ಸುಕ್ಮಾ: ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿಗಳಾಗಿರುವ ನಕ್ಸಲರ ವಿರುದ್ಧದ ಹೋರಾಟದಲ್ಲಿ ಭದ್ರತಾ ಪಡೆಗಳು ಮಹತ್ವದ ಗೆಲುವನ್ನು ಪಡೆಯುವತ್ತ ಮುನ್ನುಗ್ಗುತ್ತಿವೆ. ದೇಶದ ಇತರ ರಾಜ್ಯಗಳಲ್ಲಿ ಈ ಕೆಂಪು ಉಗ್ರರ ಅಟ್ಟಹಾಸ ಕಡಿಮೆಯಾಗಿದ್ದರೂ, ಛತ್ತೀಸ್ಗಢ ಈಗಲೂ ನಕ್ಸಲ್ ಸಮಸ್ಯೆಯಿಂದ ಬಳಲುತ್ತಿದೆ. ಆದರೀಗ ಅಲ್ಲೂ ಪರಿವರ್ತನೆಯ ಗಾಳಿ ಬೀಸುತ್ತಿದೆ. ಸೋಮವಾರ ಸುಮಾರು 34 ನಕ್ಸಲರು ಪೊಲೀಸರಿಗೆ ಶರಣಾಗತರಾಗಿದ್ದಾರೆ. ಇವರಲ್ಲಿ ಮೂರು ಮಂದಿ ಮಹಿಳೆಯರೂ ಸೇರಿದ್ದಾರೆ.
ಈ 34 ಮಂದಿ ನಕ್ಸಲ್ ಸಂಘಟನೆಯ ಕೆಳದರ್ಜೆಯ ಸದಸ್ಯರಾಗಿದ್ದರು. ಲೂಟಿ, ದರೋಡೆ, ಕೊಲೆಯಂತಹ ಅಪರಾಧಗಳಲ್ಲಿ ಇವರು ಭಾಗಿಯಾಗುತ್ತಿದ್ದರು. ಮನಿಕೊಂಟ, ಗಂಗಪಳ್ಳಿ, ಕೊಂಗ್ಡಮ್, ಮೆಟ್ಟಗುಡ ಮತ್ತು ಮೆರೈಗುಡಗಳಲ್ಲಿ ಇವರು ಅಪರಾಧ ಕೃತ್ಯಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದರು ಎಂದು ಹೇಳಲಾಗಿದೆ.
ಶರಣಾಗತರಾದವರ ಪೈಕಿ 17 ಮಂದಿಯ ವಿರುದ್ಧ ಖಾಯಂ ಅರೆಸ್ಟ್ ವಾರೆಂಟ್ ಜಾರಿಯಾಗಿತ್ತು. ಇದೀಗ ಇವರ ಬಂಧನದಿಂದ ನಕ್ಸಲ್ ವಿರೋಧಿ ಹೋರಾಟದಲ್ಲಿ ಮಹತ್ತರವಾದ ಜಯ ಪ್ರಾಪ್ತಿಯಾದಂತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.