ನವದೆಹಲಿ: ಜಮ್ಮು ಕಾಶ್ಮೀರದ ಬನಿಹಲ್ ಸಮೀಪದ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಮಾರ್ಚ್ 30ರಂದು CRPF ಯೋಧರ ವಾಹನದ ಮೇಲೆ ಕಾರ್ ಬಾಂಬ್ ಹತ್ತಿಸಲು ವಿಫಲ ಪ್ರಯತ್ನ ಮಾಡಿದ ಶಂಕಿತ ಭಯೋತ್ಪಾದಕನನ್ನು ಸೋಮವಾರ ಬಂಧನಕ್ಕೊಳಪಡಿಸಲಾಗಿದೆ.
ಮಾರ್ಚ್ 30ರಂದು ರಮ್ಬನ್ ಜಿಲ್ಲೆಯ ತೇತರ್ ಗ್ರಾಮದಲ್ಲಿ ನಿಗೂಢ ಕಾರ್ ಬಾಂಬ್ ಸ್ಫೋಟ ನಡೆದ ಬಗ್ಗೆ ವರದಿ ಆಗಿತ್ತು, ಬನಿಹಲ್ ನಿಂದ 7 ಕಿಮೀ ದೂರದಲ್ಲಿರುವ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಜವಾಹರ್ ಟನಲ್ ಸಮೀಪ ಈ ಸ್ಪೋಟ ನಡೆದಿತ್ತು. ವರದಿಗಳ ಪ್ರಕಾರ, ಸ್ಪೋಟ ನಡೆದಾದ CRPF ಬೆಂಗಾವಲು ವಾಹನ ಸಂಚರಿಸುತ್ತಿತ್ತು ಎನ್ನಲಾಗಿದೆ. ಬೆಂಕಿ ಕಾರಿಗೆ ತಗಲುವ ಮುನ್ನವೇ ಚಾಲಕ ಅತ್ಯಂತ ಸುರಕ್ಷಿತವಾಗಿ ಎಸ್ಕೇಪ್ ಆಗಿದ್ದ, ಆತನಿಗಾಗಿ ತೀವ್ರ ಸ್ವರೂಪದ ಶೋಧ ಕಾರ್ಯ ನಡೆದಿತ್ತು.
LPG ಸಿಲಿಂಡರ್ಗಳನ್ನು, ಜೆರ್ರಿಕಾನ್ ತುಂಬಿದ ಪೆಟ್ರೋಲ್, ಗೆಲಟಿನ್ ಸ್ಟಿಕ್, ಯುರಿಯಾ, ಸಲ್ಫರ್ಗಳನ್ನು ಸ್ಫೋಟಗೊಂಡ ಕಾರಿನಿಂದ ವಶಕ್ಕೆ ಪಡೆಯಲಾಗಿತ್ತು.
ಇದೀಗ ಎಸ್ಕೇಪ್ ಆಗಿದ್ದ ಚಾಲಕನನ್ನು ಬಂಧಿಸಲಾಗಿದ್ದು, ಈತ ಹಿಜ್ಬುಲ್ ಮುಜಾಹಿದ್ದೀನ್ ಆಪರೇಟಿವ್ ಎನ್ನಲಾಗಿದೆ. ಪುಲ್ವಾಮದಲ್ಲಿ ಫೆ. 14 ರಂದು ನಡೆದ ದಾಳಿಯಂತೇ ತನಗೆ ಮಾಡುವ ಇಚ್ಛೆ ಇತ್ತು ಎಂಬುದಾಗಿ ಈತ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.