ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶುಕ್ರವಾರ ಬೊಲಿವಿಯಾಗೆ ಭೇಟಿಯನ್ನು ನೀಡಿದ್ದಾರೆ. ಈ ಮೂಲಕ ಬೊಲಿವಿಯಾಗೆ ತೆರಳಿದ ಭಾರತದ ಮೊದಲ ರಾಷ್ಟ್ರಪತಿ ಎನಿಸಿಕೊಂಡಿದ್ದಾರೆ. ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಭಾಗವಾಗಿ ಅವರು ಈ ದೇಶಕ್ಕೆ ಭೇಟಿ ಕೊಟ್ಟಿದ್ದಾರೆ. ಬೊಲಿವಿಯಾದ ಅಧ್ಯಕ್ಷ ಯುವೋ ಮೊರಲ್ಸ್ ಸಂತಕ್ರೂಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡರು. ಕೋವಿಂದ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಗಾರ್ಡ್ ಆಫ್ ಹಾನರ್ ನೀಡಿ ಗೌರವಿಸಲಾಯಿತು . ಅಲ್ಲದೇ ಅವರಿಗೆ ಸಂತ ಕ್ರೋಸ್ ನಗರದ ಕೀಯನ್ನು ಹಸ್ತಾಂತರಿಸಲಾಯಿತು.
ಸಂತಕ್ರೂಸ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇಂದು ಭಾರತ ಮತ್ತು ಬೊಲಿವಿಯಾ ದ್ವಿಪಕ್ಷೀಯ ಬಾಂಧವ್ಯದ ಐತಿಹಾಸಿಕ ದಿನ ಎಂದು ಬಣ್ಣಿಸಿದರು. ತನ್ನ ಮೂರು ದಿನಗಳ ಪ್ರವಾಸದಲ್ಲಿ ಕೋವಿಂದ್ ಅವರು ಅಲ್ಲಿನ ಅಧ್ಯಕ್ಷರೊಂದಿಗೆ ನಿಯೋಗ ಮಟ್ಟದ ಮಾತುಕತೆಯನ್ನು ನಡೆಸಲಿದ್ದಾರೆ. ಅಲ್ಲದೇ ಇಂಡಿಯಾ- ಬೊಲಿವಿಯ ಬಿಸಿನೆಸ್ ಫೋರಂ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ಸಂತ ಕ್ರೋಸ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಲಿದ್ದಾರೆ.
ಮಾತ್ರವಲ್ಲದೇ, ಸಂಸ್ಕೃತಿ, ಬಾಹ್ಯಾಕಾಶ, ಮೈನಿಂಗ್, ರಾಜತಾಂತ್ರಿಕ ಅಕಾಡೆಮಿಗಳ ವಿನಿಮಯ ಮತ್ತು ಸಾಂಪ್ರದಾಯಿಕ ಮೆಡಿಸಿನ್ ಸೇರಿದಂತೆ 8 ವಿವಿಧ ಕ್ಷೇತ್ರಗಳಲ್ಲಿ ಭಾರತ ಮತ್ತು ಬೊಲಿವಿಯಾ ಒಪ್ಪಂದಗಳಿಗೆ ಸಹಿ ಹಾಕಿದೆ.
ಕಳೆದ ಬುಧವಾರ ರಾಷ್ಟ್ರಪತಿಗಳು ಕ್ರೋಷಿಯದಲ್ಲಿ ಇಂಡಿಯನ್ ಎಕನಾಮಿಕ್ ಫೋರಂ ಅನ್ನು ಉದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಅವರು ಕ್ರೋಷಿಯಾದ ಜನರು ನವಭಾರತದ ಆರ್ಥಿಕ ಶಕ್ತಿ ಕ್ರಿಯಾಶೀಲತೆ ಮತ್ತು ವೈಭವದ ಅನುಭವವನ್ನು ಪಡೆಯುವ ಅಗತ್ಯವಿದೆ. ಭಾರತ ಬದಲಾಗುತ್ತಿದೆ ಅತಿ ವೇಗದಲ್ಲಿ ಬದಲಾಗುತ್ತಿದೆ ಅಂತರಾಷ್ಟ್ರೀಯ ಸಮುದಾಯದ ಹೊಸ ಹೂಡಿಕೆಯಲ್ಲಿನ ಬದಲಾವಣೆಯಲ್ಲಿ ನಂಬಿಕೆಯನ್ನು ತೋರಿಸಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.