ಸುಂದರ್ಘರ್: ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಕೆಲವು ಪಕ್ಷಗಳು ಕುಟುಂಬ ಮತ್ತು ಹಣದಿಂದಾಗಿ ಬೆಳೆದಿದ್ದರೆ, ಬಿಜೆಪಿ ಪಕ್ಷ ಕಾರ್ಯಕರ್ತರ ಬೆವರು ಮತ್ತು ರಕ್ತದಿಂದ ಬೆಳೆದಿದೆ ಎಂದಿದ್ದಾರೆ.
ಒರಿಸ್ಸಾದ ಸುಂದರ್ಘರ್ನಲ್ಲಿ ಚುನಾವಣಾ ಪ್ರಚಾರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೆಲವು ಪಕ್ಷಗಳು ಕುಟುಂಬ ಬಲ ಮತ್ತು ಹಣದ ಆಧಾರದಲ್ಲಿ ಬೆಳೆದು ಬಂದಿವೆ. ಆದರೆ ನಮ್ಮ ಪಕ್ಷ ಕಾರ್ಯಕರ್ತರ ಬೆವರು ಮತ್ತು ರಕ್ತದಿಂದ ಬೆಳೆದು ಬಂದಿದೆ. ಬಿಜೆಪಿಗಾಗಿ ಕಾರ್ಯಕರ್ತರು ಕೇವಲ ಬೆವರನ್ನು ಮಾತ್ರ ಸುರಿಸಲಿಲ್ಲ, ಬದಲಾಗಿ ಜೀವ ತ್ಯಾಗವನ್ನೂ ಮಾಡಿದ್ದಾರೆ. ಕೇರಳ ಮತ್ತು ಬಂಗಾಳದಲ್ಲಿ ನಮ್ಮ ಕಾರ್ಯಕರ್ತರನ್ನು ಅಮಾನುಷವಾಗಿ ಹತ್ಯೆ ಮಾಡಲಾಗುತ್ತಿದೆ. ಆದರೆ ಆ ಕೃತ್ಯಗಳು ದೇಶಕ್ಕಾಗಿ ಪರಿಶ್ರಮಪಡುವ ಉತ್ಸಾಹವನ್ನು ಕುಗ್ಗಿಸಿಲ್ಲ’ ಎಂದಿದ್ದಾರೆ.
ಒರಿಸ್ಸಾದ ಬಿಜು ಜನತಾ ದಳ ಪಕ್ಷದ ವಿರುದ್ಧ ಹರಿಹಾಯ್ದ ಅವರು, ನವೀನ್ ಪಟ್ನಾಯಕ್ ನೇತೃತ್ವದ ಸರ್ಕಾರದ ಉದ್ದೇಶಗಳು ಸರಿಯಿಲ್ಲ ಎಂದಿದ್ದಾರೆ.
‘ಸರ್ಕಾರದ ಉದ್ದೇಶ ಸರಿಯಾಗಿದ್ದಿದ್ದರೆ, ನಿಮ್ಮ ಚೌಕಿದಾರ ಘೋಷಣೆ ಮಾಡಿದ್ದ ಹೆಚ್ಚುವರಿ ಬೆಂಬಲ ಬೆಲೆ ಇಲ್ಲಿನ ರೈತರಿಗೆ ಸಿಗುತ್ತಿತ್ತು. ಉದ್ದೇಶ ಸರಿಯಾಗಿದ್ದರೆ, ಆಯುಷ್ಮಾನ್ ಯೋಜನೆಯ ಸವಲತ್ತು ನಿಮಗೆ ಸಿಗುತ್ತಿತ್ತು’ ಎಂದಿದ್ದಾರೆ.
‘ನಮ್ಮ ನೀತಿಗಳು ಮತ್ತು ಉದ್ದೇಶಗಳು ಎರಡೂ ಸರಿಯಾಗಿವೆ. ಅದೇ ಕಾರಣಕ್ಕೆ ನಾವು ಬಡವರ ಪರವಾಗಿ, ದೀನ ದಲಿತರ ಪರವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದೇವೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.