ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಘೋಷಣೆ ಮಾಡಿರುವ ರೂ.72 ಸಾವಿರ ಕನಿಷ್ಠ ಆದಾಯ ಯೋಜನೆಯು, ಎನ್ಡಿಎ ಸರ್ಕಾರದ ಪಿಎಂ-ಕಿಸಾನ್ ಯೋಜನೆಗೆ ಹೋಲಿಸಿದರೆ ಅಷ್ಟೊಂದು ಉತ್ತೇಜನಕಾರಿಯಾಗಿಲ್ಲ ಎಂದು ನೀತಿ ಆಯೋಗದ ಮಾಜಿ ಮುಖ್ಯಸ್ಥ ಅರವಿಂದ್ ಪನಾಗರಿಯಾ ಹೇಳಿದ್ದಾರೆ. ಅಲ್ಲದೇ, ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರೇ ಸರ್ಕಾರ ರಚನೆ ಮಾಡಲಿದ್ದಾರೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
‘ವೈಜ್ಞಾನಿಕವಾಗಿ, ಚುನಾವಣಾ ಫಲಿತಾಂಶವನ್ನು ಮೊದಲೇ ಹೇಳಲು ಆಗುವುದಿಲ್ಲ, ಫಲಿತಾಂಶ ಬರುವವರೆಗೂ ಕಾಯಲೇ ಬೇಕು. ಆದರೆ, ನನ್ನ ಅಂದಾಜಿನ ಪ್ರಕಾರ 2014 ಚುನಾವಣಾ ಫಲಿತಾಂಶವೇ 2019ರಲ್ಲೂ ಬರಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಬಹುತೇಕ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದ್ದಾರೆ’ ಎಂದಿದ್ದಾರೆ.
‘ಅಧಿಕಾರಕ್ಕೆ ಬಂದ ಮೇಲೆ ದೇಶದ ಶೇ.20ರಷ್ಟು ಬಡವರಿಗೆ ಮಾಸಿಕ ರೂ.6 ಸಾವಿರ ಅಥವಾ ವಾರ್ಷಿಕ ರೂ.72 ಸಾವಿರ ನೀಡುವುದಾಗಿ ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ. ಆದರೆ ಈ ಘೋಷಣೆಯಲ್ಲಿ ವಿಶ್ವಾಸಾರ್ಹತೆಯ ಕೊರತೆಯಿದೆ. ಅಧಿಕಾರಕ್ಕೆ ಬಂದರೆ 10 ದಿನಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಹೇಳಿಕೊಂಡಿದ್ದರು. ಆದರೆ ಇದುವರೆಗೂ ಮಾಡಲಿಲ್ಲ. ಇನ್ನು ರಾಹುಲ್ ಅವರ 72 ಸಾವಿರ ರೂಗಳ ಘೋಷಣೆಯನ್ನು ಅನುಷ್ಠಾನಕ್ಕೆ ತರಲು, ರೂ.3.6 ಲಕ್ಷ ಕೋಟಿಗಳ ಅಗತ್ಯವಿದೆ. ಅಂದರೆ, ಬಜೆಟ್ನ ಶೇ.13ರಷ್ಟು ಬೇಕಾಗುತ್ತದೆ. ಇದು ರಕ್ಷಣಾ ಬಜೆಟ್ಗಿಂತಲೂ ಅಧಿಕವಾಗಿದೆ. ಈ ಅಪಾರ ಮೊತ್ತವನ್ನು ಹೇಗೆ ಹೊಂದಿಸಲಾಗುತ್ತದೆ ಎಂಬುದನ್ನೂ ಇದುವರೆಗೆ ಯಾರೂ ಹೇಳಿಲ್ಲ’ ಎಂದು ಪನಾಗರಿಯಾ ಅಭಿಪ್ರಾಯಿಸಿದ್ದಾರೆ.
ಸಣ್ಣ ರೈತರಿಗೆ ವಾರ್ಷಿಕ ರೂ.6000 ನೀಡುವ ಮೋದಿಯವರ ಪಿಎಂ-ಕಿಸಾನ್ ಯೋಜನೆಯೇ, ರಾಹುಲ್ ಅವರು ಘೋಷಣೆ ಮಾಡಿರುವ ಯೋಜನೆಗಿಂತ ಹೆಚ್ಚು ಉತ್ತೇಜನಕಾರಿಯಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.