ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಶನಿವಾರದಿಂದ ಈಶಾನ್ಯ ಭಾರತದಲ್ಲಿ ತಮ್ಮ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯವನ್ನು ಆರಂಭ ಮಾಡಿದ್ದಾರೆ. ಅರುಣಾಚಲದಲ್ಲಿ ಇಂದು ಅವರು ಒಂದು ಸಮಾವೇಶವನ್ನು, ಅಸ್ಸಾಂನಲ್ಲಿ ಎರಡು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಸ್ಸಾಂನಲ್ಲಿ ಸಮಾವೇಶವನ್ನು ಆಯೋಜಿಸಿ ಮಾತನಾಡಿದ ಅವರು, ‘ಅಸ್ಸಾಂ ಮತ್ತು ಈಶಾನ್ಯ ಭಾರತದ ಇತರ ಭಾಗಗಳು ಅಕ್ರಮ ನುಸುಳುಕೋರರ ಸಮಸ್ಯೆಯಿಂದ ಬಳಲುತ್ತಿದೆ. ಇದಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರದ ನಿಯಮಗಳು ಕಾರಣವಾಗಿದೆ. ಜನಸಂಘದ ಮತ್ತು ಅಟಲ್ ಬಿಹಾರಿ ವಾಜಪೇಯಿಯಂತಹ ನಾಯಕರುಗಳು ಬಾಂಗ್ಲಾದೇಶದ ಸ್ವಾತಂತ್ರ್ಯದ ಬಗ್ಗೆ ಧ್ವನಿ ಎತ್ತಿದ್ದರು’ ಎಂದಿದ್ದಾರೆ.
ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದ ಅವರು, ‘ಅವರು ಚೌಕಿದಾರರನ್ನು ದ್ವೇಷಿಸುತ್ತಾರೆ, ಅವರಿಗೆ ಚಾಯ್ವಾಲನೊಂದಿಗೂ ಸಮಸ್ಯೆಯಿದೆ. ನಾನಂದುಕೊಂಡಿದ್ದೆ ಅವರು ಒಬ್ಬ ಚಾಯ್ವಾಲಾನನ್ನು ಮಾತ್ರ ದ್ವೇಷಿಸುತ್ತಾರೆ ಎಂದು, ಆದರೆ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ನಾನು ಅರ್ಥ ಮಾಡಿಕೊಂಡೆ, ಅವರಿಗೆ ಚಾಯ್ ಜೊತೆಗೆ ಸಂಬಂಧ ಹೊಂದಿದವರ ಬಗ್ಗೆಯೂ ದ್ವೇಷ ಇದೆ ಎಂದು’ ಎಂದಿದ್ದಾರೆ.
‘7 ದಶಕಗಳಿಂದ ಚಹಾ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಅವರು ಪರಿಹಾರ ಹುಡುಕಿಲ್ಲ. ಅವರಿಗೆ ಮೂಲಕ ಅವಶ್ಯಕತೆಗಳನ್ನೂ ಒದಗಿಸಿಕೊಟ್ಟಿಲ್ಲ. ಕೇವಲ ಚಾಯ್ವಾಲನಿಗೆ ಮಾತ್ರ ಚಾಯ್ವಾಲನ ಸಮಸ್ಯೆ ಅರ್ಥ ಆಗುತ್ತದೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.