ಫಿಲ್ಬಿಟ್: ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ದೇಶಕ್ಕೆ ತಂದಷ್ಟು ವೈಭವವನ್ನು, ನನ್ನ ಕುಟುಂಬದವರೂ ಸೇರಿದಂತೆ ಯಾವೊಬ್ಬ ಹಿಂದಿನ ಪ್ರಧಾನಿಗಳೂ ತಂದಿಲ್ಲ ಎಂಬುದಾಗಿ ಬಿಜೆಪಿ ಮುಖಂಡ ವರುಣ್ ಗಾಂಧಿ ಹೇಳಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮೊಮ್ಮಗನಾಗಿರುವ ವರುಣ್, ಭಾನುವಾರ ತಾವು ಲೋಕಸಭೆಗೆ ಸ್ಪರ್ಧಿಸುತ್ತಿರುವ ಫಿಲ್ಬಿಟ್ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರವನ್ನು ನಡೆಸಿದರು. ಫಿಲ್ಬಿಟ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧೆ ನಡೆಸುತ್ತಿದ್ದಾರೆ.
‘ವಾಜಪೇಯಿ ಅವರು ಸಾಮಾನ್ಯ ಕುಟುಂಬದಿಂದ ಬಂದವರು ಆದರೆ ನಿಜವಾದ ಬಡತನವನ್ನು ಅವರು ನೋಡಿರಲಿಲ್ಲ, ಮೋದಿ ಜೀ ಅವರು ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದಿದ್ದೇವೆ. ಪ್ರಮಾಣಿಕವಾಗಿ ಹೇಳಬೇಕೆಂದರೆ, ನನ್ನ ಕುಟುಂಬದ ಕೆಲವರೂ ಪ್ರಧಾನಿಗಳಾಗಿದ್ದಾರೆ ಆದರೆ ಮೋದಿಯವರು ದೇಶಕ್ಕೆ ತಂದುಕೊಟ್ಟ ಗೌರವವನ್ನು ಹಿಂದಿನ ಯಾರೂ ತಂದುಕೊಟ್ಟಿಲ್ಲ’ ಎಂದು ವರುಣ್ ಹೇಳಿದ್ದಾರೆ.
‘ಮೋದಿಯವರು ಬಡವರ ಕಲ್ಯಾಣಕ್ಕೆ ಬದ್ಧರಾಗಿದ್ದಾರೆ ಮತ್ತು ಅದಕ್ಕಾಗಿ ಸಾಯಲೂ ಅವರು ಸಿದ್ಧರಿದ್ದಾರೆ. ಯಾಕೆಂದರೆ ಅವರಿಗೆ ಬೇರೆ ಅಜೆಂಡಾಗಳಿಲ್ಲ. ಅವರ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪಗಳಿಲ್ಲ. ಅವರಿಗೆ ಕುಟುಂಬವೇ ಇಲ್ಲ, ಹೀಗಿರುವಾಗ ಯಾರಿಗಾಗಿ ಅವರು ಭ್ರಷ್ಟಾಚಾರ ಮಾಡುತ್ತಾರೆ. ಅವರು ದೇಶಕ್ಕಾಗಿ ಬದುಕುತ್ತಿರುವವರು ಮತ್ತು ದೇಶಕ್ಕಾಗಿ ಸಾಯಲೂ ಸಿದ್ಧರಿರುವವರು. ಅವರಿಗೆ ದೇಶದ ಬಗ್ಗೆ ಮಾತ್ರ ಚಿಂತೆ ಇದೆ’ ಎಂದಿದ್ದಾರೆ.
ಫಿಲ್ಬಿಟ್ ಕ್ಷೇತ್ರವನ್ನು ಹಲವು ವರ್ಷಗಳಿಂದ ಮೇನಕಾ ಗಾಂಧಿ ಅವರು ಪ್ರತಿನಿಧಿಸುತ್ತಾ ಬಂದಿದ್ದಾರೆ. ಈ ಬಾರಿ ಅವರ ಮಗ ವರುಣ್ ಅಲ್ಲಿಂದ ಸ್ಪರ್ಧೆ ನಡೆಸುತ್ತಿದ್ದಾರೆ. ಎಪ್ರಿಲ್ 23ರಂದು ಅಲ್ಲಿ ಚುನಾವಣೆ ನಡೆಯಲಿದ್ದು, ಮೇ.23ಕ್ಕೆ ಮತಯೆಣಿಕೆ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.