ಭುವನೇಶ್ವರ: ಪಶ್ಚಿಮಬಂಗಾಳದೊಂದಿಗಿನ ರಸಗುಲ್ಲಾ ಹೋರಾಟದಲ್ಲಿ ಸೋತಿದ್ದರೂ, ಒರಿಸ್ಸಾ, ಕಂಧಮಾಲ್ ಅರಿಶಿನಕ್ಕೆ ಜಿಐ ಟ್ಯಾಗ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಒರಿಸ್ಸಾದ ಮಧ್ಯ ಭಾಗದಲ್ಲಿರುವ ಜಿಲ್ಲೆ ಕಂಧಮಾಲ್ನಲ್ಲಿ ಬೆಳೆಯಲಾಗುವ ಅರಿಶಿನಕ್ಕೆ ಕಂಧಮಾಲ್ ಹಳ್ದಿ ಎಂದು ಕರೆಯಲಾಗುತ್ತದೆ. ಬುಡಕಟ್ಟು ಜನರು ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ. ಸೋಮವಾರ ಇದಕ್ಕೆ ಜಿಯೋಗ್ರಾಫಿಕಲ್ ಇಂಡಿಕೇಶನ್ (ಜಿಐ) ಟ್ಯಾಗ್ ಸಿಕ್ಕಿದೆ.
‘ಇಮೇಲ್ ಮೂಲಕ ಜಿಯೋಗ್ರಾಫಿಕಲ್ ಇಂಡಿಕೇಶನ್ಸ್ ರಿಜಿಸ್ಟ್ರೀ ಆಫೀಸ್ನಿಂದ ಜಿಐ ಟ್ಯಾಗ್ ಸರ್ಟಿಫಿಕೇಟ್ ಬಂದಿದೆ. ಇದು ಕಂಧಮಾಲ್ನ ಬುಡಕಟ್ಟು ಜನರಿಗೆ ಸಿಕ್ಕ ಅತೀದೊಡ್ಡ ಸಾಧನೆಯಾಗಿದೆ. ಇದು ಹಳದಿಯನ್ನು ದೊಡ್ಡ ಮಟ್ಟದಲ್ಲಿ ಮಾರ್ಕೆಟಿಂಗ್ ಮಾಡಲು ಸಹಾಯಕವಾಗಲಿದೆ’ ಎಂದು ಕಂಧಮಾಲ್ ಅಪೆಕ್ಸ್ ಸ್ಪೇಸಸ್ ಅಸೋಸಿಯೇಶನ್ ಫಾರ್ ಮಾರ್ಕೆಟಿಂಗ್ (ಕಸಮ್) ಕಾರ್ಯದರ್ಶಿ ಸಂಜಿತ್ ಪಟ್ನಾಯಕ್ ಹೇಳಿದ್ದಾರೆ.
2018ರ ಜನವರಿಯಲ್ಲಿ ಕಸಮ್ನ ಪರವಾಗಿ ಕೇಂದ್ರ ಎಂಎಸ್ಎಂಇ ಸಚಿವಾಲಯದ ಸೆಂಟ್ರಲ್ ಟೂಲ್ ರೂಮ್ & ಟ್ರೈನಿಂಗ್ ಸೆಂಟರ್ ಜಿಐ ಟ್ಯಾಗ್ಗೆ ಅರ್ಜಿಯನ್ನು ಸಲ್ಲಿಸಿತ್ತು. ನವೆಂಬರ್ನಲ್ಲಿ ಕಂಧಮಾಲ್ ಹಳದಿ ಜಿಐ ಟ್ಯಾಗ್ ಪಡೆಯಲು ಅರ್ಹವಾಗಿದೆ ಎಂದು ರಿಜಿಸ್ಟಾರ್ ಆಫ್ ಜಿಯೋಗ್ರಾಫಿಕಲ್ ಆಫ್ ಇಂಡಿಯಾ ಹೇಳಿತು. ಯಾವುದೇ ವಿರೋಧಗಳು ವ್ಯಕ್ತವಾಗದ ಹಿನ್ನಲೆಯಲ್ಲಿ 2019ರ ಮಾರ್ಚ್ 30ರಂದು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತು.
ಆಯಾ ಪ್ರದೇಶದಲ್ಲಿ ಬೆಳೆದ ಬೆಳೆ, ಆಹಾರ, ಹಣ್ಣು ಇತ್ಯಾದಿಗಳಿಗೆ ಭೌಗೋಳಿಕವಾದ ಗುರುತಿಸುವಿಕೆಯನ್ನು ನೀಡುವುದೇ ಜಿಐ ಟ್ಯಾಗ್.
ಈ ಹಿಂದೆ ಪಶ್ಚಿಮಬಂಗಾಳ ಮತ್ತು ಒರಿಸ್ಸಾ ರಸಗುಲ್ಲಾ ತಿಂಡಿಗೆ ಜಿಐ ಟ್ಯಾಗ್ ಪಡೆಯಲು ಹೋರಾಟ ನಡೆಸಿತ್ತು. ಇದು ನಮ್ಮ ರಾಜ್ಯದ ತಿನಿಸು ಎಂದು ಒರಿಸ್ಸಾ ವಾದಿಸಿತ್ತು, ಇದು ನಮ್ಮದು ಎಂದು ಬಂಗಾಳ ವಾದಿಸಿತ್ತು. ಕೊನೆಗೂ ಪಶ್ಚಿಮಬಂಗಾಳಕ್ಕೆ ರಸಗುಲ್ಲಾದ ಜಿಐ ಟ್ಯಾಗ್ ಸಿಕ್ಕಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.