ನವದೆಹಲಿ: ಅತೀದೊಡ್ಡ ವಿಧಾನದಲ್ಲಿ ಹೊಸ ಮತ್ತು ನವೀಕರಿಸಬಹುದಾದ ಶಕ್ತಿಯನ್ನು ಪ್ರಚುರಪಡಿಸುವಂತೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕರೆ ನೀಡಿದ್ದಾರೆ. ನವೀಕರಿಸಬಹುದಾದ ಶಕ್ತಿಯತ್ತ ಮುಖ ಮಾಡುವುದರಿಂದ ಶಕ್ತಿಯ ಭದ್ರತೆ ಖಚಿತಗೊಳ್ಳುವುದು ಮಾತ್ರವಲ್ಲದೇ, ಪರಿಸರ ರಕ್ಷಣೆ ಮತ್ತು ಮಾಲಿನ್ಯವೂ ತಗ್ಗುತ್ತದೆ ಎಂದಿದ್ದಾರೆ.
‘ನವೀಕರಿಸಬಹುದಾದ ಶಕ್ತಿಯ ಪ್ರಗತಿಯಿಂದ ಎರಡು ಪ್ರಯೋಜನಗಳಿವೆ-ಒಂದು, ದೇಶಕ್ಕೆ ಅದು ಶಕ್ತಿಯ ಭದ್ರತೆಯನ್ನು ಖಾತ್ರಿಪಡಿಸುತ್ತದೆ. ಎರಡನೇಯದು, ಇದು ಅತ್ಯಗತ್ಯವಾಗಿರುವ ಪರಿಸರ ಸಂರಕ್ಷಣೆ ಮಾಡುತ್ತದೆ’ ಎಂದಿದ್ದಾರೆ.
ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ಆಯೋಜನೆಗೊಳಿಸಿದ್ದ ಅಂತಾರಾಷ್ಟ್ರೀಯ ಎಕ್ಸಿಬಿಷನ್ ಮತ್ತು ಕಾನ್ಫರೆನ್ಸ್ ‘ಗ್ರಿಡ್ಟೆಕ್ 2019’ನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಶಕ್ತಿಯ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಮತ್ತು ವಿದ್ಯುತ್ ಉತ್ಪಾದನೆಯನ್ನು ಡಿ-ಕಾರ್ಬೋನೈಝ್ ಮಾಡುವ ಭಾರತದ ಅಂತಾರಾಷ್ಟ್ರೀಯ ಬದ್ಧತೆಯನ್ನು ಈಡೇರಿಸಲು ತಜ್ಞರು ನವೀಕರಿಸಬಹುದಾದ ಶಕ್ತಿಯನ್ನು ವೃದ್ಧಿಸಲು ನವ ತಂತ್ರಜ್ಞಾನಗಳನ್ನು ಪತ್ತೆ ಹಚ್ಚಬೇಕು ಎಂದು ಅವರು ಕರೆ ನೀಡಿದ್ದಾರೆ.
ಗ್ರೀನ್ ಮತ್ತು ಕ್ಲೀನ್ ಮಾದರಿಯ ಸಾರಿಗೆಯನ್ನು ಉತ್ತೇಜಸಬೇಕು ಎಂದಿರುವ ಅವರು, ದೊಡ್ಡ ಮಟ್ಟದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಪ್ರಚುರಪಡಿಸುವ ಅಗತ್ಯತೆ ಇದೆ ಎಂದು ಸಾರಿದ್ದಾರೆ.
ಜಗತ್ತು ಬಂಡವಾಳ ಹೂಡಲು ಭಾರತದತ್ತ ನೋಡುತ್ತಿದೆ, ವಿಶ್ವ ಸಮುದಾಯ ಇಷ್ಟೊಂದು ಉತ್ಸಾಹವನ್ನು ತೋರಿಸಲು ಭಾರತದ ಆರ್ಥಿಕ ಪ್ರಗತಿಯೇ ಕಾರಣ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.