ಶ್ರೀನಗರ: ಓಂ ನಮಃ ಶಿವಾಯ ಉದ್ಘಾರದೊಂದಿಗೆ, ಬಲ್ತಲ್ ಮತ್ತು ಚಂದನ್ವರಿ ಮಾರ್ಗವಾಗಿ ನಡೆಯುವ ವಾರ್ಷಿಕ ಅಮರನಾಥ ಯಾತ್ರೆಗೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಎಸ್ ಬ್ಯಾಂಕ್ಗಳ 442 ಶಾಖೆಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ.
ಜುಲೈ 1 ರಿಂದ 46 ದಿನಗಳ ಅಮರನಾಥ ಯಾತ್ರೆ ಎರಡು ಮಾರ್ಗದಲ್ಲೂ ಆರಂಭಗೊಳ್ಳಲಿದೆ. ಆಗಸ್ಟ್ 15ರ ರಕ್ಷಾ ಬಂಧನದಂದು ಯಾತ್ರೆ ಅಂತ್ಯಗೊಳ್ಳಲಿದೆ.
ಯಾತ್ರೆಗೆ ನೋಂದಣಿ ಮಾಡಿಸಿಕೊಳ್ಳಲು ಬೇಕಾದ ಪ್ರತಿ ಪ್ರಕ್ರಿಯೆಗಳ ಬಗೆಗಿನ ವಿವರಗಳನ್ನು ಶ್ರೀ ಅಮರನಾಥ್ ಜೀ ದೇಗುಲ ಮಂಡಳಿಯ ವೆಬ್ಸೈಟ್ ‘www.shriamarnathjishrine.com.’ನಲ್ಲಿ ಪ್ರಕಟಿಸಲಾಗಿದೆ. ವೆಬ್ಸೈಟ್ನಲ್ಲಿ ಅಪ್ಲಿಕೇಶನ್ ಫಾರ್ಮ್ ಕೂಡ ಇದೆ. ಬ್ಯಾಂಕ್ ಬ್ರಾಂಚ್ಗಳ ಬಗೆಗಿನ ಮಾಹಿತಿಯೂ ಇದೆ.
13 ವರ್ಷ ಕೆಳಗಿನ ಮತ್ತು 75 ವರ್ಷ ಮೇಲ್ಪಟ್ಟವರಿಗೆ ಯಾತ್ರೆಗೆ ಅವಕಾಶವಿಲ್ಲ. 6 ವಾರಗಳ ನಂತರದ ಗರ್ಭಿಣಿ ಸ್ತ್ರೀಯರಿಗೂ ಯಾತ್ರೆಗೆ ಅವಕಾಶ ಇಲ್ಲ.
ಹೆಲಿಕಾಫ್ಟರ್ ಮೂಲಕ ತೆರಳುವವರಿಗೆ ನೋಂದಣಿ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ, ಹೆಲಿಕಾಫ್ಟರ್ ಟಿಕೆಟ್ ಬುಕ್ ಮಾಡಿಸಿದರೆ ಸಾಕಾಗುತ್ತದೆ. ಆದರೆ ಆರೋಗ್ಯ ಸರ್ಟಿಫಿಕೇಟ್ ಅನ್ನು ಸಲ್ಲಿಸಬೇಕು. ಅಧಿಕೃತ ವೈದ್ಯರಿಂದ ಪಡೆದ ಸರ್ಟಿಫಿಕೇಟ್ ಅನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.