ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಬಿಜೆಪಿ ‘ಸಂಕಲ್ಪ ಪತ್ರ’ವನ್ನು ಬಿಡುಗಡೆಗೊಳಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ರಾಷ್ಟ್ರೀಯತೆ ಬಿಜೆಪಿಯ ಪ್ರೇರಣೆ ಮತ್ತು ಉತ್ತಮ ಆಡಳಿತ ಬಿಜೆಪಿಯ ಮಂತ್ರ ಎಂದಿದ್ದಾರೆ.
ಬಿಜೆಪಿಯ ಸಂಕಲ್ಪ ಪತ್ರ, ಸ್ವಾತಂತ್ರ್ಯ ಸಿಕ್ಕ 100 ವರ್ಷಗಳ ಬಳಿಕ 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸುವ ಸಂಕಲ್ಪವನ್ನು ಹೊಂದಿದೆ. ಇದರಲ್ಲಿ 75 ಅತ್ಯಂತ ಮಹತ್ವದ ಟಾರ್ಗೆಟ್ಗಳನ್ನು ಇಡಲಾಗಿದೆ ಎಂದ ಅವರು, ಸರ್ಕಾರವನ್ನು ಜನರು ವಿಶ್ವಾಸಾರ್ಹವಾಗಿ ಇಡಬೇಕೆಂಬುದು ನಮ್ಮ ಆಶಯ ಎಂದಿದ್ದಾರೆ.
‘2022ರ ವೇಳೆಗೆ ಈಡೇರಿಸಲೇ ಬೇಕಾದ 75 ಗುರಿಗಳನ್ನು ನಾವು ಇಟ್ಟಿದ್ದೇವೆ, ಹೀಗಾಗಿ ಜನರೇ ನಮ್ಮ ಸರ್ಕಾರವನ್ನು ಈ ನಿಟ್ಟಿನಲ್ಲಿ ವಿಶ್ವಾಸಾರ್ಹವಾಗಿ ಇಡಬೇಕು ಎಂದು ನಾವು ಆಶಿಸುತ್ತೇವೆ’ ಎಂದಿದ್ದಾರೆ.
ಬಿಜೆಪಿಯ ಸಂಕಲ್ಪ ಪತ್ರವು “ಬಹು-ಪದರ ಮತ್ತು ಬಹು-ಆಯಾಮದ” ದಾಖಲೆಯಾಗಿದೆ, ಇದು ಸಮಾಜದ ಎಲ್ಲಾ ವಿಭಾಗಗಳ ನಿರೀಕ್ಷೆಗಳನ್ನು ಮತ್ತು ಆಕಾಂಕ್ಷೆಗಳನ್ನು ಬಗೆಹರಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಮೋದಿ ಹೇಳಿದರು.
ದೇಶ 100ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ನಿರ್ಮಾಣ ಮಾಡುವುದು ನಮ್ಮ ಗುರಿ ಎಂದಿದ್ದಾರೆ.
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕೆ ಭಾರತವನ್ನು ಬದಲಿಸುವ ನಮ್ಮ ಗುರಿ ನಮ್ಮದು. ಏರ್ ಕಂಡೀಶನಲ್ ಕೊಠಡಿಗಳಲ್ಲಿ ಕುಳಿತುಕೊಳ್ಳುವ ಬದಲು ನಾವು ತಳಮಟ್ಟದಲ್ಲಿ ಬಡತನದ ವಿರುದ್ಧ ಹೋರಾಡಲು ಬಯಸುತ್ತೇವೆ. ರಾಷ್ಟ್ರೀಯತಾವಾದವು ನಮ್ಮ ಸ್ಫೂರ್ತಿ ಮತ್ತು ಅಂತರ್ಗತವಾಗಿದೆ. ಉತ್ತಮ ಆಡಳಿತ ನಮ್ಮ ಮಂತ್ರವಾಗಿದೆ ಎಂದಿದ್ದಾರೆ.
“ನಾವು ಮೊದಲು ಜನರ ಅಗತ್ಯತೆಗಳನ್ನು ಈಡೇರಿಸಿದ್ದೇವೆ, ಈಗ ನಾವು ಅವರ ಆಕಾಂಕ್ಷೆಗಳನ್ನು ಪೂರೈಸುತ್ತೇವೆ” ಎಂದು ಪ್ರಧಾನ ಮಂತ್ರಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.