ಮೀರತ್: ಬಿಜೆಪಿ ನಾಯಕ ವಿನೀತ್ ಅಗರ್ವಾಲ್ ಶಾರ್ದ ಅವರು ಮೀರತ್ನಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಎಎನ್ಐ ಸುದ್ದಿಸಂಸ್ಥೆಯ ಪ್ರಕಾರ, ಎಪ್ರಿಲ್ 1ರಂದು ಸಮಾವೇಶ ನಡೆದಿದ್ದು, ಇದರಲ್ಲಿ ಶಾರ್ದ 40 ಬಾರಿ ‘ಕಮಲ್’ ಎಂದು ಉಚ್ಛರಿಸಿದ್ದಾರೆ.
ಕಮಲ ಬೇಕೇ ಅಥವಾ ಏನು ಬೇಕು ಎಂಬುದನ್ನು ನೀವು ಯೋಚಿಸಬೇಕಾಗಿದೆ ಎಂದು ವೀಡಿಯೋದಲ್ಲಿ ಹೇಳುವ ಶಾರ್ದ ಬಳಿಕ, ಕಮಲ್ ಕಮಲ್ ಕಮಲ್ ಎಂದು 40 ಬಾರಿ ಉಚ್ಛರಿಸುತ್ತಾರೆ. ಒಂದು ನಿಮಿಷದ ವೀಡಿಯೋದಲ್ಲಿ ಅವರು 40 ಬಾರಿ ಕಮಲ್ ಎನ್ನುತ್ತಿರುವುದು ರೆಕಾರ್ಡ್ ಆಗಿದೆ.
ತಮ್ಮ ಭಾಷಣದಲ್ಲಿ, ಶಾರ್ದ ಅವರು ಲೋಕಸಭಾ ಚುನಾವಣೆಯಲ್ಲಿ ಮೀರತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಂದ್ರ ಅಗರ್ವಾಲ್ ಅವರಿಗೆ ಮೂರನೇ ಬಾರಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ರಾಜೇಂದ್ರ ಅವರನ್ನು ನೀವು ಗೆಲ್ಲಿಸಿದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರು ರಾಮಲಕ್ಷಣರ ಅವತಾರವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದಿದ್ದಾರೆ.
80 ಸ್ಥಾನಗಳುಳ್ಳ ಯುಪಿಯಲ್ಲಿ 7 ಹಂತದಲ್ಲಿ ಚುನಾವಣೆ ನಡೆಯಲಿದೆ ಮತ್ತು ಮೀರತ್ ಮೊದಲ ಹಂತದಲ್ಲಿ ಅಂದರೆ ಎಪ್ರಿಲ್ 11ರಂದು ಚುನಾವಣೆ ಎದುರಿಸಲಿದೆ. ಮೇ. 23ರಂದು ಮತಯೆಣಿಕೆ ನಡೆಯಲಿದೆ.
ಮೀರತ್ನಲ್ಲಿ ಐದು ಲೋಕಸಭಾ ಕ್ಷೇತ್ರಗಳಿವೆ. ಕಿತ್ತೋರ್, ಮೀರ್ ಕಾಂಟೆನ್ಮೆಂಟ್, ಮೀರತ್, ಮೀರತ್ ಮತ್ತು ಹಂಪುರ.
#WATCH BJP leader Vineet Agarwal Sharda asking people to vote for ‘kamal’ (BJP party symbol) during a public rally in Meerut. (01.04.2019) pic.twitter.com/wCTnSWprey
— ANI UP (@ANINewsUP) April 2, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.