ಅಮ್ರೋಹ: ಭಾರತ ಭಯೋತ್ಪಾದಕರಿಗೆ ತಿರುಗೇಟು ನೀಡಿದಾಗ ಕೆಲವರ ನಿದ್ರೆ ಹಾಳಾಗುತ್ತದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿಯವರು, ಪ್ರತಿಪಕ್ಷಗಳು ದೇಶದ ಜನರ ಭವಿಷ್ಯ ಮತ್ತು ಬದುಕು ಎರಡನ್ನೂ ಅಪಾಯಕ್ಕೆ ದೂಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಉತ್ತರಪ್ರದೇಶದ ಅಮ್ರೋಹದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಉಗ್ರರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ನೀಡಿರುವುದನ್ನು ಕೆಲವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ’ ಎಂದಿದ್ದಾರೆ.
‘ಉಗ್ರರ ದಾಳಿಯ ಬಳಿಕ, ನಾನು ಮೌನವಾಗಿರಬೇಕೇ ಅಥವಾ ಪ್ರತ್ಯುತ್ತರ ನೀಡಬೇಕಿತ್ತೇ? ಎಂದು ಜನರಿಗೆ ಕೇಳಿದರು.
‘ಉಗ್ರರಿಗೆ ಅವರದ್ದೇ ಭಾಷೆಯಲ್ಲಿ ಉತ್ತರವನ್ನು ನೀಡಲಾಗಿದೆ, ಇದು ಕೆಲವು ಜನರ ನಿದ್ರೆಯನ್ನೇ ಕಸಿದುಕೊಂಡಿದೆ’ ಎಂದರು.
ಇಡೀ ಜಗತ್ತಿನ ಮುಂದೆ ಪಾಕಿಸ್ಥಾನದ ಮುಖವಾಡ ಕಳಚಿ ಬಿದ್ದರೂ, ನಮ್ಮ ದೇಶದ ಕೆಲವರು ಅದರ ಪರವಾಗಿ ಮಾತನಾಡುತ್ತಿದ್ದಾರೆ ಎಂದರು.
ಮಾಯಾವತಿ ಮತ್ತು ಅಖಿಲೇಶ್ ಅವರ ಸರ್ಕಾರಗಳು ಉಗ್ರ ಆರೋಪಿಗಳ ಮೇಲೆ ಅನುಕಂಪ ತೋರಿಸಿ ಅವರನ್ನು ಬಿಡುಗಡೆ ಮಾಡಿವೆ ಎಂದರು.
ಐದು ವರ್ಷಗಳ ಅಧಿಕಾರಾವಧಿಯಲ್ಲಿ ನಾನೆಂದೂ ದೇಶವನ್ನು ತಲೆ ತಗ್ಗುವಂತೆ ಮಾಡಿಲ್ಲ, ಹಿಂದೆಂದಿಗಿಂತಲೂ ದೇಶದ ಗೌರವ ಮತ್ತು ಚಿತ್ರಣ ಎತ್ತರಕ್ಕೆ ಹೋಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.