ನವದೆಹಲಿ: ಧಾರ್ಮಿಕ ಸ್ಥಳಗಳನ್ನು ಸರ್ಕಾರ ನಿರ್ವಹಣೆ ಮಾಡುತ್ತಿರುವುದಕ್ಕೆ ಸುಪ್ರೀಂಕೋರ್ಟ್ ಸೋಮವಾರ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಮೂರ್ತಿಗಳ ಕಳ್ಳತನದಂತಹ ಕೃತ್ಯಗಳನ್ನು ತಡೆಯಲು ಸೋತಿರುವ ಅಧಿಕಾರಗಳಿಗೂ ಛಾಟಿ ಬೀಸಿದೆ. ಧಾರ್ಮಿಕ ಸ್ಥಳಗಳನ್ನು ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಭಕ್ತಾದಿಗಳಿಗೇ ನೀಡಬೇಕು ಎಂದು ಅಭಿಪ್ರಾಯಿಸಿದೆ.
ನ್ಯಾ. ಎಸ್. ಎ. ಬೋಬ್ಡೆ ಮತ್ತು ಎಸ್. ಎ. ನಝೀರ್ ಅವರು, ಪುರಿ ಜಗ್ನನಾಥ ದೇವಾಲಯದಲ್ಲಿನ ಆಡಳಿತ ವೈಫಲ್ಯದ ವಿರುದ್ಧ ಹಾಕಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೊಳಪಡಿಸಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
2014ರ ಸುಪ್ರೀಂಕೋರ್ಟ್ನ ತೀರ್ಪನ್ನು ಉಲ್ಲೇಖ ಮಾಡಲಾಗಿದ್ದು, ಈ ತೀರ್ಪಿನಿಂದಾಗಿ 1,500 ವರ್ಷ ಹಳೆಯ ತಮಿಳುನಾಡಿನ ಚಿದಂಬರಂನಲ್ಲಿನ ನಟರಾಜ ದೇಗುಲದ ಆಡಳಿತವನ್ನು ತಮಿಳುನಾಡು ಸರ್ಕಾರದಿಂದ ವಾಪಾಸ್ ಪಡೆಯಲಾಗಿತ್ತು.
“ನಾವು ಚಿದಂಬರಂ ದೇವಾಲಯದ ವಿಷಯವನ್ನು ಪರಿಶೀಲಿಸಲು ಸಂದರ್ಭವನ್ನು ಎದುರಿಸಿದ್ದೇವೆ. ಸರ್ಕಾರಿ ಅಧಿಕಾರಿಗಳು ದೇವಸ್ಥಾನವನ್ನು ಯಾಕೆ ನಡೆಸಬೇಕು ಎಂದು ನನಗೆ ಗೊತ್ತಾಗುತ್ತಿಲ್ಲ. ತಮಿಳುನಾಡಿನಲ್ಲಿ ಹಲವಾರು ವಿಗ್ರಹಗಳ ಕಳ್ಳತನಗಳಾದ ಬಗ್ಗೆ ವರದಿಯಾಗಿದೆ. ಸರ್ಕಾರಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಧಾರ್ಮಿಕ ಭಾವನೆಗಳನ್ನು ಹೊರತುಪಡಿಸಿಯೂ, ಈ ವಿಗ್ರಹಗಳು ಅಮೂಲ್ಯವಾದವುಗಳು “ಎಂದು ನ್ಯಾಯಮೂರ್ತಿ ಬೋಬ್ಡೆ ಹೇಳಿದ್ದಾರೆ.
ಜಗನ್ನಾಥ ದೇಗುಲದಲ್ಲಿ ನೈರ್ಮಲ್ಯವನ್ನು ಸರಿಯಾಗಿ ಕಾಪಾಡಲಾಗುತ್ತಿಲ್ಲ, ದುರಾಡಳಿತ ಮಾಡಲಾಗುತ್ತಿದೆ ಎಂದು ಆರೋಪಿಸಿ ಸುಪ್ರೀಂಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.
ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್ ಅವರು ಕೂಡ ಸುಪ್ರೀಂ ಅಭಿಪ್ರಾಯಕ್ಕೆ ಸಹಮತವನ್ನು ವ್ಯಕ್ತಪಡಿಸಿದ್ದು, ಸರ್ಕಾರಗಳು ಧಾರ್ಮಿಕ ವಿಷಯದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.