ನವದೆಹಲಿ: ಉತ್ಕಲ್ ಭಾರತ್ (ಯುಬಿ) ಪಕ್ಷವು ಬಿಜೆಪಿಯೊಂದಿಗೆ ಅಧಿಕೃತವಾಗಿ ವಿಲೀನಗೊಂಡಿದೆ. ಇದರ ಅಧ್ಯಕ್ಷ ಖರ್ಬೇಲ ಸ್ವೇನ್ ಮತ್ತು ಇತರ ಸದಸ್ಯರು ಇಂದು ಧರ್ಮೇಂದ್ರ ಪ್ರಧಾನ್ ಮತ್ತು ಇತರ ಹಿರಿಯ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಸ್ವೇನ್ ಅವರೊಂದಿಗೆ ಉತ್ಕಲ್ ಭಾರತದ ಇತರ ಸದಸ್ಯರಾದ ಶ್ರೀಹರ್ಷ ಸ್ವೇನ್ (ಕಾರ್ಯದರ್ಶಿ), ಸುರೇಶ್ ಕುಮಾರ್ ಸಾಹು (ಮಾಧ್ಯಮ ಮುಖ್ಯಸ್ಥ), ಜಗದೀಶ್ ಪ್ರಧಾನ್ (ಯುವ ಘಟಕ ಮುಖ್ಯಸ್ಥ), ದೇಬಬ್ರತ ತ್ರಿಪಾಠಿ (ಯುವ ಘಟಕ), ಪ್ರತ್ಯುಶ್ ನಾಯ್ಕ್ (ವಿದ್ಯಾರ್ಥಿ ಘಟಕ) ಮತ್ತು ಇತರರು ಬಿಜೆಪಿಗೆ ಸೇರ್ಪಡೆಗೊಂಡರು.
ಈ ಹಿಂದೆ ಖರ್ಬೇಲ ಅವರು ಬಲಸೋರ್ ಕ್ಷೇತ್ರದಿಂದ ಮೂರು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಗೊಂಡಿದ್ದಾರೆ. ಬಿಜೆಪಿಯನ್ನು ತೊರೆದ ಬಳಿಕ ಅವರು ಉತ್ಕಲ ಭಾರತ ಎಂಬ ಹೊಸ ಪ್ರಾದೇಶಿಕ ಪಕ್ಷವನ್ನು ಕಟ್ಟಿಕೊಂಡಿದ್ದರು. ಈ ಪಕ್ಷದಡಿಯಲ್ಲೇ ಅವರು 2014ರ ಚುನಾವಣೆಯನ್ನು ಎದುರಿಸಿದ್ದರು.
ಕಳೆದ ಐದು ವರ್ಷದಲ್ಲಿ, ಬಿಜೆಡಿ ಮತ್ತು ನವೀನ್ ಪಟ್ನಾಯಕ್ ಅವರ ದುರಾಡಳಿತದ ವಿರುದ್ಧ ಅವರು ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಕಳೆದ ಕೆಲ ಸಮಯದಿಂದ ಅವರು ಬಿಜೆಪಿಗೆ ಸೇರ್ಪಡೆಗೊಳ್ಳುವ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಹಲವಾರು ಸುತ್ತಿನ ಮಾತುಕತೆಯ ಬಳಿಕ ಅವರು ಅಂತಿಮವಾಗಿ ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ದೂರದೃಷ್ಟಿಯಿಂದ ಪ್ರೇರಿತನಾಗಿದ್ದೇನೆ, 5 ವರ್ಷದಲ್ಲಿ ಅವರು ಭಾರತವನ್ನು ಜಗತ್ತಿನ ಶಕ್ತಿಯನ್ನಾಗಿ ಪರಿವರ್ತಿಸಿದ್ದಾರೆ ಎಂದಿದ್ದಾರೆ. ಖಂದಮಾಲ್ ಲೋಕಸಭಾ ಕ್ಷೇತ್ರದಿಂದ ಅವರು ಬಿಜೆಪಿ ಸ್ಪರ್ಧಿಯಾಗಿ ಕಣಕ್ಕಿಳಿಯಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.