ಅಮೇಥಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಚುನಾವಣೆಗೆ ಮುಂಚಿತವಾಗಿ ಅಮೇಥಿ ಜನರನ್ನು ಓಲೈಸಿಕೊಳ್ಳುವ ಸಲುವಾಗಿ ಫೇಸ್ಬುಕ್ ಮೂಲಕ ಪತ್ರವೊಂದನ್ನು ಬರೆದಿದ್ದಾರೆ. ರಾಹುಲ್ ಅವರ ಈ ಪತ್ರಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ತೀಕ್ಷ್ಣ ತಿರುಗೇಟು ನೀಡಿದ್ದಾರೆ.
ರಾಹುಲ್ ಹಿಂದಿಯಲ್ಲಿ ಪತ್ರವನ್ನು ಬರೆದಿದ್ದು, ನನ್ನ ಅಮೇಥಿ ಪರಿವಾರಕ್ಕೆ ಈ ಪತ್ರ ಬರೆದಿರುವುದಾಗಿ ಹೇಳಿದ್ದಾರೆ. ನನನ್ನು ಮತ್ತೊಮ್ಮೆ ಆರಿಸಿ, ಬಿಜೆಪಿ ತಡೆಯೊಡ್ಡುತ್ತಿರುವ ಅಭಿವೃದ್ಧಿ ಕಾರ್ಯವನ್ನು ಮತ್ತೆ ಆರಂಭಿಸುತ್ತೇನೆ ಎಂದಿದ್ದಾರೆ. ಅಮೇಥಿಯ ಶಕ್ತಿಯು ಪ್ರಾಮಾಣಿಕತೆ ,ಸರಳತೆ ಮತ್ತು ಏಕತೆಯಲ್ಲಿ ಅಡಗಿದೆ ಎಂದಿದ್ದಾರೆ.
ರಾಹುಲ್ ಅವರ ಈ ಪತ್ರಕ್ಕೆ ಅವರ ಪ್ರತಿಸ್ಪರ್ಧಿ ಇರಾನಿಯವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಈ ಪತ್ರ ರಾಹುಲ್ ಅವರು ಅಮೇಥಿಗೆ ಸೂಕ್ತ ಪ್ರಾಮುಖ್ಯತೆಯನ್ನು ನೀಡಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ ಎಂದಿದ್ದಾರೆ.
ಇದುವರೆಗೆ ರಾಹುಲ್ ಅವರು ಅಮೇಥಿಯಲ್ಲಿನ ಪಂಚಾಯತ್ ಗಳಿಗೆ ಭೇಟಿಯನ್ನು ನೀಡುವ ಪ್ರಯತ್ನವನ್ನೂ ಮಾಡಿಲ್ಲ ಎಂದಿದ್ದಾರೆ.
ರಾಹುಲ್ ಗಾಂಧಿಯವರ ಹಿಂದೂ ವಿರೋಧಿ ಧೋರಣೆ ಬಹಿರಂಗಗೊಂಡಿದೆ ಎಂದಿರುವ ಸ್ಮೃತಿ ಇರಾನಿ, ಕಾಂಗ್ರೆಸ್ ಪಕ್ಷವು ಕಾಶ್ಮೀರಿ ಪಂಡಿತರನ್ನು ಹತ್ಯೆ ಮಾಡಿರುವ ಯಾಸಿನ್ ಮಲ್ಲಿಕ್ ನನ್ನು ವೈಭವೀಕರಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕರುಗಳು, ಹಿಂದುಗಳು ಹಿಂಸಾಚಾರ ಮಾಡುವವರು ಎಂದು ಹೇಳುವ ಎಡಪಂಥೀಯ ನಾಯಕರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುತ್ತಾರೆ, ರಾಹುಲ್ ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಜನಿವಾರವನ್ನು ಧರಿಸುತ್ತಾರೆ ಎಂದು ಸ್ಮೃತಿ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಪಕ್ಷ ಯಾಕೆ ಹಿಂದೂಗಳನ್ನು ಅಗೌರವದಿಂದ ನೋಡುತ್ತದೆ ಎಂಬುದನ್ನು ರಾಹುಲ್ ಗಾಂಧಿ ಅವರು ದೇಶಕ್ಕೆ ವಿವರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅಮೇಥಿ ಲೋಕಸಭಾ ಕ್ಷೇತ್ರವು ಮೇ 6ರಂದು ಚುನಾವಣೆಯನ್ನು ಎದುರಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.