ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರರ ಕೈಬರಹವುಳ್ಳ ಪತ್ರಗಳು, ಅವರ ಹೋರಾಟದ ಬಗೆಗಿನ ದಾಖಲೆಗಳು ಮತ್ತು ಅವರ ಜೀವನದ ಬಗೆಗಿನ ಒಳ ಚಿತ್ರಣವನ್ನು ಇನ್ನು ಜನಸಾಮಾನ್ಯರು ನೋಡಬಹುದಾಗಿದೆ. ಅಲಹಾಬಾದ್ ಮ್ಯೂಸಿಯಂ ಇದಕ್ಕೆ ಸಂಬಂಧಿಸಿದ ವ್ಯವಸ್ಥೆಗಳನ್ನು ಮಾಡುತ್ತಿದೆ.
ಅಲಹಾಬಾದ್ ಮ್ಯೂಸಿಯಂ, ಸ್ವಾತಂತ್ರ್ಯ ಹೋರಾಟಗಾರರ ಕೈಬರಹ, ದಾಖಲೆ ಇತ್ಯಾದಿಗಳನ್ನು ಹೊಂದಿರುವ ವ್ಯಕ್ತಿ, ಸಂಘಟನೆ, ಸಂಸ್ಥೆಗಳಿಂದ ಅವುಗಳನ್ನು ಸಂಗ್ರಹಿಸಿ ಮ್ಯೂಸಿಯಂನಲ್ಲಿ ಇಡುವ ಪ್ರಕ್ರಿಯೆಯನ್ನು ನಡೆಸುತ್ತಿದೆ. ಉತ್ತರಪ್ರದೇಶ ರಾಜ್ಯಪಾಲ ಬಗ್ಗೆ ಮನವಿಯನ್ನು ಮಾಡಿಕೊಂಡಿದ್ದು, ಸ್ವಾತಂತ್ರ್ಯ ಚಳುವಳಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಬಗೆಗಿನ ದಾಖಲೆ, ಪತ್ರ ಇತ್ಯಾದಿಗಳು ಇದ್ದರೆ ಅದನ್ನು ಅಲಹಾಬಾದ್ ಮ್ಯೂಸಿಯಂಗೆ ದಾನ ಮಾಡುವಂತೆ ಮನವಿ ಮಾಡಿದ್ದಾರೆ.
ಈಗಾಗಲೇ ಮ್ಯೂಸಿಯಂಗೆ, ಸ್ವಾತಂತ್ರ್ಯ ಹೋರಾಟಗಾರ ವಿಷ್ಣು ಶರಣ್ ಡಬ್ಲಿಷ್ ಅವರ ಅತ್ಯಂತ ಜೋಪಾನವಾಗಿಟ್ಟ ಪತ್ರ ಸಿಕ್ಕಿದೆ. ಕೆಡಿ ಶರ್ಮಾ ಎಂಬ ಮೀರತ್ ನಿವಾಸಿ ಇದನ್ನು ತಂದುಕೊಟ್ಟಿದ್ದಾರೆ. ಡಬ್ಲಿಷ್ ಅವರು 1937ರ ನ.1ರಂದು ಅಂಡಮಾನ್ ಜೈಲಿನಿಂದ ಬಿಡುಗಡೆಗೊಂಡಾಗ ಬರೆದ ಪತ್ರ ಇದಾಗಿದೆ. ಅಲ್ಲದೇ, ವ್ಯಕ್ತಿಯೊಬ್ಬರು ಸ್ವಾತಂತ್ರ ಹೋರಾಟಗಾರರ 150 ಚಿತ್ರಗಳನ್ನು ನೀಡಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ರಾಜ್ಗುರುವಿಗೆ ಸಂಬಂಧಿಸಿದ ಕೈಬರಹವುಳ್ಳ ಪತ್ರವನ್ನು ಪಡೆಯುವ ಸಲುವಾಗಿ ಮ್ಯೂಸಿಯಂ ಮುಖ್ಯಸ್ಥರುಗಳು, ಪುಣೆ ಮೂಲದ ತಿಲಕ್ ಫೌಂಡೇಶನ್ ಜೊತೆಗೆ ಸಂಪರ್ಕದಲ್ಲಿದೆ. ವೀರ ಸಾವರ್ಕರ್ ಅವರ ಪತ್ರ ಪಡೆಯುವ ಸಲುವಾಗಿ ಸಾವರ್ಕರ್ ಟ್ರಸ್ಟ್ ಜೊತೆ ಸಂಪರ್ಕದಲ್ಲಿದೆ. ತಾತ್ಕಾಲಿಕವಾಗಿಯಾದರೂ ದಾಖಲೆಗಳನ್ನು ನೀಡುವಂತೆ ಕೋರಲಾಗಿದೆ.
ಒಂದು ಬಾರಿ ಸಾಕಷ್ಟು ಪ್ರಮಾಣದ ದಾಖಲೆಗಳು ಸಂಗ್ರಹವಾದರೆ, ಅದನ್ನು ಪ್ರದರ್ಶನಕ್ಕಿಡುವ ನಿರ್ಧಾರವನ್ನು ಮ್ಯೂಸಿಯಂ ತೆಗೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.