ನವದೆಹಲಿ: 2019ರ ಲೋಕಸಭಾ ಚುನಾವಣೆಯ ಬಿಸಿ ಅಮೆರಿಕಾವನ್ನೂ ಮುಟ್ಟಿದೆ. ಬಿಜೆಪಿ ಸಾಗರೋತ್ತದ ಪ್ರಚಾರ ಅಭಿಯಾನ ಅಮೆರಿಕಾದಲ್ಲಿ ಅದ್ಧೂರಿಯಾಗಿ ಆರಂಭಗೊಂಡಿದೆ. ಬಿಜೆಪಿಯ 39ನೇ ಸ್ಥಾಪನಾ ದಿನದಂದೇ ನ್ಯೂಯಾರ್ಕ್ ನಗರದಲ್ಲಿ ದೊಡ್ಡ ಮಟ್ಟದ ಸಮಾರಂಭವನ್ನು ಏರ್ಪಡಿಸಲಾಗಿತ್ತು, ಇದರಲ್ಲಿ ಅಪಾರ ಪ್ರಮಾಣದ ಅನಿವಾಸಿ ಭಾರತೀಯರು ಭಾಗಿಯಾಗಿದ್ದರು. ‘ಮೋದಿ ಬಾರ್ ಬಾರ್ (ಮೋದಿ ಮತ್ತೆ ಮತ್ತೆ), ‘ಅಬ್ಕಿ ಬಾರ್ 400 ಪಾರ್’ ಎಂಬಿತ್ಯಾದಿ ಉದ್ಘೋಷಗಳನ್ನು ಹಾಕಲಾಯಿತು.
2019ರ ಚುನಾವಣೆ ಭಾರತದ ಇತಿಹಾಸದಲ್ಲೇ ಅತ್ಯಂತ ಮಹತ್ವದ್ದಾಗಿದ್ದು, 900 ಮಿಲಿಯನ್ ಮತದಾರರು ದುರ್ಬಲ ಸರ್ಕಾರ ಬೇಕೇ ಅಥವಾ ಬಲಿಷ್ಠ ಸರ್ಕಾರ ಬೇಕೇ ಎಂಬುದನ್ನು ನಿರ್ಧಾರ ಮಾಡಲಿದ್ದಾರೆ ಎಂದು ಕಾರ್ಯಕ್ರಮದ ಅತಿಥಿಯಾಗಿದ್ದ ಅಮೆರಿಕನ್ ಇಂಡಿಯಾ ಪಬ್ಲಿಕ್ ಅಫೇರ್ಸ್ ಕಮಿಟಿ ಅಧ್ಯಕ್ಷ ಜಗದೀಶ್ ಸೆಹವಾನಿ ಹೇಳಿದ್ದಾರೆ. ಈಗಾಗಲೇ ಮತದಾರರು ನಿರ್ಣಾಯಕ ನಾಯಕ ಮೋದಿ ಬೇಕೆ ಅಥವಾ ನಾಯಕತ್ವವೇ ಇಲ್ಲದ ಮಹಾಘಟಬಂಧನ್ ಬೇಕೇ ಎಂಬುದನ್ನು ನಿರ್ಧರಿಸಿದ್ದಾರೆ ಎಂದರು. ವಂಶಾಡಳಿತ ಮತ್ತು ಅಭಿವೃದ್ಧಿಯ ನಡುವೆ ಅವರು ಆಯ್ಕೆ ಮಾಡಲಿದ್ದಾರೆ ಎಂದ ಅವರು, 50 ವರ್ಷಗಳ ಕಾಲ ಕಾಂಗ್ರೆಸ್ ಮಾಡದ ಸಾಧನೆಯನ್ನು ಐದು ವರ್ಷಗಳ ಅವಧಿಯಲ್ಲಿ ಮಾಡಿ ತೋರಿಸಿದ ನರೇಂದ್ರ ಮೋದಿಯವರ ನೇತೃತ್ವದ ಬಲಿಷ್ಢ ಸರ್ಕಾರವೇ ಜನರ ಆಯ್ಕೆಯಾಗಿದೆ ಎಂದರು.
ಎನ್ಡಿಎ ಸರಕಾರದ ಸಾಧನೆಯನ್ನು ಹೈಲೈಟ್ ಮಾಡಿದ ಸೆಹವಾನಿಯವರು, ಸರ್ಕಾರ 70 ದಶಲಕ್ಷ ಅನಿಲ ಸಿಲಿಂಡರ್ಗಳನ್ನು ಬಡವರಿಗೆ ನೀಡಿದೆ. 80 ಮಿಲಿಯನ್ ಶೌಚಾಲಯಗಳನ್ನು ನಿರ್ಮಿಸಿದೆ. 19000 ಗ್ರಾಮಗಳನ್ನು ವಿದ್ಯುದೀಕರಣಗೊಳಿಸಿದೆ. ಮೋದಿ ನಾಯಕತ್ವದಲ್ಲಿ ಭಾರತ ಜಾಗತಿಕ ಶಕ್ತಿಯಾಗಿ ಮಾರ್ಪಟ್ಟಿದೆ ಮತ್ತು ಇಂದು ವಿಶ್ವದ ಅಗ್ರ ಐದು ಆರ್ಥಿಕತೆಗಳಲ್ಲಿ ಒಂದಾಗಿದೆ. ಮೋದಿ ನಾಯಕತ್ವದಲ್ಲಿ ಭಾರತ ಸುರಕ್ಷಿತ ಮತ್ತು ಭದ್ರವಾಗಿದೆ ಎಂದರು.
26/11 ರಂದು ಮುಂಬೈನಲ್ಲಿ ನಡೆದ ಭಯೋತ್ಪಾದನಾ ದಾಳಿಯ ಘಟನೆಯನ್ನು ಸ್ಮರಿಸಿದ ಅವರು, ಕಾಂಗ್ರೆಸ್ಸಿನ ದುರ್ಬಲ ನಾಯಕತ್ವವು ಈ ದಾಳಿಗೆ ಪ್ರತ್ಯುತ್ತರ ನೀಡಲಿಲ್ಲ ಎಂದರು. ಆದರೆ ಮೋದಿಯವರ ನಿರ್ಣಾಯಕ ನಾಯಕತ್ವದಲ್ಲಿ ಕಾಶ್ಮೀರದ ಭಯೋತ್ಪಾದಕ ದಾಳಿಗಳಿಗೆ ಉತ್ತರ ನೀಡಲಾಗಿದೆ. ಅವರು ಅರ್ಥಮಾಡಿಕೊಳ್ಳುವ ಭಾಷೆಯಲ್ಲೇ ಪಾಕಿಸ್ತಾನಕ್ಕೆ ಪ್ರತಿಕ್ರಿಯೆ ನೀಡಲಾಗಿದೆ ಎಂದರು. ಭಾರತದ ಭದ್ರತೆಯು ಬಿಜೆಪಿಯ ಆದ್ಯತೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಮೋದಿಯವರ ಸರ್ಕಾರ ಭದ್ರ ಅಡಿಪಾಯವನ್ನು ಹಾಕಿಕೊಟ್ಟಿದೆ ಮತ್ತು ಮುಂದಿನ ಐದು ವರ್ಷಗಳಲ್ಲಿ ಭವ್ಯವಾದ ರಚನೆಯನ್ನು ನಿರ್ಮಾಣ ಮಾಡುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿರುವ ಸ್ನೇಹಿತರು ಮತ್ತು ಸಂಬಂಧಿಕರಿಗೆ ಇಮೇಲ್ ಕಳುಹಿಸಿ ಮತ್ತು ಅವರಿಗೆ ಮೋದಿಗೆ ಮತ ಹಾಕುವಂತೆ ತಿಳಿಸಿ ಎಂದು ಭಾರತೀಯ ಅಮೆರಿಕನ್ ಸಮುದಾಯಕ್ಕೆ ಸೆಹವಾನಿಯವರು ಕರೆ ನೀಡಿದರು. ಭಾರತದಲ್ಲಿನ ಸ್ನೇಹಿತರನ್ನು ತಲುಪಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುವಂತೆ ಅವರು ವಿನಂತಿಸಿದ್ದಾರೆ. ಈ ಮಹಾಯಜ್ಞದಲ್ಲಿ ಪ್ರತಿಯೊಬ್ಬರು ದಿನದ ಒಂದಿಷ್ಟು ಸಮಯವನ್ನು ಇದಕ್ಕಾಗಿ ವಿನಿಯೋಗಿಸಬೇಕು ಎಂದು ಕೋರಿದ್ದಾರೆ.
‘ಭಾರತ್ ಮಾತಾ ಕಿ ಜೈ’ ಮತ್ತು ‘ವಂದೇ ಮಾತರಂ’ ಘೋಷವಾಕ್ಯಗಳು ಕಾರ್ಯಕ್ರಮದುದ್ದಕ್ಕೂ ಮೊಳಗಿದವು.
ಸಭೆಯಲ್ಲಿ ಮಾತನಾಡಿದ ಇತರರೆಂದರೆ, ಬಾಬಿ ಕುಮಾರ್, ಡಾ ಯಶ್ಪಾಲ್ ಆರ್ಯ, ಅಂಬಾ ಶರ್ಮಾ. ಡಾ ದೀಪಕ್ ನಂದಿ, ಡಾ ರಾಜ್ ಭಯಾನಿ, ಅನಿಮೆ ಗೋಯೆಂಕಾ, ದರ್ಶನ್ ಬಾಗ್ಗ, ಪಿಂಕಿ ಜಗ್ಗಿ ಮತ್ತು ಜ್ಯೋತಿ ಗುಪ್ತಾ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.