ನವದೆಹಲಿ: ‘ಮಿಶನ್ ಶಕ್ತಿ’ ಯಶಸ್ಸಿನ ಶ್ರೇಯಸ್ಸನ್ನು ತೆಗೆದುಕೊಳ್ಳಲು ಮುಂದಾಗುತ್ತಿರುವ ಕಾಂಗ್ರೆಸ್ ವಿರುದ್ಧ, ಡಿಆರ್ಡಿಓ ಮಾಜಿ ಮುಖ್ಯಸ್ಥ ಡಾ. ವಿ.ಕೆ ಸಾರಸ್ವತ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಪ್ರಯತ್ನಕ್ಕೆ ಯುಪಿಎ ಸರ್ಕಾರ ಸಕಾರಾತ್ಮಕ ಸ್ಪಂದನೆಯನ್ನು ನೀಡಿರಲಿಲ್ಲ ಎಂದು ಅವರು ಆಪಾದಿಸಿದ್ದಾರೆ.
ಡಾ.ಸಾರಸ್ವತ್ ಅವರ ಪ್ರಕಾರ, ಅವರು ಮತ್ತು ಇತರ ಅಧಿಕಾರಿಗಳು ಯುಪಿಎ ಸರ್ಕಾರದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಭದ್ರತಾ ಮಂಡಳಿಯ ಮುಂದೆ ’ಮಿಶನ್ ಶಕ್ತಿ’ಯ ಪ್ರದರ್ಶನವನ್ನು ನೀಡಿತ್ತು. ಈ ಬಗ್ಗೆ ಚರ್ಚೆಯೂ ನಡೆಯಿತು, ಎಲ್ಲಾ ಯುಪಿಎ ಪಕ್ಷಗಳು ಇದರಲ್ಲಿ ಭಾಗಿಯಾಗಿದ್ದವು. ಆದರೆ ದುರಾದೃಷ್ಟವಶಾತ್ ಸರ್ಕಾರದಿಂದ ಪ್ರಯೋಗಕ್ಕೆ ಯಾವುದೇ ಸಕರಾತ್ಮಕ ಸ್ಪಂದನೆಗಳು ಸರ್ಕಾರದಿಂದ ಬರಲೇ ಇಲ್ಲ.
ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ಈ ಪ್ರಸ್ತಾಪವನ್ನು ಸರ್ಕಾರದ ಮುಂದೆ ಮತ್ತೆ ಇಡಲಾಯಿತು. ಈಗಿನ ಡಿಆರ್ಡಿಓ ಮುಖ್ಯಸ್ಥ ಸತೀಶ್ ರೆಡ್ಡಿಯವರು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಮೋದಿ ಮುಂದೆ ಪ್ರಸ್ತಾಪ ಇಟ್ಟಾಗ ಅವರಿಂದ ಸಕಾರಾತ್ಮಕ ಸ್ಪಂದನೆಗಳು ಬಂದವು.
ಒಂದು ವೇಳೆ 2012-13ರಲ್ಲಿ ಯುಪಿಎ ಸರ್ಕಾರ ಅನುಮೋದನೆಯನ್ನು ನೀಡಿದ್ದರೆ, ಭಾರತ 2014-15ರ ವೇಳೆಗೆ ಭಾರತ ಆ್ಯಂಟಿ ಸೆಟ್ಲೈಟ್ ಮಿಸೈಲ್ ಅನ್ನು ಅಭಿವೃದ್ಧಿಪಡಿಸುತ್ತಿತ್ತು ಎಂದು ಸಾರಸ್ವತ್ ಅಭಿಪ್ರಾಯಿಸಿದ್ದಾರೆ.
ಡಿಆರ್ಡಿಓ ಮತ್ತು ಇತರ ಭಾರತೀಯ ಸಂಸ್ಥೆಗಳು ಎ-ಸ್ಯಾಟ್ ಆ್ಯಂಟಿ ಸೆಟ್ಲೈಟ್ ಮಿಸೈಲ್ ಅನ್ನು ಯಶಸ್ವಿಯಾಗಿ ಪರೀಕ್ಷೆ ಮಾಡುವ ಮೂಲಕ ಬುಧವಾರ ಇತಿಹಾಸವನ್ನು ನಿರ್ಮಾಣ ಮಾಡಿವೆ. ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ಕ್ಷಿಪಣಿ ಇದಾಗಿದೆ.
Former DRDO Chief Dr VK Saraswat on #MissionShakti: We made presentations to National Security Adviser&National Security Council, when such discussions were held, they were heard by all concerned, unfortunately, we didn’t get positive response (from UPA), so we didn’t go ahead. pic.twitter.com/qJDMtc3Kf2
— ANI (@ANI) March 27, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.