ನವದೆಹಲಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯು ‘ಉಗ್ರ ಹಣಕಾಸು ನಿಗ್ರಹ’ ನಿರ್ಣಯವನ್ನು ಎಲ್ಲಾ ರಾಷ್ಟ್ರಗಳು ಕೈಗೊಳ್ಳಬೇಕು ಎಂದು ಕರೆ ನೀಡಿರುವುದನ್ನು ಭಾರತ ಸ್ವಾಗತ ಮಾಡಿದೆ. ಅಲ್ಲದೇ, ಇದನ್ನು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದೆ. ಉಗ್ರರಿಗೆ ಹಣ ಪೂರೈಕೆಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕರೆಯನ್ನು ನೀಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ, ವಿಶ್ವಸಂಸ್ಥೆಯಲ್ಲಿನ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅವರು, ‘ಉಗ್ರ ಹಣಕಾಸು ನಿಗ್ರ ಕಾರ್ಯಪಡೆಯ ನಿರ್ಣಯವನ್ನು ನಾವು ಸ್ವಾಗತ ಮಾಡುತ್ತೇವೆ. ಯಾವುದೇ ನಿರ್ಣಯದ ಪ್ರಯೋಜನವು ಅದರ ಅನುಷ್ಠಾನದಲ್ಲಿರುತ್ತದೆ’ ಎಂದು ಹೇಳಿದ್ದಾರೆ. ಯುಎನ್ ತೆಗೆದುಕೊಂಡಿರುವ ಈ ಹೆಜ್ಜೆಯನ್ನು ಅವರು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಆದರೆ ಪಾಕಿಸ್ಥಾನದಂತಹ ಭಯೋತ್ಪಾದಕ ವಾದಿ ರಾಷ್ಟ್ರಗಳು ಉಗ್ರರ ಆರ್ಥಿಕ ಮತ್ತು ಇತರ ನೆರವು ನೀಡುವುದನ್ನು ಮುಂದುವರೆಸಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಗ್ರರಿಗೆ ಹಣಕಾಸು ಪೂರೈಕೆಯಾಗುವುದನ್ನು, ಅದರಲ್ಲೂ ಹೊಸ ವಿಧಾನದಲ್ಲಿ ಹಣಕಾಸು ನೆರವುಗಳು ಸಿಗುವುದನ್ನು ತಡೆಗಟ್ಟುವ ಸಲುವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಗುರುವಾರ, ‘ಉಗ್ರ ನೆರವು ನಿಗ್ರಹ’ ನಿರ್ಣಯ ಅಂಗೀಕರಿಸುವಂತೆ ಕರೆ ನೀಡಿದೆ. ಫ್ರಾನ್ಸ್ನಿಂದ ಆರಂಭಿಸಿಲಾದ, 2462 ನಿರ್ಣಯವು ಪ್ರಸ್ತುತ ಇರುವ ನಿರ್ಣಯವನ್ನು ಅಪ್ ಡೇಟ್ ಮಾಡಲಿದೆ ಮತ್ತು ಅವುಗಳನ್ನು ಹೊಸ ಸ್ವರೂಪದಲ್ಲಿ ಉಗ್ರರಿಗೆ ಸಂದಾಯವಾಗುತ್ತಿರುವ ಹಣಕಾಸು ನೆರವು ಮತ್ತು ಈ ಕ್ಷೇತ್ರದಲ್ಲಿನ ಹೊಸ ಸವಾಲುಗಳಿಗೆ ಅನ್ವಯಪಡಿಸಲಾಗುತ್ತದೆ.
”ಭಯೋತ್ಪಾದಕರಿಗೆ ಹಣ ಪೂರೈಕೆಯಾಗುವುದನ್ನು ತಡೆಯಲು ಉಗ್ರ ಹಣಕಾಸು ನಿಗ್ರಹ ನಿರ್ಣಯವನ್ನು ಎಲ್ಲಾ ಸದಸ್ಯ ರಾಷ್ಟ್ರಗಳು ಕೈಗೊಳ್ಳಬೇಕೆಂದು ವಿಶ್ವಸಂಸ್ಥೆಯ ನೀಡಿದ ಕರೆಯನ್ನು ನಾವು ಸ್ವಾಗತಿಸುತ್ತೇವೆ. ಉಗ್ರ ಹಣಕಾಸು ನಿಗ್ರಹ ಕಾರ್ಯ ಪಡೆ ವಹಿಸುವ ಪಾತ್ರ ಅತ್ಯಂತ ನಿರ್ಣಾಯಕವಾಗಲಿದೆ. ವಿಶ್ವಸಂಸ್ಥೆಯ ನಿರ್ಣಯದ ಯಶಸ್ಸಿಗೆ ಅದರ ಅನುಷ್ಠಾನ ಅತೀ ಮುಖ್ಯವಾಗಿದೆ” ಎಂದು ಅಕ್ಬರುದ್ದೀನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.