ನವದೆಹಲಿ: ಭಾರತ ಕೈಗೊಂಡಿರುವ ಸುಧಾರಣಾ ಕ್ರಮಗಳು ಡಿಜಿಟಲೀಕರಣದ ಪ್ರಯೋಜನಗಳನ್ನು ತೋರಿಸುತ್ತಿವೆ, ಇದರಿಂದ ವಂಚನೆಗಳು ತಗ್ಗಿವೆ ಮತ್ತು ಆರೋಗ್ಯಕರ ಸ್ಪರ್ಧೆ ಹೆಚ್ಚಾಗಿವೆ, ಗುಣಮಟ್ಟವೂ ಹೆಚ್ಚಾಗುತ್ತಿವೆ ಎಂದು ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
‘ಭಾರತದಲ್ಲಿನ ಕೆಲವೊಂದು ಸುಧಾರಣೆಗಳು ಡಿಜಟಲೀಕರಣದ ಪ್ರಯೋಜನಗಳನ್ನು ತೋರಿಸುತ್ತಿವೆ, ವಂಚನೆಯ ಅವಕಾಶಗಳನ್ನು ತಗ್ಗಿಸಿವೆ. ಉದಾಹರಣೆಗೆ, ಭಾರತದಲ್ಲಿ ಸಾಮಾಜಿಕ ನೆರವಿನ ಕಾರ್ಯಕ್ರಮವನ್ನು ನಿರ್ವಹಿಸಲು ಎಲೆಕ್ಟ್ರಾನಿಕ್ ವೇದಿಕೆ ಅಳವಡಿಸಿಕೊಂಡದ್ದರಿಂದ, ಪ್ರಯೋಜನಗಳ ಕುಸಿತವಿಲ್ಲದೆ ಖರ್ಚು ಮಾಡುವ ಪ್ರಮಾಣವನ್ನು ಶೇ.17 ರಷ್ಟು ಕುಗ್ಗಿಸಿತು” ಎಂದು IMF ಪ್ರಕಟಿಸಿದ 2019 ಹಣಕಾಸು ವರದಿ ತಿಳಿಸಿದೆ.
ಸರಕು ಮತ್ತು ಸೇವೆಗಳ ಖರೀದಿಗಳನ್ನು ಡಿಜಟಲೀಕರಣಗೊಳಿಸುವ ಸರ್ಕಾರದ ಕಾರ್ಯವನ್ನು ವರದಿಯು ಶ್ಲಾಘಿಸಿದೆ. ”ಭಾರತ ಮತ್ತು ಇಂಡೋನೇಷ್ಯಾಗಳಲ್ಲಿ ಇ-ಖರೀದಿಗಳನ್ನು ಪರಿಚಯಿಸಿರುವುದರಿಂದ ಸ್ಪರ್ಧೆಗಳು ಹೆಚ್ಚಾದವು ಮತ್ತು ಉತ್ತಮ ಗುಣಮಟ್ಟ ನಿರ್ಮಾಣಕ್ಕೆ ಇದು ಪೂರಕವಾಯಿತು” ಎಂದು ವರದಿ ಹೇಳಿದೆ.
ವಿವಿಧ ಸರ್ಕಾರಿ ಇಲಾಖೆಗಳು, ಸಂಘಟನೆಗಳು ಮತ್ತು ಪಿಎಸ್ಎಯುಗಳಿಗೆ ಅಗತ್ಯವಿರುವ ಸಾಮಾನ್ಯ-ಬಳಕೆ ಸರಕು ಮತ್ತು ಸೇವೆಗಳ ಆನ್ಲೈನ್ ಸಂಗ್ರಹಣೆಗೆ ಅನುಕೂಲವಾಗುವಂತೆ 2016 ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು, ಸರ್ಕಾರಿ ಇ-ಮಾರ್ಕೆಟ್ ಪ್ಲೇಸ್ ಅನ್ನು ಪ್ರಾರಂಭಿಸಿತು. ದೇಶವು GDP ಯ ಶೇಕಡಾ 20ರಷ್ಟನ್ನು ಸಾರ್ವಜನಿಕ ಸಂಗ್ರಹಣೆಗೆ ಖರ್ಚು ಮಾಡುತ್ತಿರುವುದರಿಂದ ಇದು ಗಮನಾರ್ಹವಾದ ಸುಧಾರಣಾ ಕ್ರಮ ಎನಿಸಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.