ನವದೆಹಲಿ: ಅಮೆರಿಕಾದಲ್ಲಿ ಪರಿಸರ ಸಂಬಂಧಿತ ಕಾನೂನಿನಲ್ಲಿ ತಜ್ಞತೆಯನ್ನು ಪಡೆದ ನ್ಯಾಯಾಲಯವನ್ನು ಸ್ಥಾಪನೆ ಮಾಡುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ, ಹವಾಯಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಮೈಕೆಲ್ ಡಿ ವಿಲ್ಸನ್ ಅವರು ಪ್ರಧಾನಿ ನರೇಂದ್ರ ಮೋದಿಯವರ, ಗಂಗಾ ನದಿಯೆಡಗಿನ ಸಾಂಸ್ಕೃತಿಕ ನಂಬಿಕೆ ಆಧಾರಿತ ದೃಷ್ಟಿಕೋನವನ್ನು ಕೊಂಡಾಡಿದ್ದಾರೆ ಮತ್ತು ಭವಿಷ್ಯದಲ್ಲಿ ಶುದ್ಧ ನದಿಗೆ “ಭಾರತೀಯ ಪರಿಹಾರ” ಇರಲಿದೆ ಎಂದಿದ್ದಾರೆ. “ಮೋದಿ ನದಿಯ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಎಂದಿರುವ ಅವರು, ಭಾರತ ಸರ್ಕಾರದ ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಯೋಜನೆಯನ್ನು ಅದ್ಭುತ ಸಮುದಾಯ ಯೋಜನೆ ಎಂದು ಕರೆದಿದ್ದಾರೆ.
“ಯಾರಾದರೂ ಗಂಗಾನದಿಗೆ ತೆರಳಿದಾಗ, ಕೇವಲ ಒದ್ದೆ ಮಾತ್ರ ಆಗುವುದಿಲ್ಲ, ಅವರು ಪ್ರೇರಣೆಯನ್ನೂ ಪಡೆಯುತ್ತಾರೆ. ಇದು ಅದ್ಭುತ ಸಮುದಾಯ ಯೋಜನೆ. ವಿಷಪೂರಿತಗೊಂಡ ಬಳಿಕವೂ ಜನರು ಗಂಗೆಯನ್ನು ತ್ಯಜಿಸಲಿಲ್ಲ, ಜನರು ಇನ್ನೂ ಅದನ್ನು ಗೌರವಿಸುತ್ತಾರೆ. ಆದ್ದರಿಂದ, ಅದನ್ನು ಸ್ವಚ್ಛಗೊಳಿಸಲೇಬೇಕು ಎಂದು ನಾನು ಭಾವಿಸುತ್ತೇನೆ. ಐತಿಹಾಸಿಕವಾಗಿ ಸ್ಮರಿಸುವಂತಹ ಭಾರತೀಯ ಪರಿಹಾರ ನದಿಗೆ ಸಿಗಲಿದೆ ” ಎಂದು ಜಸ್ಟಿಸ್ ವಿಲ್ಸನ್ ಪಿಟಿಐಗೆ ನೀಡಿದ ಸಂವಾದದಲ್ಲಿ ತಿಳಿಸಿದ್ದಾರೆ.
“ಇದು ದೀರ್ಘಾಯುಷ್ಯದಲ್ಲಿ ನಂಬಿಕೆ ಇಟ್ಟಿರುವ ಸಂಸ್ಕೃತಿ – 2000 ವರ್ಷಗಳ ಸಂಸ್ಕೃತಿ ಮತ್ತು ನಂಬಿಕೆಗಳಲ್ಲಿ ಪ್ರತಿಬಿಂಬಿಸುವ ಬದ್ಧತೆಯನ್ನು ಹೊಂದಿದೆ. ಭಾರತೀಯರ ಜನರು ಜಾಗತಿಕ ತಾಪಮಾನ ಏರಿಕೆಯ ಪ್ರಸಕ್ತ ಪ್ರವೃತ್ತಿಯನ್ನು ಮತ್ತು ಸ್ವೀಕಾರಾರ್ಹವಲ್ಲದ ಇಂಗಾಲದ ಹೊರಸೂಸುವಿಕೆಯ ಟ್ರೆಂಡ್ ಅನ್ನು ಬದಲಾಯಿಸಲು ಬದ್ಧರಾಗಿದ್ದಾರೆ. ಅವರ ಬದ್ಧತೆಯು ಸಂಸ್ಕೃತಿಯ ಶಕ್ತಿಯಾಗಿದೆ ಎಂದರು.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೋದಿ ನಡುವೆ ದೊಡ್ಡ ವ್ಯತ್ಯಾಸವಿದೆ ಎಂದು ಹೇಳಿದ ಅವರು, ಮೋದಿಯವರು ನದಿಗಳ ಬಗ್ಗೆ ಹೆಚ್ಚು ಕಾಳಜಿಯನ್ನು ಹೊಂದಿದ್ದಾರೆ ಎಂದರು.
ಮಾಲಿನ್ಯದ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುವ ಅಗತ್ಯವಿದೆ ಎಂದಿರುವ ಅವರು, ರಸ್ತೆ ಮತ್ತು ಕಾರುಗಳನ್ನು ಬದಲಾಯಿಸುವುದರ ಹೊರತಾಗಿಯೂ ಅತ್ಯುತ್ತಮ ಸಾರಿಗೆ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.