ನವದೆಹಲಿ: ‘ಮಿಷನ್ ಶಕ್ತಿ’ಯ ಮೂಲಕ DRDO ಅಭಿವೃದ್ಧಿಪಡಿಸಿದ ಕ್ಷಿಪಣಿ ನಿಗ್ರಹ ಉಪಗ್ರಹ ಎಸ್ಯಾಟ್ ಅನ್ನು ಯಶಸ್ವಿಯಾಗಿ ಪ್ರಯೋಗಿಸಿದ ಭಾರತ, ನಾಲ್ಕನೇ ಬಾಹ್ಯಾಕಾಶ ಶಕ್ತಿಯಾಗಿ ಹೊರಹೊಮ್ಮಿದೆ. ಕೇವಲ 3 ನಿಮಿಷದಲ್ಲಿ ಭಾರತವು, ಭೂಮಿಯಿಂದ 300 ಕಿಲೋಮೀಟರ್ ದೂರದಲ್ಲಿದ್ದ ಉಪಗ್ರಹವನ್ನು ಎಸ್ಯಾಟ್ ಮೂಲಕ ಹೊಡೆದುರುಳಿಸಿತ್ತು. ಇಸ್ರೋ ವಿಜ್ಞಾನಿಗಳ ಪರಿಶ್ರಮವನ್ನು ಎಲ್ಲರೂ ಕೊಂಡಾಡಿದ್ದರು.
ಭಾರತದ ಈ ಯಶಸ್ಸಿಗೆ ವಿದೇಶಗಳ ವಿರೋಧಗಳೂ ಕೇಳಿ ಬಂದಿದ್ದವು. ಭಾರತದ ಪ್ರಯೋಗದಿಂದಾಗಿ ಬಾಹ್ಯಾಕಾಶದಲ್ಲಿ 400ಕ್ಕೂ ಅಧಿಕ ಅವಶೇಷಗಳು ಸೃಷ್ಟಿಯಾಗಿದೆ, ಇದರಿಂದ ಭವಿಷ್ಯದಲ್ಲಿ ಗಗನಯಾನ ಕೈಗೊಳ್ಳುವವರಿಗೆ ದೊಡ್ಡ ಹಾನಿಯಾಗಲಿದೆ, ಮಿಷನ್ ಶಕ್ತಿ ಅನುಷ್ಠಾನದ ವೇಳೆ ಭಾರತ ಸುರಕ್ಷತಾ ಕ್ರಮ ಪಾಲಿಸಿಲ್ಲ ಎಂದೆಲ್ಲಾ ನಾಸಾ ಕೊಂಕು ಮಾತನ್ನಾಡಿತ್ತು.
ನಾಸಾದ ಕೊಂಕು ಮಾತಿಗೆ DRDO ಮುಖ್ಯಸ್ಥ ಸತೀಶ್ ರೆಡ್ಡಿ ತಿರುಗೇಟು ನೀಡಿದ್ದಾರೆ. ಮಾಧ್ಯಮಗಳಿಗೆ ಮಿಷನ್ ಶಕ್ತಿಯ ತಾಂತ್ರಿಕ ಆಯಾಮದ ಬಗ್ಗೆ ವಿವರಣೆ ನೀಡಿರುವ ಅವರು, ಮಿಷನ್ ಶಕ್ತಿಯ ವೇಳೆ ಸೃಷ್ಟಿಯಾಗಿರುವ 400ಕ್ಕೂ ಅಧಿಕ ಅವಶೇಷಗಳು ಇನ್ನು 45 ದಿನಗಳಲ್ಲಿ ನಾಶವಾಗುತ್ತವೆ, ಈ ಬಗ್ಗೆ ನಾಸಾ ಚಿಂತಿಸುವ ಅಗತ್ಯವಿಲ್ಲ ಎಂದಿದ್ದಾರೆ. ಅಲ್ಲದೇ ಎಲ್ಲಾ ಸುರಕ್ಷತಾ ಕ್ರಮವನ್ನು ಅನುಸರಿಸಿಯೇ ಈ ಪ್ರಯೋಗ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
‘ಕ್ಷಿಪಣಿ ಪ್ರಯೋಗದಿಂದ ಉಂಟಾಗಿರುವ ಅವಶೇಷಗಳು ಕೆಲವೇ ವಾರದಲ್ಲಿ ಭೂಮಿಯ ವಾತಾವರಣ ತಲುಪುತ್ತವೆ. ಆ ಬಳಿಕ ಅವು ಭೂಮಿಯ ಗುರುತ್ವಾಕರ್ಷಣೆಯ ಒತ್ತಡಕ್ಕೆ ಸಿಲುಕಿ ವಾತಾವರಣದಲ್ಲೇ ಸುಟ್ಟು ಬೂದಿಯಾಗುತ್ತದೆ. ಇದರಿಂದ ಯಾವುದೇ ರೀತಿಯ ಅಪಾಯವಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.