ನವದೆಹಲಿ: ಶ್ರೀಲಂಕಾದ ದಿಯತಲಾವದಲ್ಲಿ ಭಾರತ ಮತ್ತು ಶ್ರೀಲಂಕಾ ಸೇನಾ ಪಡೆಗಳ ನಡುವೆ ‘ಮಿತ್ರಶಕ್ತಿ-VI’ ಜಂಟಿ ಸಮರಾಭ್ಯಾಸ ಇಂದಿನಿಂದ ಆರಂಭಗೊಂಡಿದೆ. 11 ಅಧಿಕಾರಿಗಳು ಸೇರಿದಂತೆ 120 ಸಿಬ್ಬಂದಿಗಳನ್ನು ಒಳಗೊಂಡ ಭಾರತೀಯ ತಂಡ ಸೋಮವಾರವೇ ಎರಡು ವಾರಗಳ ಜಂಟಿ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುವ ಸಲುವಾಗಿ ಶ್ರೀಲಂಕಾಗೆ ಬಂದಿಳಿದಿತ್ತು. ಈ ಸಮರಾಭ್ಯಾಸ ವಾರ್ಷಿಕ ಕಾರ್ಯಕ್ರಮವಾಗಿದ್ದು, ಒಂದು ವರ್ಷ ಭಾರತದಲ್ಲಿ ನಡೆದರೆ, ಮತ್ತೊಂದು ವರ್ಷ ಶ್ರೀಲಂಕಾದಲ್ಲಿ ಜರಗುತ್ತದೆ.
ಮಿತ್ರಶಕ್ತಿಯು ಈ ಪ್ರದೇಶದಲ್ಲಿ ನಡೆಯುವ ಅತೀದೊಡ್ಡ ದ್ವಿಪಕ್ಷೀಯ ಸಮರಾಭ್ಯಾಸವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಸಮರಾಭ್ಯಾಸದ ಯಶಸ್ಸಿನಿಂದಾಗಿ, ಇದನ್ನು ಪ್ಲಟೂನ್ ಲೆವೆಲ್ ಎಂಗೇಜ್ಮೆಂಟ್ನಿಂದ, ಸಂಪೂರ್ಣ ಕಂಪನಿ ಲೆವೆಲ್ ಅಭ್ಯಾಸವಾಗಿ ಪರಿವರ್ತಿಸಲಾಗಿದೆ.
ಈ ಸಮರಾಭ್ಯಾಸವು, ಉಭಯ ದೇಶಗಳ ಸೈನ್ಯಗಳ ನಡುವಿನ ಪರಸ್ಪರ ಕಾರ್ಯಸಾಧ್ಯತೆ ಮತ್ತು ಪರಸ್ಪರ ಅರ್ಥೈಸುವಿಕೆಯನ್ನು ಹೆಚ್ಚಿಸಲು ಮತ್ತು ವೃತ್ತಿಪರ ಗೌರವ, ವೈಯಕ್ತಿಕ ಬಂಧ ಮತ್ತು ವ್ಯಾಪಕವಾದ ತರಬೇತಿ ಸಂವಾದವನ್ನು ವೃದ್ಧಿಸಲಿದೆ.
ರಾಷ್ಟ್ರವ್ಯಾಪಿ ಭಯೋತ್ಪಾದನೆ ಹತ್ತಿಕ್ಕುವಿಕೆ, ಜಂಟಿ ಯುದ್ಧತಂತ್ರದ ಕಾರ್ಯಾಚರಣೆಗಳ ನಿರ್ವಹಣೆ ಮತ್ತು ಯುದ್ಧ ಕೌಶಲ್ಯಗಳನ್ನು ನಿಭಾಯಿಸುವಲ್ಲಿ ಕೌಶಲಗಳ ನಿರ್ಮಾಣಕ್ಕೆ ಈ ಸಮರಾಭ್ಯಾಸವು ಸಹಾಯ ಮಾಡುತ್ತದೆ. ಇದು ಪರಸ್ಪರರ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಎರಡೂ ಸೈನ್ಯಗಳಿಗೂ ಕಲಿಯಲು ಸೂಕ್ತ ವೇದಿಕೆಯನ್ನು ಒದಗಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.