ಮೀರತ್ : ಉತ್ತರಪ್ರದೇಶದ ಮೀರತ್ನಲ್ಲಿ ಗುರುವಾರ ಮೆಗಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ‘ದಮ್ದಾರ್ ಚೌಕೀದಾರ್ (ಬಲಿಷ್ಠ ಕಾವಲುಗಾರ) ಮತ್ತು ದಾಗ್ ದಾರ್ ಸರ್ಕಾರ (ಭ್ರಷ್ಟ ಸರ್ಕಾರ)ದ ನಡುವಣ ಆಯ್ಕೆಯನ್ನು ಮಾಡಿಕೊಳ್ಳುವಂತೆ ಮತದಾರರಿಗೆ ಕರೆಯನ್ನು ನೀಡಿದರು. ಇಂದಿನಿಂದ ಲೋಕಸಭಾ ಚುನಾವಣಾ ಪ್ರಚಾರ ಪ್ರಾರಂಭಿಸಿರುವ ಪ್ರಧಾನಿ ಮೋದಿ ಮೀರತ್ನಲ್ಲಿ ವಿಪಕ್ಷಗಳ ವಿರುದ್ಧ ಕಹಳೆ ಊದಿದ್ದಾರೆ.
ಭಾರತ ಯಾರಿಗೆ ಮತ ಚಲಾಯಿಸಬೇಕು ಎಂಬುದನ್ನು ಈಗಾಗಲೇ ನಿರ್ಧರಿಸಿದೆ. ಒಂದು ಕಡೆ ಬಲಿಷ್ಠ ಕಾವಲುಗಾರರಿದ್ದರೆ, ಇನ್ನೊಂದು ಕಡೆ ಭ್ರಷ್ಟ ಸರಕಾರದ ಆಯ್ಕೆ ಇದೆ ಎಂದರು.
ಯುಪಿಎ ಸರ್ಕಾರದ ಮೃದು ಉಗ್ರ ವಿರೋಧಿ ನೀತಿಯನ್ನು ಟೀಕಿಸಿದ ಅವರು, ಉಗ್ರನ ವಿರುದ್ಧ ಕ್ರಮ ಜರುಗಿಸುವ ಮುನ್ನ ಅವರು ಆತನ ಧರ್ಮ ಯಾವುದೆಂದು ನೋಡಿ ಮತ್ತೆ ನಿರ್ಧರಿಸುತ್ತಿದ್ದರು. ಭೂಮಿ, ಆಕಾಶ ಮತ್ತು ಬಾಹ್ಯಾಕಾಶ ಎಲ್ಲಾ ಕಡೆಯೂ ಸರ್ಜಿಕಲ್ ಸ್ಟ್ರೈಕ್ ಮಾಡುವ ಸಾಹಸವನ್ನು ನನ್ನ ಸರ್ಕಾರ ತೋರಿಸಿದೆ ಎಂದರು.
‘ಐದು ವರ್ಷಗಳ ಹಿಂದೆ, ನಾನು ನಿಮ್ಮ ಆಶೀರ್ವಾದ ಕೇಳಿದಾಗ ನೀವು ಅಪಾರ ಪ್ರೀತಿಯನ್ನು ತೋರಿಸಿದ್ದೀರಿ. ನಿಮ್ಮ ಆಶಿರ್ವಾದ ಮತ್ತು ಪ್ರೀತಿಯನ್ನು ಬಡ್ಡಿ ಸಮೇತ ತೀರಿಸುವ ಭರವಸೆಯನ್ನು ನೀಡಿದ್ದೆ, ನಾನು ಮಾಡಿದ ಕೆಲಸಕ್ಕೆ ದಾಖಲೆಯನ್ನೂ ಒದಗಿಸುತ್ತೇನೆ ಎಂದಿದ್ದೆ. ಈ ಚೌಕಿದಾರ ಯಾವ ಅನ್ಯಾಯವನ್ನೂ ಮಾಡಿಲ್ಲ, ಭಾರತವೀಗ ಯಾರಿಗೆ ವೋಟ್ ನೀಡಬೇಕು ಎಂಬುದನ್ನು ನಿರ್ಧರಿಸಿದೆ’ ಎಂದಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆ, ನಿರ್ಣಾಯಕ ಸರ್ಕಾರ ಮತ್ತು ನಿರ್ಣಯವಿಲ್ಲದ ಸರ್ಕಾರದ ನಡುವಣ ಹೋರಾಟ ಎಂದಿದ್ದಾರೆ.
‘ದೇಶದ ಸಮಗ್ರತೆಯನ್ನು ಕಾಪಾಡುವ ನಮ್ಮ ಕ್ರಮವನ್ನು ಅವರು ಪ್ರಶ್ನಿಸಿದ್ದಾರೆ. ಗಡಿಯಲ್ಲಿ ಉಗ್ರ ಶಿಬಿರದ ಮೇಲೆ ಯಾಕೆ ದಾಳಿ ನಡೆಸಿದ್ದು ಎಂದು ಪ್ರಶ್ನಿಸಿದ್ದಾರೆ. ಪಾಕಿಸ್ಥಾನದ ಹೀರೋಗಳಾಗಲು ಅವರು ಸ್ಪರ್ಧೆ ನಡೆಸುತ್ತಿದ್ದಾರೆ. ನಮ್ಮ ದೇಶಕ್ಕೆ ಭಾರತದ ಹೀರೋಗಳು ಬೇಕಾ ಅಥವಾ ಪಾಕಿಸ್ಥಾನದ ಹೀರೋಗಳು ಬೇಕಾ”‘ ಎಂದು ಮೋದಿ ಪ್ರಶ್ನಿಸಿದ್ದಾರೆ.
‘ಕೆಲವು ಜಾಣರು ನಿನ್ನೆ ನಾನು ಮಾಡಿದ ಭಾಷಣದ ಬಗ್ಗೆ ಗೊಂದಲಕ್ಕೀಡಾಗಿದ್ದಾರೆ. ನಾನು ಥಿಯೇಟರ್ ಸೆಟ್ನಲ್ಲಿ ಕುಳಿತು ಮಾತನಾಡುತ್ತಿದ್ದೇನೆ ಎಂದು ಭಾವಿಸಿದ್ದರು. ಥಿಯೇಟರ್ ಸೆಟ್ ಮತ್ತು ಆ್ಯಂಟಿ ಸೆಟ್ಲೈಟ್ ಮಿಶನ್ ನಡುವಣ ವ್ಯತ್ಯಾಸ ಗೊತ್ತಿಲ್ಲದ ಇಂತವರ ಬಗ್ಗೆ ನಾವು ಅಳಬೇಕೋ ಅಥವಾ ನಗಬೇಕೋ ಎಂದು ತಿಳಿಯುತ್ತಿಲ್ಲ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.