ಬುಲಂದ್ಸರ್: ಜಾಗೃತ ಚೌಕಿದಾರನಿಂದಾಗಿ ನೀರವ್ ಮೋದಿ, ವಿಜಯ್ ಮಲ್ಯ ಮತ್ತು ಮೆಹೂಲ್ ಚೋಕ್ಸಿಯಂತಹ ವಂಚಕರು ದೇಶದಿಂದ ಕಾಲ್ಕಿತ್ತರು, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ತನಕ ಅವರು ಭಾರತವನ್ನು ಬಿಟ್ಟಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಬುಲಂದ್ಸರದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಯಾವಾಗ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಂಡು, ಹೊಸ ಚೌಕಿದಾರ, ಹೆಚ್ಚು ಜಾಗೃತ ಚೌಕಿದಾರ ಬಂದನೋ ಆಗ ಇವರೆಲ್ಲ ಭಾರತವನ್ನು ತೊರೆದು ವಿದೇಶಕ್ಕೆ ಪಲಾಯನ ಮಾಡಿದರು’ ಎಂದಿದ್ದಾರೆ.
‘ನೀರವ್ ಮೋದಿ, ಮೆಹೂಲ್ ಚೋಕ್ಸಿ ಮತ್ತು ವಿಜಯ್ ಮಲ್ಯ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಓಡಿ ಹೋದರು, ಪ್ರಧಾನಿ ಮೋದಿ ಇವರಿಗೆ ಓಡಿಹೋಗಲು ಸಹಾಯ ಮಾಡಿದರು ಎಂದು ಇವರುಗಳು ಆರೋಪಿಸುತ್ತಾರೆ. ಆದರೆ ಸೂಕ್ಷ್ಮವಾಗಿ ಗಮನಿಸಿ, 1947ರಿಂದ 2008ರವರೆಗೆ ಸಾರ್ವಜನಿಕರಿಗೆ 18 ಲಕ್ಷ ಕೋಟಿ ರೂ. ಗಳನ್ನು ಸಾಲ ನೀಡಲಾಗಿದೆ. ಆದರೆ 2008ರಿಂದ 2014ರವರೆಗೆ ಈಗ ದೇಶ ಬಿಟ್ಟು ಹೋಗಿರುವ ಜನರಿಗೆ ಕಾಂಗ್ರೆಸ್ ಸೂಚನೆಯ ಮೇರೆಗೆ ರೂ.52 ಲಕ್ಷ ಕೋಟಿಗಳನ್ನು ನೀಡಲಾಗಿದೆ’ ಎಂದರು.
ಬಳಿಕ ಲಕ್ನೋದಲ್ಲಿ ಅಲಟ್ ಬಿಹಾರಿ ವಾಜಪೇಯಿ ಕನ್ವೇನ್ಷನ್ನಲ್ಲಿ ಮಾತನಾಡಿದ ಅವರು, ದೇಶದ್ರೋಹದ ಪ್ರಕರಣವನ್ನು ಕೈಬಿಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
‘ಕೆಲವರು ಭಾರತವನ್ನು ಧ್ವಂಸ ಮಾಡುವ ಮಾತನ್ನಾಡುತ್ತಿದ್ದರೆ, ಅವರಿಗೆ ಶಿಕ್ಷೆ ನೀಡದಿರಲು ಸಾಧ್ಯವೇ? ದೇಶದ್ರೋಹ ಕೈಬಿಡುತ್ತೇವೆ ಎಂದವರಿಗೆ ನಾಚಿಕೆಯಾಗಬೇಕು’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.