ನವದೆಹಲಿ: ಭಾರತೀಯ ರೈಲ್ವೇಯು 2030 ರ ವೇಳೆಗೆ ಸರಕು ಸಾಗಣೆಯ ಕನಿಷ್ಠ ಶೇ.50ರಷ್ಟು ಪಾಲನ್ನು ಪಡೆಯುವ ಗುರಿಯನ್ನು ಹೊಂದಿದೆ. ಸರಕು ಸಾಗಣೆ ಸಂಚಾರದಲ್ಲಿ ರೈಲ್ವೆಗಳ ಪಾಲು 2015 ರಲ್ಲಿ 33% ಕ್ಕೆ ಇಳಿದಿದೆ, ಇದು 1950-51ರಲ್ಲಿ 86.2% ರಷ್ಟು ಇತ್ತು. ಮೀಸಲಾಗಿರುವ ಸರಕು ಕಾರಿಡಾರ್ಗಳು ಮತ್ತು ಅಸ್ತಿತ್ವದಲ್ಲಿರುವ ಯೋಜನೆಗಳ ವಿಸ್ತರಣೆಯು ರೈಲ್ವೆಗಳಿಗೆ ಪಾಲನ್ನು ಪಡೆಯುವ ನಿಟ್ಟಿನಲ್ಲಿ ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ. “2030 ರ ಹೊತ್ತಿಗೆ ರಾಷ್ಟ್ರದ ಸರಕುಗಳ ಅರ್ಧದಷ್ಟು ಭಾಗವನ್ನು ಪಡೆದುಕೊಳ್ಳುವ ಗುರಿಯನ್ನು ಇಡಲಾಗಿದೆ. ಪ್ರಸ್ತುತ ದೇಶದ ಸರಕುಗಳಲ್ಲಿ ಶೇ.33 ರಷ್ಟನ್ನು ಮಾತ್ರ ರೈಲ್ವೇ ಹೊಂದಿದೆ’ ಎಂದು ಅಧಿಕೃತ ಮೂಲಗಳು ತಿಳಿಸಿವೆ.
2030ರ ವೇಳೆಗೆ ದೂರದೃಷ್ಟಿಯ ದಾಖಲೆಯನ್ನು ಹೊಂದುವ ಸಲುವಾಗಿ ಭಾರತೀಯ ರೈಲ್ವೆ ಮಂಡಳಿಯು ಅಕ್ಟೋಬರ್ ತಿಂಗಳಲ್ಲಿ ಸಮಿತಿಯೊಂದನ್ನು ರಚಿಸಿದೆ. ಗುರಿಯನ್ನು ಸಾಧಿಸಲು ಹೆಚ್ಚು ಖಾಸಗಿ ವಲಯ ಪಾಲ್ಗೊಳ್ಳುವಿಕೆಯು ಅವಶ್ಯಕವಾಗಿದೆ ಎಂದು ಸಮಿತಿಯು ಶಿಫಾರಸು ಮಾಡಿದೆ, ಸಮಿತಿಯ ಶಿಫಾರಸುಗಳು ಸಾರ್ವಜನಿಕರಿಗೆ ತೆರೆಯುವ ಮೊದಲು ರೈಲ್ವೇ ಮಂಡಳಿಯ ಅನುಮೋದನೆಯನ್ನು ಪಡೆಯಬೇಕಾಗುತ್ತದೆ.
ಅಸ್ತಿತ್ವದಲ್ಲಿರುವ ನೆಟ್ವರ್ಕ್ ವಿಸ್ತರಣೆಯು 505 ಯೋಜನೆಗಳೊಂದಿಗೆ ಉನ್ನತಮಟ್ಟದಲ್ಲಿದೆ – 263 ಡಬಲ್ಲಿಂಗ್, 185 ಹೊಸ ಲೈನ್ಗಳು ಮತ್ತು 57 ಗೇಜ್ ಪರಿವರ್ತನೆಗಳು ವಿವಿಧ ಹಂತಗಳಲ್ಲಿ ಅನುಷ್ಠಾನಗೊಳ್ಳಲಿದೆ. ಆದರೂ, ರೈಲ್ವೇಯ ಪಾಲನ್ನು ಹೆಚ್ಚಿಸುವ ಪ್ರಮುಖ ಮಾರ್ಗವು ಮೀಸಲಾದ ಸರಕು ಕಾರಿಡಾರ್ ಗಳಲ್ಲಿದೆ. “ಮೀಸಲಾದ ಸರಕು ಕಾರಿಡಾರ್ಗಳ ಕಾಮಗಾರಿ ಪೂರ್ಣಗೊಳಿಸಲು ತಕ್ಷಣ ಗಮನ ನೀಡಲಾಗುವುದು. ಪಶ್ಚಿಮ ಮತ್ತು ಪೂರ್ವದ ಸರಕು ಸಾಗಣೆ ಕಾರಿಡಾರ್ಗಳು 2022 ರ ವೇಳೆಗೆ ಸುಮಾರು 144 ಮಿಲಿಯನ್ ಟನ್ಗಳಷ್ಟು (ಮಿ.ಟಿ.) ರೈಲ್ವೆಯ ಸಂಚಾರವನ್ನು ಹೆಚ್ಚಿಸಲು ಪ್ರಮುಖವಾಗಿವೆ “ಎಂದು ಅಧಿಕೃತ ಮೂಲಗಳು ತಿಳಿಸಿದೆ. ಎರಡು ಮೀಸಲು ಸರಕು ಕಾರಿಡಾರ್ ಗಳ ವೆಚ್ಚ 81,459 ಕೋಟಿ ರೂ. ಮತ್ತು ರೈಲ್ವೆಯು ಇದುವರೆಗೆ ಇದಕ್ಕಾಗಿ 45,000 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ.
ವೆಸ್ಟರ್ನ್ ಇಂಡಿಯಾ ಯೋಜನೆಗೆ ಜಪಾನ್ ಅಂತಾರಾಷ್ಟ್ರೀಯ ಸಹಕಾರ ಏಜೆನ್ಸಿಯು ರೂ. 387.22 ಬಿಲಿಯನ್ ಡಾಲರ್ ಸಾಲ ನೀಡಲಿದೆ. ಈಸ್ಟರ್ನ್ ಡಿಎಫ್ಸಿ (ಪೂರ್ವ ಮೊಹಲಸುರೈ-ಅಲಹಾಬಾದ್-ಕಾನ್ಪುರ್-ಖುರ್ಜಾ-ದಾದ್ರಿ ಮತ್ತು ಖುರ್ಜಾ-ಲುಧಿಯಾನಾ) ಯೋಜನೆಗೆ ವಿಶ್ವ ಬ್ಯಾಂಕಿನಿಂದ 2.360 ಶತಕೋಟಿ $ ನಷ್ಟು ಸಾಲವನ್ನು ಪಡೆಯಲಾಗುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಸರಕಾರವು ಸಾಲಗಳ ಲಭ್ಯತೆಯನ್ನು ಖಾತರಿಪಡಿಸಿದೆ. ಎಪ್ರಿಲ್ 2020 ರೊಳಗೆ ರೈಲ್ವೇಯು ಡಬ್ಲ್ಯೂಡಿಎಫ್ಸಿ ಮತ್ತು ಇಡಿಎಫ್ಸಿ ಯೋಜನೆಯನ್ನು ಆರಂಭಿಸಲು ನಿರ್ಧರಿಸಿದೆ. ಡಬ್ಲ್ಯುಡಿಎಫ್ಸಿಯು ಗಂಟೆಗೆ 100 ಕಿ.ಮೀ ವೇಗವನ್ನು ಹೊಂದಿದೆ ಎಂಬುದು ಪ್ರಾಯೋಗಿಕ ಪರೀಕ್ಷೆಯಿಂದ ಈಗಾಗಲೇ ಸಾಬೀತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.