ಲಕ್ನೋ: ಮುಸ್ಲಿಮರ ಮತಗಳು ಒಡೆಯಬಾರದು ಎಂದು ಇತ್ತೀಚಿಗೆ ಕರೆ ನೀಡಿರುವ ಬಹುಜನ ಸಮಾಜವಾದಿ ನಾಯಕಿ ಮಾಯಾವತಿಯವರಿಗೆ ತಿರುಗೇಟು ನೀಡಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಕಾಂಗ್ರೆಸ್, ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ‘ಅಲಿ’ಯ ಮೇಲೆ ನಂಬಿಕೆಯಿಡುತ್ತದೆ ಎಂದಾದರೆ, ನಾವೂ ಕೂಡ ‘ಭಜರಂಗಬಲಿ’ಯ ಮೇಲೆ ನಂಬಿಕೆಯಿಡುತ್ತೇವೆ ಎಂದಿದ್ದಾರೆ.
ಮೀರತ್ನಲ್ಲಿ ಚುನಾವಣಾ ಪ್ರಚಾರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವು ಶಹರಣ್ಪುರದಲ್ಲಿ ಮಾಯಾವತಿಯವರ ಭಾಷಣವನ್ನೂ ಕೇಳಿದ್ದೀರಾ ಎಂದು ಜನರಿಗೆ ಪ್ರಶ್ನಿಸಿದ್ದಾರೆ. ಹೌದು ಎಂದು ಸಭಿಕರು ಉತ್ತರಿಸಿದಾಗ, ಕಾಂಗ್ರೆಸ್, ಸಮಾಜವಾದಿ ಮತ್ತು ಬಹುಜನ ಸಮಾಜವಾದಿಗೆ ‘ಅಲಿ’ಯ ಮೇಲೆ ನಂಬಿಕೆ ಇದೆ ಎಂದಾದರೆ, ನಮಗೂ ಕೂಡ ಭಜರಂಗಬಲಿಯ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಭಜರಂಗಬಲಿಯ ಭಕ್ತರು ಎಂದಿಗೂ ಮಹಾಘಟಬಂಧನದ ನಾಯಕರನ್ನು ಸಹಿಸಿಕೊಳ್ಳುವುದಿಲ್ಲ ಎಂಬುದು ಅವರಿಗೆ ಮನವರಿಕೆಯಾಗಿದೆ ಎಂದಿರುವ ಯೋಗಿ, ಪಶ್ಚಿಮ ಉತ್ತರಪ್ರದೇಶದಲ್ಲಿ ಮಹಾಘಟಬಂಧನವನ್ನು ಸಂಪೂರ್ಣವಾಗಿ ತಿರಸ್ಕರಿಸುವಂತೆ ಜನರಿಗೆ ಕರೆ ನೀಡಿದ್ದಾರೆ.
‘ಮುಸ್ಲಿಂ ಸಮುದಾಯದವರು ತಮ್ಮ ಮತಗಳು ಒಡೆಯದಂತೆ ನೋಡಿಕೊಳ್ಳಬೇಕು. ಸಮಾಜವಾದಿ ಮತ್ತು ಆರ್. ಎಲ್. ಡಿ. ಪಕ್ಷಗಳ ಪರವಾಗಿ ಮತ ಹಾಕಿ ಅವರನ್ನು ಜಯಗಳಿಸುವಂತೆ ಮಾಡಬೇಕು’ ಎಂದು ಮಾಯವತಿ ಮುಸ್ಲಿಂ ಸಮುದಾಯಕ್ಕೆ ಇತ್ತೀಚಿಗೆ ಕರೆ ನೀಡಿದ್ದರು. ಅವರ ಈ ಕರೆಗೆ ಯೋಗಿಯವರು ‘ಭಜರಂಗಬಲಿ’ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
#WATCH UP Chief Minister Yogi Adityanath at a public rally in Meerut, says, “Agar Congress, SP, BSP ko ‘Ali’ par vishwaas hai toh humein bhi ‘Bajrangbali’ par vishwaas hai.” pic.twitter.com/ZwI3L5ZEFt
— ANI UP (@ANINewsUP) April 9, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.