ಕಠ್ಮಂಡು: ನೇಪಾಳದಲ್ಲಿ ಚಂಡಮಾರುತ ಸಂಭವಿಸಿ ಭಾರೀ ಅನಾಹುತ ಸಂಭವಿಸಿದೆ. ಭಾರತ ಕ್ಷಿಪ್ರಗತಿಯಲ್ಲಿ ಆ ರಾಷ್ಟ್ರಕ್ಕೆ ತನ್ನ ಸಹಾಯಹಸ್ತವನ್ನು ಚಾಚಿದೆ. ಚಂಡಮಾರುತದಿಂದಾಗಿ ನೇಪಾಳದ ಬಾರ ಮತ್ತು ಪರ್ಸಾ ಜಿಲ್ಲೆಯಲ್ಲಿ 30 ಮಂದಿ ಮೃತರಾಗಿದ್ದಾರೆ. ಆ ದೇಶಕ್ಕೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯಹಸ್ತ ಚಾಚಿದ ಮೊದಲ ದೇಶ ಭಾರತವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರ ವಕ್ತಾರ ರವೀಶ್ ಕುಮಾರ್ ಅವರು, ‘ನೇಪಾಳದ ಬಾರ ಮತ್ತು ಪರ್ಸಾ ಜಿಲ್ಲೆಯಲ್ಲಿ ಚಂಡಮಾರುತಕ್ಕೆ ಜೀವಹಾನಿ ಉಂಟಾದ ಬಗ್ಗೆ ಭಾರತ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ. ತಮ್ಮವರನ್ನು ಕಳೆದುಕೊಂಡವರ ಜೊತೆ ನಮ್ಮ ಪ್ರಾರ್ಥನೆಗಳು ಸದಾ ಇರುತ್ತವೆ’ ಎಂದಿದ್ದಾರೆ.
ನೇಪಾಳಕ್ಕೆ ಬೇಕಾದ ಎಲ್ಲಾ ನೆರವನ್ನು ಒದಗಿಸುವ ಸಲುವಾಗಿ ಕಠ್ಮಂಡು ಮತ್ತು ಬಿರ್ಗುಂಜ್ನಲ್ಲಿರುವ ಭಾರತೀಯ ರಾಯಭಾರ ಕಛೇರಿ ನೇಪಾಳ ಆಡಳಿತದೊಂದಿಗೆ ಸದಾ ಸಂಪರ್ಕದಲ್ಲಿದೆ.
2015ರಲ್ಲಿ ಭೂಕಂಪ ಸಂಭವಿಸಿದಾಗಲೂ ನೇಪಾಳಕ್ಕೆ ಮುನ್ನಲೆಯಲ್ಲಿ ನಿಂತು ಭಾರತ ಸಹಾಯಹಸ್ತವನ್ನು ಚಾಚಿತ್ತು. ಭೂಕಂಪ ಸಂಭವಿಸಿದ ಆರು ಗಂಟೆಗಳಲ್ಲಿ ಆ ದೇಶಕ್ಕೆ ಭಾರತ ರಕ್ಷಣಾ ಮತ್ತು ಪರಿಹಾರ ತಂಡಗಳನ್ನು ಕಳುಹಿಸಿಕೊಟ್ಟಿತ್ತು. 570 ಟನ್ ಆಹಾರ ಸಾಮಾಗ್ರಿಗಳನ್ನು ವಾಯು ಮಾರ್ಗವಾಗಿ, 1400 ಟನ್ ಪರಿಹಾರ ಸಾಮಾಗ್ರಿಗಳು ರಸ್ತೆಯ ಮೂಲಕ, 1200 ಟನ್ ಸಾಮಾಗ್ರಿಗಳನ್ನು ರೈಲುಗಳ ಮೂಲಕ ಭಾರತ ಅಲ್ಲಿಗೆ ಕಳುಹಿಸಿಕೊಟ್ಟಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.