ನವದೆಹಲಿ: ವೈಷ್ಣೋದೇವಿಗೆ ಯಾತ್ರೆ ಕೈಗೊಳ್ಳುವವರಿಗೆ ನಾರ್ದನ್ ರೈಲ್ವೇಯು ಸಿಹಿ ಸುದ್ದಿ ನೀಡಿದೆ. ಯಶವಂತ್ಪುರ-ಹಝ್ರತ್ ನಿಜಾಮುದ್ದೀನ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಅನ್ನು ಶ್ರೀ ಮಾತಾ ವೈಷ್ಣೋದೇವಿ ಕಾತ್ರಾದವರೆಗೆ ವಿಸ್ತರಣೆಗೊಳಿಸಿದೆ. ಕಾತ್ರವು ವೈಷ್ಣೋದೇವಿ ಸಮೀಪದ ರೈಲ್ವೇ ನಿಲ್ದಾಣವಾಗಿದೆ. ವಾರಕ್ಕೊಮ್ಮೆ ಯಶವಂತಪುರ-ಕಾತ್ರಾಗೆ ರೈಲು ಸಂಚರಿಸಲಿದೆ.
ಎಪ್ರಿಲ್ 4ರಂದು ಗುರುವಾರ ಯಶವಂತಪುರದಿಂದ ಕಾತ್ರಾಗೆ ಮೊದಲ ಪ್ರಯಾಣವನ್ನು ಆರಂಭಿಸಲಿರುವ ರೈಲು, ಶನಿವಾರ ಸಂಜೆ ಕಾತ್ರಗೆ ತಲುಪಲಿದೆ. ಈ ಸೇವೆ ಜೂನ್ 20ರವರೆಗೆ ಮುಂದುವರೆಯಲಿದೆ.
ಪ್ರತಿ ಸೋಮವಾರ ಬೆಳಗ್ಗೆ 5.40ಕ್ಕೆ ಕಾತ್ರದಿಂದ ಹೊಡಲಿರುವ ರೈಲು, ಬುಧವಾರ ಸಂಜೆ ಯಶವಂತಪುರಕ್ಕೆ ಬರಲಿದ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾತ್ರಾ ರೈಲು ನಿಲ್ದಾಣವನ್ನು ಉದ್ಘಾಟನೆಗೊಳಿಸಿದ್ದರು. ಈ ರೈಲು 25 ಕಿಮೀ ಉಧಂಪುರ-ಕಾತ್ರಾ ಲೈನ್ ಬೆಲ್ಟ್ ಅನ್ನು ಸಂಪರ್ಕಿಸುತ್ತದೆ. ರೂ.1,132 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಲೈನ್ ನಿರ್ಮಾಣಗೊಂಡಿತ್ತು. 7 ಸುರಂಗ ಮತ್ತು 30 ಸೇತುವೆಗಳನ್ನು ಈ ಲೈನ್ ಒಳಗೊಂಡಿದೆ, ಉಧಂಪುರವನ್ನು ಜಮ್ಮು-ಉಧಂಪುರ ರೈಲ್ವೇ ಲೈನ್ ಮೂಲಕ ಇತರ ರೈಲ್ವೇ ನೆಟ್ವರ್ಕ್ಗೆ ಜೋಡಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.