ನವದೆಹಲಿ: ದೆಹಲಿ ಮತ್ತು ಎನ್ಸಿಆರ್ನಲ್ಲಿನ ಶಾಲೆಗಳು ಮುಂಬರುವ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮತದಾನ ಅರಿವು ಅಭಿಯಾನವನ್ನು ಆರಂಭಿಸಲು ನಿರ್ಧರಿಸಿವೆ. ವಿದ್ಯಾರ್ಥಿಗಳನ್ನು ಚುನಾವಣಾ ರಾಯಭಾರಿಗಳನ್ನಾಗಿಸುವ ಮತ್ತು ಜನರನ್ನು ಮತದಾನ ಮಾಡಲು ಪ್ರೇರೇಪಿಸುವಂತೆ ಉತ್ತೇಜಿಸಲು ಈ ಅಭಿಯಾನವನ್ನು ನಡೆಸಲಾಗುತ್ತದೆ. ಹೊಸ ಶೈಕ್ಷಣಿಕ ಸೆಷನ್ ಒನ್ನಷ್ಟೇ ಆರಂಭವಾಗುಬೇಕಿರುವ ಹಿನ್ನಲೆಯಲ್ಲಿ, ಈ ಅಭಿಯಾನ ಮಕ್ಕಳಲ್ಲಿ ಚುನಾವಣಾ ಕುರಿತ ಜಾಗೃತಿಯನ್ನು ಬೆಳೆಸಲು ಸಹಕಾರಿಯಾಗಲಿದೆ. ಅವರಿಗೆ ಚುನಾವಣಾ ಸಂಬಂಧಿತ ತರಬೇತಿ, ಅನುಭವ ಮತ್ತು ಜ್ಞಾನಗಳನ್ನು ಈ ಅಭಿಯಾನ ನೀಡಲಿದೆ.
ಎಪ್ರಿಲ್ ತಿಂಗಳಲ್ಲಿ ಈ ಅಭಿಯಾನ ನಡೆಯಲಿದೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಲಾ ಪ್ರಾಂಶುಪಾಲೆ ಸೀಮಾ ತ್ರಿಖಾ ಅವರು, ‘ ವಿದ್ಯಾರ್ಥಿಗಳಿಗೆ ಮತದಾನದ ಮೌಲ್ಯವನ್ನು ತಿಳಿಸಿಕೊಡುವ ಸಲುವಾಗಿ ಸರಣಿ ಕಾರ್ಯಕ್ರಮಗಳನ್ನು ನಾವು ಯೋಜಿಸಿದ್ದೇವೆ. ಅವರು ಶಾಲಾ ಶಿಕ್ಷಣವನ್ನು ಮುಗಿಸಿ ಮೊದಲ ಮತದಾರರಾಗಿ ಹೊಮ್ಮುವ ವೇಳೆಗೆ ನಾವು ಅವರ ಚುನಾವಣಾ ಜ್ಞಾನವನ್ನು ವೃದ್ಧಿಸುವ ಕಾರ್ಯವನ್ನು ಮಾಡುತ್ತಿದ್ದೇವೆ’ ಎಂದಿದ್ದಾರೆ.
ತಮ್ಮ ತಮ್ಮ ಪ್ರದೇಶಗಳಲ್ಲಿ ವಿದ್ಯಾರ್ಥಿಗಳನ್ನು ಚುನಾವಣಾ ರಾಯಭಾರಿಗಳಂತೆ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಲಾಗುವುದು, ತಾವು ಶಾಲೆಯಲ್ಲಿ ಪಡೆದ ಜ್ಞಾನವನ್ನು ಸ್ಥಳಿಯ ಸ್ಲಂ ಪ್ರದೇಶಗಳಿಗೆ ತೆರಳಿ ಹಂಚಿಕೊಳ್ಳುವಂತೆ ಇವರಿಗೆ ಉತ್ತೇಜಿಸಲಾಗುವುದು ಎಂದಿದ್ದಾರೆ.
ಮಕ್ಕಳಿಗೆ ಸಂವಿಧಾನ, ಶಾಸಕಾಂಗ, ಕಾನೂನು ಪ್ರಕ್ರಿಯೆಗಳು, ತಂತ್ರಜ್ಞಾನ ನಾವೀಣ್ಯತೆಗಳನ್ನೂ ಈ ಮೂಲಕ ಕಲಿಸಿಕೊಡಲಾಗುವುದು. ಚುನಾವಣಾ ಆಯೋಗದ ಕಾರ್ಯ, ಮಾಧ್ಯಮಗಳ ಪಾತ್ರ ಮತ್ತು ಒಟ್ಟಾರೆ ಚುನಾವಣೆಯ ಪ್ರಕ್ರಿಯೆಗಳ ಬಗ್ಗೆಯೂ ತಿಳಿಸಿಕೊಡಲಾಗುವುದು ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.