ನವದೆಹಲಿ: ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಲ್ಲಿ ಇಬ್ಬರು ಹಿಂದೂ ಹೆಣ್ಣುಮಕ್ಕಳ ಅಪಹರಣ, ಬಲವಂತದ ಮತಾಂತರ ಮತ್ತು ಮದುವೆಗೆ ಸಂಬಂಧಿಸಿದಂತೆ ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಇಸ್ಲಾಮಾಬಾದಿನಲ್ಲಿನ ಭಾರತೀಯ ಹೈ ಕಮಿಷನ್ನಿಂದ ವರದಿಯನ್ನು ಕೇಳಿದ್ದಾರೆ. ಹೋಳಿಯ ಸಂದರ್ಭದಲ್ಲಿ 15 ಮತ್ತು 13 ವರ್ಷದ ಹಿಂದೂ ಬಾಲಕಿಯರನ್ನು ಪಾಕಿಸ್ಥಾನದಲ್ಲಿ ಅಪಹರಣ ಮಾಡಲಾಗಿದೆ.
ಟ್ವಿಟ್ ಮಾಡಿರುವ ಸುಷ್ಮಾ ಸ್ವರಾಜ್ ಅವರು, ಈ ಪ್ರಕರಣದ ಬಗ್ಗೆ ವರದಿಯನ್ನು ನೀಡುವಂತೆ ಪಾಕಿಸ್ಥಾನದಲ್ಲಿನ ಭಾರತೀಯ ಹೈ ಕಮಿಷನ್ಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಶನಿವಾರ ಭಾರತ ಈ ಪ್ರಕರಣದ ಬಗ್ಗೆ ಖಂಡನೆಯನ್ನು ವ್ಯಕ್ತಪಡಿಸಿ ಪಾಕಿಸ್ಥಾನ ವಿದೇಶಾಂಗ ಸಚಿವಾಲಯಕ್ಕೆ ಅಧಿಕೃತ ಪತ್ರವನ್ನು ಬರೆದಿದೆ. ಮೂಲಗಳ ಪ್ರಕಾರ, ಪಾಕಿಸ್ಥಾನವು ತನ್ನದೇ ನಾಗರಿಕರ ಅದರಲ್ಲೂ ಅಲ್ಪಸಂಖ್ಯಾತ ಸಮುದಾಯ ರಕ್ಷಣೆ, ಭದ್ರತೆ ಮತ್ತು ಕಲ್ಯಾಣಕ್ಕಾಗಿ ಸಮರ್ಪಕವಾದ ಕ್ರಮಗಳನ್ನು ಜರುಗಿಸಬೇಕು ಎಂದಿದೆ.
ಬಾಲಕಿಯರ ತಂದೆ ಮತ್ತು ಸಹೋದರ ಅಪಹರಣದ ಬಗ್ಗೆ ವೀಡಿಯೋವೊಂದರಲ್ಲಿ ಹೇಳಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದು ಭಾರೀ ವೈರಲ್ ಆಗಿದೆ.
ಭಾರತದ ಖಂಡನೆಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ಥಾನ, ಇದು ನಮ್ಮ ಆಂತರಿಕ ವಿಷಯ ಎಂದಿದೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಸುಷ್ಮಾ ಅವರು, ‘ಹಿಂದೂ ಬಾಲಕಿಯರ ಅಪಹರಣದ ಬಗೆಗಿನ ವರದಿಯನ್ನು ನೀಡಲು ನಿಮಗೆ ಹೆದರಿಕೆಯಾಗುತ್ತದೆಯೇ? ಹೆದರಿಕೆ ತಪ್ಪಿತಸ್ಥ ಭಾವನೆಯೇ ಆಗಿದೆ’ ಎಂದಿದ್ದಾರೆ.
ಪಾಕಿಸ್ಥಾನದ ಹಲವಾರು ಭಾಗಗಳಲ್ಲಿ ಹಿಂದೂ ಬಾಲಕಿಯರನ್ನು ಅಪಹರಣ ಮಾಡಿ, ಬಲವಂತವಾಗಿ ಮತಾಂತರ ಮಾಡಿ ಬಳಿಕ ಅವರನ್ನು ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆ ಮಾಡಿಕೊಡುವುದು ಸರ್ವೇಸಾಮಾನ್ಯ ಎಂಬಂತಾಗಿದೆ. ಆದರೂ ಪಾಕಿಸ್ಥಾನದ ಸರ್ಕಾರ ಎಲ್ಲಾ ಗೊತ್ತಿದ್ದೂ ಗೊತ್ತಿಲ್ಲದವರಂತೆ ವರ್ತನೆ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.