ್ದಾರೆ ಮತ್ತು ಅವರಿಗೆ ರಾಷ್ಟ್ರೀಯ ಭದ್ರತೆ, ವಿದೇಶಿ ನಿಯಮ ಅತ್ಯಂತ ಮಹತ್ವಪೂರ್ಣವಾದ ವಿಷಯವಾಗಿದೆ. ಪ್ರಧಾನಿ ಮೋದಿಯವರು ಈ ವಿಷಯಗಳ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿದ್ದಾರೆ ಮತ್ತು ಅವುಗಳನ್ನು ಈಡೇರಿಸಿದ್ದಾರೆ. ಹೀಗಾಗಿ ಉತ್ತರ ಪ್ರದೇಶದ ಜನರು ಮತ್ತೊಮ್ಮೆ ಮೋದಿಯವರನ್ನೇ ಚುನಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.