ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಮಹಾರಾಷ್ಟ್ರದ ವಾರ್ಧಾದಲ್ಲಿ ಚುನಾವಣಾ ಪ್ರಚಾರ ಸಮಾವೇಶವನ್ನು ನಡೆಸಿ, ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ ಪ್ರಹಾರವನ್ನು ನಡೆಸಿದ್ದಾರೆ. ಕಾಂಗ್ರೆಸ್ಸಿಗರು ಮಾಡುತ್ತಿರುವ ನಿಂದನೆಗಳೇ ನನಗೆ ಗೌರವ ಬ್ಯಾಡ್ಜ್ಗಳು ಮತ್ತು ಆಭರಣಗಳು ಎಂದಿದ್ದಾರೆ.
ಕಾಂಗ್ರೆಸ್ಸಿಗರ, ‘ಚೌಕಿದಾರ್ ಆಫ್ ಟಾಯ್ಲೆಟ್ಸ್’ ಎಂಬ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಎರಡು ದಿನಗಳ ಹಿಂದೆ, ಕಾಂಗ್ರೆಸ್ ಲೀಡರ್ ಒಬ್ಬರು ಮೋದಿ ಕೇವಲ ಶೌಚಾಲಯಗಳ ಕಾವಲು ಕಾಯುತ್ತಾರೆ ಎಂದಿದ್ದರು. ಅವರ ಈ ಮಾತುಗಳು ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿರುವವರಿಗೆ ಮಾಡಿದ ಅವಮಾನವಲ್ಲವೇ’ ಎಂದು ಮೋದಿ ಜನರನ್ನು ಪ್ರಶ್ನಿಸಿದ್ದಾರೆ.
ಎಮಿಸ್ಯಾಟ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದಕ್ಕಾಗಿ ಅವರು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ ಮತ್ತು ಅವರ ಸಾಧನೆಗಳನ್ನು ಕೊಂಡಾಡಿದ್ದಾರೆ.
ಮಹಾರಾಷ್ಟ್ರದ ಕಾಂಗ್ರೆಸ್ -ಎನ್ಸಿಪಿ ಮೈತ್ರಿಯ ವಿರುದ್ಧ ಹರಿಹಾಯ್ದ ಅವರು, ಎನ್ಸಿಪಿಯೊಳಗಿನ ಕಲಹದ ಬಗ್ಗೆ ಪ್ರಸ್ತಾಪಿಸಿದರು. ಪಕ್ಷ ಶರದ್ ಪವಾರ್ ಅವರ ನಿಯಂತ್ರಣದಿಂದ ಕೈಜಾರಿ ಹೋಗುತ್ತಿದೆ ಎಂದರು. ಸನ್ನಿವೇಶ ಸಕಾರಾತ್ಮಕವಾಗಿಲ್ಲ ಎಂದು ಅರಿತುಕೊಂಡು ಪವಾರ್ ಅವರು ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ ಎಂದರು.
‘ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್ ಸಿಪಿ ನಡುವಣ ಮೈತ್ರಿ ಕುಂಭಕರ್ಣನಿದ್ದಂತೆ. ಅಧಿಕಾರದಲ್ಲಿದ್ದಾಗ ಆರು ತಿಂಗಳುಗಳ ಕಾಲ ಮಲಗುತ್ತಾರೆ, ಬಳಿಕ ಎದ್ದು ಸಾರ್ವಜನಿಕರ ದುಡ್ಡು ತಿಂದು ಮಲಗುತ್ತಾರೆ’ ಎಂದರು.
ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದ ಅವರು, ನಿಮಗೆ ನಮ್ಮ ರಾಷ್ಟ್ರದ ಹೀರೋಗಳು ಬೇಕೇ ಅಥವಾ ಪಾಕಿಸ್ಥಾನದಲ್ಲಿ ಹೀರೋ ಆಗಿರುವವರು ಬೇಕೇ ಎಂದು ಜನರನ್ನು ಪ್ರಶ್ನಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.