ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಮೋದಿ ಅಲೆ ಇದೆ. ಹೀಗಾಗಿ ಕಾಂಗ್ರೆಸ್ ಇನ್ನೂ ಐದು ವರ್ಷಗಳ ಕಾಲ ಕಾಯಲೇ ಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಜೀ ನ್ಯೂಸ್ ಆಯೋಜನೆಗೊಳಿಸಿದ್ದ ‘ಇಂಡಿಯಾ ಕಾ ಡಿಎನ್ಎ’ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
‘ಬಿಜೆಪಿಗೆ ಪ್ರತಿ ಚುನಾವಣೆಯು ಸವಾಲಿನದ್ದಾಗಿರುತ್ತದೆ ಮತ್ತು ಕಾರ್ಯಕರ್ತರು ಯಾವ ಚುನಾವಣೆಯನ್ನೂ ಲಘುವಾಗಿ ಪರಿಗಣಿಸುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಐದು ವರ್ಷಗಳ ಅವಧಿಯಲ್ಲಿ ನಿರ್ಣಾಯಕ ನಾಯಕತ್ವವನ್ನು ನೀಡಿದ್ದಾರೆ, ಇಡೀ ಜಗತ್ತೇ ಭಾರತವನ್ನು ಈಗ ನೊಡುತ್ತಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲೂ ಮೋದಿ ಅಲೆ ಇದೆ’ ಎಂದು ಹೇಳಿದ್ದಾರೆ.
‘ಸಾಕಷ್ಟು ನಿರೀಕ್ಷೆಗಳಿತ್ತು ಮತ್ತು ಆ ನಿರೀಕ್ಷೆಗಳನ್ನು ನಾವು ತಲುಪಿದ್ದೇವೆ ಎಂದು ನಂಬಿದ್ದೇನೆ. ಕೆಲವೊಂದು ಸನ್ನಿವೇಶಗಳಲ್ಲಿ, ನಿರೀಕ್ಷೆಗಳನ್ನೂ ಮೀರಿ ನಾವು ಬೆಳೆದಿದ್ದೇವೆ. ಎಲ್ಲಾ ಕಾರ್ಯಗಳನ್ನು ಮೋದಿ ಪರಿಶೀಲಿಸಿದ್ದಾರೆ ಮತ್ತು ಇಡೀ ಜಗತ್ತೇ ಈಗ ಭಾರತದತ್ತ ನೋಡುತ್ತಿದೆ. ಕಳೆದ ಐದು ವರ್ಷಗಳಲ್ಲಿ ಭಾರತದ ಪಾಸ್ಪೋರ್ಟ್ನ ಮೌಲ್ಯ ಹೆಚ್ಚಿದೆ’ ಎಂದರು.
ಮುಂಬರುವ ಚುನಾವಣೆಯಲ್ಲಿ ಮೋದಿ ಖಂಡಿತವಾಗಿಯೂ ಗೆಲ್ಲುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ ಅವರು, ಈಗ ಚುನಾವಣೆಯ ಪ್ರಾಥಮಿಕ ಹಂತದಲ್ಲಿ ಇದ್ದೇವೆ, ಯಾವ ಅಂಕಿಅಂಶವನ್ನು ನೀಡುವುದು ಈಗ ಅಪ್ರಬುದ್ಧ ಎನಿಸುತ್ತದೆ. ಆದರೆ 2014ಕ್ಕಿಂತಲೂ ಮೋದಿಯವರು ದೊಡ್ಡ ಮಟ್ಟದಲ್ಲಿ ದಿಗ್ವಿಜಯ ಸಾಧಿಸುತ್ತಾರೆ’ ಎಂದರು.
ಕಾಂಗ್ರೆಸ್ ಪಕ್ಷ ಕಳೆದ ಐದು ವರ್ಷಗಳಿಂದ ಅಧಿಕಾರದಿಂದ ಹೊರಗಿದೆ, ಈ ಬಾರಿ ಅಮೇಥಿ ಲೋಕಸಭಾ ಕ್ಷೇತ್ರದಿಂದ ಗೆಲ್ಲುವುದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕಷ್ಟವಾಗಲಿದೆ. ನಮ್ಮ ಅಭ್ಯರ್ಥಿಯಾಗಿ ಆ ಕ್ಷೇತ್ರದಿಂದ ಸ್ಮೃತಿ ಇರಾನಿ ಅವರನ್ನು ಕಣಕ್ಕಿಳಿಸಿದ್ದೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.