ನವದೆಹಲಿ: ಅಬುಧಾಬಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೊತ್ತ ಮೊದಲ ಹಿಂದೂ ದೇಗುಲದ ಶಿಲಾನ್ಯಾಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಎಪ್ರಿಲ್ 19-20 ರಂದು ಮಾಡಲಿದ್ದಾರೆ. ಆದರೆ ಅಬುಧಾಬಿಗೆ ತೆರಳಿಯೇ ದೇಗುಲದ ಶಿಲಾನ್ಯಾಸವನ್ನು ಮಾಡಲಿದ್ದಾರಾ ಅಥವಾ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಡಲಿದ್ದಾರಾ ಎಂಬುದು ಈ ವಾರದ ಕೊನೆಯಲ್ಲಿ ಖಚಿತವಾಗಲಿದೆ.
ಮೋದಿಯವರು ಚುನಾವಣಾ ಕಾರ್ಯದಲ್ಲಿ ತುಂಬಾ ಬ್ಯೂಸಿಯಾಗಿದ್ದಾರೆ. ಇದರಿಂದಾಗಿ, ಅಬುಧಾಬಿಯಿಂದ 30 ನಿಮಿಷ ದೂರದಲ್ಲಿರುವ ಸ್ವಾಮಿ ನಾರಾಯಣ ದೇಗುಲದ ಶಿಲಾನ್ಯಾಸವನ್ನು ಅವರು ಅಲ್ಲಿಗೇ ತೆರಳುತ್ತಾರಾ ಎಂಬ ನಿರ್ಧಾರ ಅವರಿಗೇ ಬಿಟ್ಟಿದ್ದು ಎಂದು ಪ್ರಧಾನಿ ಸಚಿವಾಲಯದ ಮೂರು ಮಂದಿ ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿಯಾಗಿದೆ.
ಸ್ವಾಮಿ ನಾರಾಯಣ ದೇಗುಲದ ಉದ್ಘಾಟನೆ ಗುಜರಾತ್ ರಾಜ್ಯದ ಮೇಲೆ ಸಾಕಷ್ಟು ಪ್ರಭಾವ ಬೀರಲಿದೆ. 2015ರಲ್ಲಿ ಮೋದಿಯವರು ಅಬುಧಾಬಿಗೆ ತೆರಳಿದ್ದ ವೇಳೆ ಅಬುಧಾಬಿಯ ರಾಜ ದೇಗುಲ ನಿರ್ಮಾಣಕ್ಕೆ ಭೂಮಿಯನ್ನು ಒದಗಿಸಿದ್ದರು.
ಒಂದು ವೇಳೆ ದೇಗುಲ ಶಿಲಾನ್ಯಾಸಕ್ಕೆ ಮೋದಿಯವರು ಅಬುಧಾಬಿಗೆ ತೆರಳಿದರೆ, ಅವರಿಗೆ ಆ ರಾಷ್ಟ್ರ ಘೋಷಣೆ ಮಾಡಿರುವ ಕಿಂಗ್ ಝಯದ್ ಮೆಡಲ್ ಅನ್ನೂ ನೀಡಿ ಪುರಸ್ಕರಿಸಲಾಗುತ್ತದೆ. ಉಭಯ ದೇಶಗಳ ಬಾಂಧವ್ಯವನ್ನು ಗಟ್ಟಿಗೊಳಿಸಿದ್ದಕ್ಕೆ ಅವರಿಗೆ ಈ ಮೆಡಲ್ ಘೋಷಣೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.