ನವದೆಹಲಿ: ಕೇವಲ ಪಾಕಿಸ್ಥಾನ ಮಾತ್ರವಲ್ಲ, ಚೀನಾ ಕೂಡ ದಕ್ಷಿಣ ಏಷ್ಯಾದಲ್ಲಿನ ದೇಶಗಳನ್ನು ತಲುಪುವ ಪ್ರಯತ್ನಗಳನ್ನು ಸತತವಾಗಿ ಮಾಡುತ್ತಾ ಬಂದಿದೆ. ಈಗ, ಭಾರತ ಕೂಡ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಈಗಾಗಲೇ ಶ್ರೀಲಂಕಾದೊಂದಿಗಿನ ಭಾರತದ ಉನ್ನತ ಮಟ್ಟದ ಮಾತುಕತೆಗಳು ಪೂರ್ಣಗೊಂಡಿದ್ದು, ಬಾಂಗ್ಲಾದೇಶದೊಂದಿಗಿನ ಮಾತುಕತೆ ಶೀಘ್ರದಲ್ಲೇ ಆರಂಭವಾಗಲಿದೆ.
ಶ್ರೀಲಂಕಾದೊಂದಿಗೆ ಆತ್ಮೀಯ ರಕ್ಷಣಾ ಬಾಂಧವ್ಯಗಳನ್ನು ಸ್ಥಾಪಿಸುವ ಪ್ರಯತ್ನದ ಭಾಗವಾಗಿ, ಭಾರತವು ಡಾರ್ನಿಯರ್ ವಿಚಕ್ಷಣ ವಿಮಾನವನ್ನು ಆ ದೇಶಕ್ಕೆ ವರ್ಗಾಯಿಸಲು ನಿರ್ಧರಿಸಿದೆ. ಉಭಯ ದೇಶಗಳ ನಡುವಿನ ಮಿಲಿಟರಿ ಕಾರ್ಯಾಚರಣೆ ಶ್ರೀಲಂಕಾದಲ್ಲಿ ಇತ್ತೀಚಿಗಷ್ಟೇ ಕೊನೆಗೊಂಡಿದೆ, ಮುಂದಿನ ಹೆಜ್ಜೆ ಹೆಚ್ಚು ಸಂಕೀರ್ಣವಾಗುವ ಲಕ್ಷಣವಿದೆ. ಚೀನಾವು ಲಂಕಾ ಜನರಿಗಾಗಿ ಹ್ಯಾಂಬಾಂಟೋಟ ಬಂದರನ್ನು ನಿರ್ಮಿಸಿದೆ. ಆದರೆ, ಆ ಪ್ರಸ್ತಾಪವು ಮೊದಲು ಭಾರತಕ್ಕೆ ಬಂದಿತ್ತು ಎಂದು ಹೇಳಲಾಗುತ್ತಿದೆ, ಆದರೆ ಭಾರತ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಿಲ್ಲ. ಈಗ, ಲಂಕನ್ ಬಂದರುಗಳಲ್ಲಿ ಚೀನೀ ಜಲಾಂತರ್ಗಾಮಿ ನೌಕೆಗಳ ನಿಲುಗಡೆ ಬಗ್ಗೆ ಭಾರತವು ವಿರೋಧ ವ್ಯಕ್ತಪಡಿಸಿದ್ದನ್ನು ತಲೆಯಲ್ಲಿಟ್ಟುಕೊಂಡು, ಶ್ರೀಲಂಕನ್ನರು ಯಾವುದೇ “ಆಕ್ರಮಣಕಾರಿ” ಶಸ್ತ್ರಾಸ್ತ್ರಗಳ ವ್ಯವಸ್ಥೆಯನ್ನು ತಮ್ಮ ದೇಶದೊಳಗೆ ಅನುಮತಿಸದಿರಲು ನಿರ್ಧರಿಸಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶದ ನಡುವೆ ಜಂಟಿ, ಸುಸಂಘಟಿತ ಗಸ್ತು ತಿರುಗುವ ಯೋಜನೆಗಳು ವರ್ಕ್ ಔಟ್ ಆಗುತ್ತಿದೆ. ಢಾಕಾ ದೆಹಲಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದು, ಡಿಸೆಂಬರ್ನಲ್ಲಿ ಬಾಂಗ್ಲಾ ಪಾರ್ಲಿಮೆಂಟಿನ ಚುನಾವಣೆಯಲ್ಲಿ ಅವಾಮಿ ಲೀಗ್ ಗೆಲುವು ಸಾಧಿಸಿದ್ದು ಹೆಚ್ಚಿನ ಉತ್ತೇಜನವನ್ನು ನೀಡಿದೆ. ಚೀನಾವು ಎರಡು ಜಲಾಂತರ್ಗಾಮಿಗಳನ್ನು ಬಾಂಗ್ಲಾದೇಶ ನೌಕಾಪಡೆಗೆ ಮಾರಾಟ ಮಾಡುತ್ತಿರುವುದು ಆತಂಕಕಾರಿಯಾಗಿದ್ದು, ಚೀನಾವು ಬಾಂಗ್ಲಾದೇಶದ ನೌಕಾ ನೆಲೆಯನ್ನು ಪೆಕುವಾ ನಿರ್ಮಾಣದ ಅಡಿಯಲ್ಲಿ ಬಳಸುವ ಸಾಧ್ಯತೆಯಿದೆ. ದ್ವಿಪಕ್ಷೀಯ ನೌಕಾಪಡೆ ಸಮರಾಭ್ಯಾಸ ಈ ವರ್ಷವೂ ನಡೆಯುವ ಸಾಧ್ಯತೆ ಇದೆ.
ಎರಡೂ ದೇಶಗಳನ್ನೂ ಮೃದುವಾಗಿ ತಲುಪುವ ಪ್ರಯತ್ನವನ್ನು ಭಾರತ ಮಾಡುತ್ತಿದೆ. ಶ್ರೀಲಂಕಾದ ರಕ್ಷಣಾ ಸಿಬ್ಬಂದಿ ಮತ್ತು ಅವರ ಪತ್ನಿಯರನ್ನು ಬೋಧ ಗಯಾ, ಲುಂಬಿನಿ ಮತ್ತು ಬೌದ್ಧ ಸರ್ಕ್ಯೂಟ್ನ ಇತರ ಭಾಗಗಳಿಗೆ ಆಹ್ವಾನಿಸುವ, ಬಾಂಗ್ಲಾದೇಶಿ ರಕ್ಷಣಾ ಸಿಬ್ಬಂದಿಗಳಿಗೆ ಕೋಲ್ಕತಾ ಮತ್ತು ತಾಜ್ ಮಹಲ್ಗೆ ಭೇಟಿ ನೀಡಲು ಆಹ್ವಾನಿಸುವ ಬಗ್ಗೆ ಚಿಂತನೆಗಳು ನಡೆದಿವೆ.
ಚೀನಾವು ಥೈಲ್ಯಾಂಡ್ಗೆ ಎರಡು ಜಲಾಂತರ್ಗಾಮಿಗಳನ್ನು ಮಾರಾಟ ಮಾಡಿದೆ. ಈಗ, ನೌಕಾಪಡೆಯ ಮುಖ್ಯಸ್ಥ ಸುನಿಲ್ ಲಾಂಬಾ ಅವರು, ಥಾಯ್ಲೆಂಡಿಗೆ ಭೇಟಿ ನೀಡಿದ, ಅಲ್ಲಿನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವ ನಿರೀಕ್ಷೆ ಇದೆ. ಅಡ್ಮಿರಲ್ ಲಾಂಬಾ ಅವರ ಚೀನಾ ಭೇಟಿ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆದಿವೆ, ಆದರೆ ಅದು ರದ್ದಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಾಲ್ಡೀವ್ಸ್ ಕೂಡ, ಅದರಲ್ಲೂ ವಿಶೇಷವಾಗಿ ಇತ್ತೀಚಿಗೆ ಅಲ್ಲಿನ ಚುನಾವಣೆ ನಡೆದ ನಂತರ, ಭಾರತವು ತಲುಪಲು ಪ್ರಯತ್ನಿಸುತ್ತಿರುವ ಮತ್ತೊಂದು ದೇಶವಾಗಿದೆ ಮತ್ತು ಅದರಲ್ಲಿ ಯಶಸ್ವಿಯೂ ಆಗಿದೆ. ಮಾಲ್ಡೀವ್ಸ್ ಭಾರತದಿಂದ ಒಂದು ಡಾರ್ನಿಯರ್ ಅನ್ನು ಪಡೆದಿತ್ತು, ಅದನ್ನು ಏರ್ ಆಂಬ್ಯುಲೆನ್ಸ್ ಆಗಿ ಅಲ್ಲಿ ಬಳಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.