ನವದೆಹಲಿ: ಭಾರತ ಉಪ ಖಂಡದಲ್ಲಿ ರಫೆಲ್ ಯುದ್ಧವಿಮಾನಗಳು ಅತ್ಯಂತ ಶ್ರೇಷ್ಠ ಯುದ್ಧವಿಮಾನಗಳಾಗಿವೆ, ಇವುಗಳು ಒಂದು ಬಾರಿ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳಿಸಿದರೆ ಪಾಕಿಸ್ಥಾನ ವಾಸ್ತವ ಗಡಿ ರೇಖೆ ಅಥವಾ ಅಂತಾರಾಷ್ಟ್ರೀಯ ಗಡಿಯ ಸಮೀಪಕ್ಕೂ ಬರಲಾರದು ಎಂದು ಭಾರತೀಯ ವಾಯುಸೇನೆ ಮುಖ್ಯಸ್ಥ ಬಿಎಸ್ ಧನೋವಾ ಹೇಳಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘ರಫೆಲ್ ಬಂದ ಮೇಲೆ ನಮ್ಮ ವಾಯು ರಕ್ಷಣಾ ಸಾಮರ್ಥ್ಯ ದುಪ್ಪಟ್ಟಾಗಲಿದೆ ಮತ್ತು ಪಾಕಿಸ್ಥಾನ LOC ಅಥವಾ ಗಡಿ ಸಮೀಪಕ್ಕೂ ಬರುವ ಧೈರ್ಯವನ್ನು ಮಾಡಲಾರದು, ಪಾಕಿಸ್ಥಾನಕ್ಕೆ ಮರು ಉತ್ತರ ನೀಡಲೂ ಸಾಧ್ಯವಾಗದಂತಹ ಸಾಮರ್ಥ್ಯವನ್ನು ನಾವು ಹೊಂದಲಿದ್ದೇವೆ’ ಎಂದಿದ್ದಾರೆ.
ಫ್ರಾನ್ಸ್ ಕಂಪನಿಯೊಂದಿಗೆ 36 ರಫೆಲ್ ಯುದ್ಧವಿಮಾನವನ್ನು ಖರೀದಿ ಮಾಡುವ ಒಪ್ಪಂದವನ್ನು ಭಾರತ ಮಾಡಿಕೊಂಡಿದೆ. ನಿಗದಿಯಂತೆ ಸೆಪ್ಟಂಬರ್ ವೇಳೆಗೆ ರಫೆಲ್ ಭಾರತಕ್ಕೆ ಬರಲಿದೆ.
ರಫೆಲ್ Meteor air-to-air ಮಿಸೈಲ್ ಅನ್ನು ಹೊಂದಿರಲಿದ್ದು, ಈ ಮಿಸೈಲ್ ಗಂಟೆಗೆ 150 ಕಿಮೀ ವೇಗದಲ್ಲಿ ಶತ್ರುಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಲಿದೆ. ಒಂದು ಬಾರಿ ಇದು ವಾಯುಸೇನೆಗೆ ಸೇರ್ಪಡೆಗೊಂಡರೆ, ಪಾಕಿಸ್ಥಾನದ ಯುದ್ಧವಿಮಾನಗಳು ಭಾರತೀಯ ಗಡಿ ಸಮೀಪಕ್ಕೂ ಬರುವ ಧೈರ್ಯವನ್ನು ತೋರಿಸಲಾರವು ಎಂದು ಮಿಲಿಟರಿ ತಜ್ಞರುಗಳೂ ಅಭಿಪ್ರಾಯಿಸಿದ್ದಾರೆ.
ಭಾರತೀಯ ಉಪಖಂಡದಲ್ಲಿ ರಫೆಲ್, ಅತ್ಯುತ್ತಮ ಶಸ್ತ್ರಾಸ್ತ್ರ ಹೊಂದಿದ ಯುದ್ಧವಿಮಾನವಾಗಲಿದೆ. ಪಾಕಿಸ್ಥಾನ ಮತ್ತು ಚೀನಾ ಹೊಂದಿರುವ ಯುದ್ಧ ವಿಮಾನಗಳಿಗಿಂತಲೂ ಇದು ಹೋಲಿಕೆಯಲ್ಲಿ ಉತ್ತಮವಾಗಿರಲಿದೆ ಎಂದು ಧನೋವಾ ಅಭಿಪ್ರಾಯಿಸಿದ್ದಾರೆ.
ಚಿನೂಕ್ ಹೆಲಿಕಾಫ್ಟರ್ ಸೇರ್ಪಡೆಯ ಬಗ್ಗೆ ಮಾತನಾಡಿದ ಅವರು, ಈ ಹೆಲಿಕಾಫ್ಟರ್ಗಳು ಎತ್ತರ ಪ್ರದೇಶದಲ್ಲಿ ಕಾರ್ಯಾಚರಣೆಯ ವೇಳೆ ಸಾಕಷ್ಟು ಪ್ರಯೋಜನಕ್ಕೆ ಬರಲಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.