ರಾಂಚಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಮತದಾನದ ಬಗೆಗಿನ ಜಾಗೃತಿ ಕಾರ್ಯಕ್ರಮಗಳೂ ಹೆಚ್ಚಾಗುತ್ತಿವೆ. ಸೂಕ್ತವಾದ ಅಭ್ಯರ್ಥಿಗೇ ಮತ ಹಾಕಿ, ನಿಮ್ಮ ಒಂದು ಮತವೂ ಅತ್ಯಮೂಲ್ಯ ಎಂಬುದನ್ನು ಜನರಿಗೆ ಮನದಟ್ಟು ಮಾಡಿಕೊಡುವ ಅರಿವು ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಲಾಗುತ್ತಿದೆ. ಝಾರ್ಖಾಂಡ್ ಕುಂತಿಯಲ್ಲಿ ಸುಮಾರು 2000 ಮಂದಿ ಶಾಲಾ ಮಕ್ಕಳು ಮಾನವ ಸರಪಳಿಯನ್ನು ನಿರ್ಮಿಸಿ ಮುಂಬರುವ ಚುನಾವಣೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಮತ್ತು ಕರ್ತವ್ಯ ಎಂಬುದನ್ನು 2000 ಮಕ್ಕಳು ಮಾನವ ಸರಪಳಿಯನ್ನು ರಚಿಸುವ ಮೂಲಕ ಜನರಿಗೆ ಅರಿವು ಮೂಡಿಸಿದ್ದಾರೆ. ಮಾನವ ಸರಪಳಿಯ ಮೂಲಕ ಜನರಿಗೆ ಹೋಗಿ ಮತದಾನ ಮಾಡುವಂತೆ ಮನವಿ ಮಾಡಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಮಾನವ ಸರಪಳಿಯೊಳಗೆ ‘ಮೇ 6, ಲೋಕಸಭಾ ಎಲೆಕ್ಷನ್ 2019, ಮಹಾ ತ್ಯೋಹಾರ್’ ಎಂದು ಬರೆಯಲಾಗಿದೆ. ಮಕ್ಕಳಿಂದಲೇ ಅಕ್ಷರಗಳನ್ನು ರೂಪಿಸಲಾಗಿದೆ.
ಈ ಮಕ್ಕಳು ರವಾನಿಸಿರುವ ಈ ಸಂದೇಶ ಕೇವಲ ಝಾರ್ಖಾಂಡ್ಗೆ ಮಾತ್ರ ಸೀಮಿತವಾಗಿಲ್ಲ. ದೇಶದ 90 ಕೋಟಿ ಮತದಾರರಿಗೂ ಈ ಸಂದೇಶ ಅನ್ವಯವಾಗುತ್ತದೆ. ಅಸ್ಸಾಂ ಸೇರಿದಂತೆ ದೇಶದ ನಾನಾ ಭಾಗಗಳಲ್ಲೂ ವಿವಿಧ ಸಂಘಟನೆಗಳು, ಚುನಾವಣಾ ಆಯೋಗ ಮತದಾನ ಅರಿವು ಕಾರ್ಯಕ್ರಮಗಳನ್ನು ಆಯೋಜನೆಗೊಳಿಸುತ್ತಿದೆ. ಅತ್ಯಧಿಕ ಪ್ರಮಾಣದಲ್ಲಿ ಮತದಾನವಾಗುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಕ್ರಿಯವಾಗಿ ಮತದಾನ ಜಾಗೃತಿ ಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.