ನವದೆಹಲಿ: ಜಮ್ಮು ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ, ಜಮ್ಮು ಕಾಶ್ಮೀರ ಲಿಬರೇಶನ್ ಫ್ರಾಂಟ್ ಮುಖ್ಯಸ್ಥ ಯಾಸಿನ್ ಮಲಿಕ್ನನ್ನು ಮಂಗಳವಾರ ರಾತ್ರಿ ನವದೆಹಲಿಯ ತಿಹಾರ್ ಜೈಲಿಗೆ ಕರೆತರಲಾಗಿದೆ. ರಾಷ್ಟ್ರೀಯ ತನಿಖಾ ದಳ (ಎನ್ಐಎ) ಈತನನ್ನು ಜಮ್ಮುವಿನ ಕೋಟ್ ಬಲ್ವಲ್ ಜೈಲಿನಿಂದ ತಿಹಾರ್ ಜೈಲಿಗೆ ಕರೆ ತಂದಿದ್ದು, ಗುರುವಾರ ಎನ್ಐಎ ನ್ಯಾಯಾಲಯದ ಮುಂದೆ ಹಾಜರುಪಡಿಸುವ ನಿರೀಕ್ಷೆ ಇದೆ.
ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ ಅನ್ನು ಭಯೋತ್ಪಾದನಾ ವಿರೋಧಿ ಕಾನೂನಿನಡಿ ನಿಷೇಧಕ್ಕೆ ಒಳಪಡಿಸಿದ ಬಳಿಕ ಮಲಿಕ್ನನ್ನು ಬಂಧಿಸಲಾಗಿತ್ತು. ಲಿಬರೇಶನ್ ಫ್ರಂಟ್ ಒಂದು ಪ್ರತ್ಯೇಕತಾವಾದಿ ಸಂಘಟನೆಯಾಗಿದ್ದು, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿತ್ತು. ಈ ಹಿನ್ನಲೆಯಲ್ಲಿ ಅದನ್ನು ನಿಷೇಧಿಸಲಾಗಿದೆ ಎಂದು ಗೃಹ ಕಾರ್ಯದರ್ಶಿ ರಾಜೀವ್ ಗೂಬಾ ತಿಳಿಸಿದ್ದಾರೆ.
ಮಲಿಕ್ ಕಾಶ್ಮೀರಿ ಪಂಡಿತರ ನರಮೇಧದ ಮಾಸ್ಟರ್ಮೈಂಡ್ ಆಗಿದ್ದ, ಈತನ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂ ಟ್ ಸಂಘಟನೆಯು ನಾಲ್ಕು ಐಎಎಸ್ ಅಧಿಕಾರಿಗಳನ್ನು ಹತ್ಯೆ ಮಾಡಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆಗೂ ಈ ಸಂಘಟನೆ ಹಣಕಾಸು ನೆರವು ನೀಡುತ್ತಿರುವ ಆರೋಪವಿದೆ. 1998ರ ಆಗಸ್ಟ್ 1ರಂದು ಕಾಶ್ಮೀರದಲ್ಲಿ 3 ಸರ್ಕಾರಿ ಕಟ್ಟಡಗಳನ್ನು ಇದು ಧ್ವಂಸ ಮಾಡಿತ್ತು. 1989ರಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮೊಹಮ್ಮದ್ ಯೂಸುಫ್ ಹಲ್ವಾಯಿ ಅನ್ನು ಇದು ಕೊಂದು ಹಾಕಿತ್ತು.
ಜಮಾತ್ ಇ ಇಸ್ಲಾಮಿ ಜಮ್ಮು ಕಾಶ್ಮೀರ ಸಂಘಟನೆಯನ್ನು ನಿಷೇಧಿಸಿದ ಮರುದಿನವೇ ಕೇಂದ್ರ ಸರ್ಕಾರ ಲಿಬರೇಶನ್ ಫ್ರಂಟ್ ಅನ್ನು ನಿಷೇಧಕ್ಕೊಳಪಡಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.