ಬೆಂಗಳೂರು: 2018ರ ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್ಸಿ)ಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಐಐಟಿ ಬಾಂಬೆ ಇಂಜಿನಿಯರ್ ಕನಿಷ್ಕ್ ಕಟಾರಿಯಾ ದೇಶಕ್ಕೆ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ. ಕರ್ನಾಟಕದ ಒಟ್ಟು 24 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಧಾರವಾಡದ ರಾಹುಲ್ ಶರಣಪ್ಪ ಸಂಕನೂರ ಅವರು 17ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರನ್ನು ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಇತರ ಕೇಂದ್ರ ಸರ್ಕಾರಿ ಸೇವೆಗಳಿಗೆ ನೇಮಕಗೊಳಿಸಲಾಗುತ್ತದೆ.
ದೇಶಕ್ಕೆ ಮೊದಲ ಸ್ಥಾನವನ್ನು ಪಡೆದುಕೊಂಡಿರುವ ಕಟಾರಿಯಾ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು, ಗಣಿತವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡು ಮೊದಲ ರ್ಯಾಂಕ್ ಅನ್ನು ಪಡೆದುಕೊಂಡಿದ್ದಾರೆ.
ಈ ಬಾರಿ ಒಟ್ಟು 759 ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅದರಲ್ಲಿ 577 ಪುರುಷರು ಹಾಗೂ 182 ಮಹಿಳಾ ಅಭ್ಯರ್ಥಿಗಳಿದ್ದಾರೆ.
ಯುಪಿಎಸ್ಸಿಯಲ್ಲಿ ತೇರ್ಗಡೆಯಾಗಿ ರಾಜ್ಯಕ್ಕೆ ಹೆಮ್ಮೆ ತಂದ ಅಭ್ಯರ್ಥಿಗಳೆಂದರೆ-ರಾಹುಲ್ ಶರಣಪ್ಪ ಶಂಕನೂರ 17ನೇ ರ್ಯಾಂಕ್, ಲಕ್ಷ್ಮೀ ಎನ್. 45ನೇ ರ್ಯಾಂಕ್, ಆಕಾಶ್ ಎಸ್. 78ನೇ ರ್ಯಾಂಕ್, ಕೃತುಕಕಾ 100ನೇ ರ್ಯಾಂಕ್, ಕೌಶಿಕ್ ಎಚ್. ಆರ್. 240 ನೇ ರ್ಯಾಂಕ್, ವಿವೇಕ್ ಎಚ್. ಬಿ. 257ನೇ ರ್ಯಾಂಕ್, ನಿವೇದಿತಾ 303 ನೇ ರ್ಯಾಂಕ್, ಗಿರೀಶ್ ಧರ್ಮರಾಜ್ ಕಲಗೊಂಡ್ 307 ನೇ ರ್ಯಾಂಕ್, ಮಿರ್ಜಾ ಖಾದರ್ ಬೈಗಿ 336ನೇ ರ್ಯಾಂಕ್, ತೇಜಸ್ ಯು.ಪಿ. 338ನೇ ರ್ಯಾಂಕ್, ಹರ್ಷವರ್ಧನ್ ಬಿ.ಜೆ. 352ನೇ ರ್ಯಾಂಕ್, ಪಕಿರೇಶ್ ಕಲ್ಲಪ್ಪ ಬಾದಾಮಿ 372ನೇ ರ್ಯಾಂಕ್, ಡಾ. ನಾಗಾರ್ಜುನ ಗೌಡ 418ನೇ ರ್ಯಾಂಕ್, ಅಶ್ವಿಜಾ ಬಿ. ವಿ. 423 ನೇ ರ್ಯಾಂಕ್ , ಮಂಜುನಾಥ್ ಆರ್. 495 ನೇ ರ್ಯಾಂಕ್, ಬ್ರಿಂದಾ ಎಸ್. 496 ನೇ ರ್ಯಾಂಕ್ , ಹೇಮಂತ್ 612 ನೇ ರ್ಯಾಂಕ್, ಶೃತಿ ಎಂ. ಕೆ. 637ನೇ ರ್ಯಾಂಕ್, ವೆಂಕಟ್ ರಾಮ್ 694 ನೇ ರ್ಯಾಂಕ್, ಸಂತೋಷ ಹೆಚ್. 753 ನೇ ರ್ಯಾಂಕ್, ಅಶೋಕ್ ಕುಮಾರ್ ಎಸ್. 711 ನೇ ರ್ಯಾಂಕ್, ರಾಘವೇಂದ್ರ ಎನ್. 739 ನೇ ರ್ಯಾಂಕ್, ಶಶಿಕಿರಣ್ 754 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.