ನವದೆಹಲಿ: ಪಾಕಿಸ್ಥಾನದ ಗಡಿಯೊಳಗೆ ನುಗ್ಗಿ ಭಾರತ ವೈಮಾನಿಕ ದಾಳಿಯನ್ನು ನಡೆಸಿ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರಗಳನ್ನು ನಾಶಪಡಿಸಿದ ಬಳಿಕ, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿದ್ದ ನಾಲ್ಕು ಜಿಹಾದಿ ಶಿಬಿರಗಳನ್ನು ಮುಚ್ಚಲಾಗಿದೆ. ಭಾರತೀಯ ಸೇನೆ ಮತ್ತಷ್ಟು ದಾಳಿಗಳನ್ನು ನಡೆಸಬಹುದು ಎಂಬ ಭಯಕ್ಕೆ ಇವುಗಳನ್ನು ಮುಚ್ಚಲಾಗಿದೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.
ಜಿಹಾದಿ ಶಿಬಿರಗಳನ್ನು ಮುಚ್ಚುವ ನಿರ್ಧಾರವನ್ನು ಮಾರ್ಚ್ 16 ರಂದು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿನ ನಿಕಿಯಾಲ್ನಲ್ಲಿ ತೆಗೆದುಕೊಳ್ಳಲಾಗಿದೆ. ಲಷ್ಕರ್-ಇ-ತೋಯ್ಬಾ ಉಗ್ರ ಅಶ್ಫಾಕ್ ಬರ್ವಾಲ್ ಎಂಬಾತ ಐಎಸ್ಐ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯ ತರುವಾಯ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಗುಪ್ತಚರ ಇಲಾಖೆಯು ಸಭೆಯಲ್ಲಿನ ಮಾತುಕತೆಯ ಮಾಹಿತಿಯನ್ನು ಬೇರೆ ಮೂಲದಿಂದ ಪಡೆದ ಬಳಿಕ ಈ ಘಟನೆಯ ಬೆಳವಣಿಗೆ ಬೆಳಕಿಗೆ ಬಂದಿದೆ.
ಕೊಟಿಲ್, ನಿಕಿಯಾಲ್, ಪಲ, ಬಾಘ್ ಪ್ರದೇಶಗಳಲ್ಲಿ ಉಗ್ರ ಶಿಬಿರಗಳನ್ನು ಮತ್ತು ಕಛೇರಿಗಳನ್ನು ಮುಚ್ಚಲಾಗಿದೆ. ಇವುಗಳನ್ನು ಉಗ್ರ ಬರ್ವಾಲ್ ನಿಯಂತ್ರಿಸುತ್ತಿದ್ದ, ಆದರೆ ಇವುಗಳು ಜೈಶೇ ಇ ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಶಿಬಿರಗಳಾಗಿದ್ದವು ಎನ್ನಲಾಗಿದೆ.
ಆದರೆ ಇನ್ನೊಂದು ಕಡೆ, ಪಾಕಿಸ್ಥಾನ ಮಾತ್ರ ಗಡಿಯಲ್ಲಿ ಕದನವಿರಾಮ ಉಲ್ಲಂಘನೆಯನ್ನು ನಿಲ್ಲಿಸುವ ಯಾವುದೇ ಸೂಚನೆಯನ್ನು ನೀಡುತ್ತಿಲ್ಲ. 2019ರಲ್ಲಿ ಈಗಾಗಲೇ ಅದು 634 ಬಾರಿ ಕದನವಿರಾಮ ಉಲ್ಲಂಘನೆ ಮಾಡಿದೆ. ಕಳೆದ ವರ್ಷ 1,629 ಇಂತಹ ಘಟನೆಗಳು ನಡೆದಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.