ಬೊಗೊಟೊ: ಭಾರತದ ಖ್ಯಾತ ಆಧ್ಯಾತ್ಮ ನಾಯಕ, ಆರ್ಟ್ ಆಫ್ ಲಿವಿಂಗ್ನ ಮುಖ್ಯಸ್ಥ ಶ್ರೀ ಶ್ರೀ ರವಿ ಶಂಕರ್ ಅವರು ಕೊಲಂಬಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಬಾಜನರಾಗಿದ್ದಾರೆ.
ಸಮಾಜದಲ್ಲಿ ಶಾಂತಿಯ ಪ್ರತಿಪಾದನೆ, ಯುದ್ಧದಲ್ಲಿ ಆಂತರಿಕ ಮಧ್ಯಸ್ಥಿಕೆ, ಒತ್ತಡ ನಿವಾರಣೆ, ಯೋಗ ಮತ್ತು ಉಸಿರಾಟದ ವ್ಯಾಯಾಮದ ಮೂಲಕ ಹಿಂಸೆಯನ್ನು ಹತ್ತಿಕ್ಕುವುದು ಮುಂತಾದ ಕಾರ್ಯಗಳಿಗಾಗಿ ರವಿ ಶಂಕರ್ ಅವರಿಗೆ ಕೊಲಂಬಿಯಾ ಸರ್ಕಾರ ‘Orden de la Democracia Simon Bolivar en el grado de cruz Caballero’ ಗೌರವವನ್ನು ನೀಡಿದೆ.
ಕೊಲಂಬಿಯಾ ಅಧ್ಯಕ್ಷ ಫ್ಯಾಬಿಯೊ ರೌಲ್ ಅಮಿನ್ ಸಲೆಮೆ ಅವರು ರವಿ ಶಂಕರ್ ಅವರ ಕೊಡುಗೆಯನ್ನು ಗಮನಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆಗೊಳಿಸಿದ್ದಾರೆ.
ಕೊಲಂಬಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದಿದಕ್ಕಾಗಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ, ಅಲ್ಲದೇ ಜಗತ್ತಿನಾದ್ಯಂತ ಶ್ರೀ ಶ್ರೀ ಮಾಡುತ್ತಿರುವ ಅದ್ಭುತ ಕಾರ್ಯದ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.