ನವದೆಹಲಿ: ಭಯೋತ್ಪಾದನೆ ಒಂದು ಸಮಸ್ಯೆಯೇ ಅಲ್ಲ ಎಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿರುಗೇಟು ನೀಡಿದ್ದಾರೆ. ಒಂದು ವೇಳೆ ಭಯೋತ್ಪದನೆ ಸಮಸ್ಯೆ ಅಲ್ಲ ಎಂದಾದರೆ, ನಿಮಗೆ ನೀಡಲಾಗಿರುವ ಎಸ್ಪಿಜಿ ಸೆಕ್ಯೂರಿಟಿಯನ್ನು ಹಿಂದಕ್ಕೆ ಕಳುಹಿಸಿಕೊಡಿ ಎಂದಿದ್ದಾರೆ.
‘ರಾಹುಲ್ ಹೇಳುತ್ತಾರೆ ಉದ್ಯೋಗ ಒಂದು ಸಮಸ್ಯೆ, ಭಯೋತ್ಪಾದನೆ ಸಮಸ್ಯೆ ಅಲ್ಲ ಎಂದು. ನಾನು ಅವರಿಗೆ ಏನು ಹೇಳ ಬಯಸುತ್ತೇನೆ ಎಂದರೆ, ಒಂದು ವೇಳೆ ಭಯೋತ್ಪಾದನೆ ಸಮಸ್ಯೆ ಅಲ್ಲ ಎಂದಾದರೆ, ಯಾಕೆ ನೀವು ಎಸ್ಪಿಜಿ ಸೆಕ್ಯೂರಿಟಿಯಲ್ಲೇ ಓಡಾಡುತ್ತೀರಿ? ರಾಜೀವ್ ಗಾಂಧಿಯವರ ಹತ್ಯೆ ನಡೆದ ಬಳಿಕ ನಿಮ್ಮ ಇಡೀ ಕುಟುಂಬವೇ ಯಾಕೆ ಎಸ್ಪಿಜಿ ಭದ್ರತೆಯಡಿ ಇದೆ? ಎಂದು ಪ್ರಶ್ನಿಸಿದ್ದಾರೆ.
‘ನಿಮಗೆ ಭಯೋತ್ಪಾದನೆ ಸಮಸ್ಯೆಯೇ ಅಲ್ಲ ಎಂದೆನಿಸಿದರೆ, ನೀವು ಮನವಿ ಸಲ್ಲಿಸಿ ಎಸ್ಪಿಜಿ ಭದ್ರತೆಗೆ ನನ್ನ ಸಹಮತವಲ್ಲ ಎನ್ನಿ, ಅದನ್ನು ವಾಪಾಸ್ ಕಳುಹಿಸಿ, ಯಾಕೆಂದರೆ ನಿಮಗೆ ದೇಶದಲ್ಲಿ ಭಯೋತ್ಪಾದನೆ ಇಲ್ಲ ಎಂದೆನಿಸುತ್ತಿದೆಯಲ್ಲವೇ ಮತ್ತು ನಿಮಗೆ ಯಾರ ಭಯವೂ ಇಲ್ಲವಲ್ಲವೇ?’ ಎಂದಿದ್ದಾರೆ.
ಭಾರತ ಪಾಕಿಸ್ಥಾನ ಉಗ್ರ ಶಿಬಿರಗಳ ಮೇಲೆ ನಡೆಸಿದ ದಾಳಿಗೆ ವಿಶ್ವ ಸಮುದಾಯ ಬೆಂಬಲವನ್ನು ನೀಡಿದೆ, ವಿವಿಧ ನಾಯಕರು ನನಗೆ ಫೋನಾಯಿಸಿ ಭಾರತದ ದಿಟ್ಟ ನಿರ್ಧಾರಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎಂದರು.
2008ರಲ್ಲಿ ಮುಂಬಯಿ ದಾಳಿಯಾದಾಗ ಯುಪಿಎ ಸರ್ಕಾರ ಇಂತಹುದೇ ಕ್ರಮವನ್ನು ಜರುಗಿಸಬೇಕಿತ್ತು ಎಂದು ಅವರು ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.