ನವದೆಹಲಿ: ಲೋಕಸಭಾ ಚುನಾವಣೆಗೆ ಬಿಜೆಪಿ ಶನಿವಾರ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. 36 ಮಂದಿ ಅಭ್ಯರ್ಥಿಗಳ ಹೆಸರು ಪಟ್ಟಿಯಲ್ಲಿದೆ. ಆಂಧ್ರದ 23, ಮಹಾರಾಷ್ಟ್ರದ 6, ಒರಿಸ್ಸಾದ 5, ಅಸ್ಸಾಂ ಮತ್ತು ಮೇಘಾಲಯದ ತಲಾ 1 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.
ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರಾ ಅವರು, ಒರಿಸ್ಸಾದ ಪುರಿ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ. ಒರಿಸ್ಸಾದ ಬಿಜೆಪಿ ಮುಖಂಡ ಬಸಂತ್ ಪಾಂಡಾ ಅವರು ಕಾಲಹಂಡಿಯಿಂದ ಕಣಕ್ಕೆ ಇಳಿಯಲಿದ್ದಾರೆ. ಹಿರಿಯ ನಾಯಕ ಸುರೇಶ್ ಪೂಜಾರಿ ಬರ್ಹಗ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಅಮಿತ್ ಷಾ ನೇತೃತ್ವದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಪಟ್ಟಿಯನ್ನು ಅಂತಿಮಗೊಳಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವ ಅರುಣ್ ಜೇಟ್ಲಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ ಇದರಲ್ಲಿ ಭಾಗಿಯಾಗಿದ್ದರು.
ಎರಡನೇ ಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳೆಂದರೆ:-
ಆಂಧ್ರ ಪ್ರದೇಶ:
1. ಅರುಕು (ಎಸ್ಟಿ) – ಕೆ.ವಿ.ವಿ ಸತ್ಯನಾರಾಯಣ ರೆಡ್ಡಿ
2. ಶ್ರೀಕಾಕುಲಂ – ಪರ್ಲಾ ಸಂಬಮೂರ್ತಿ
3. ವಿಜಯನಗರ – ಪಿ ಸನ್ಯಾಸಿ ರಾಜು
4. ಅನಾಕಪಲ್ಲಿ – ಡಾ. ಗಂಡಿ ವೆಂಕಟ ಸತ್ಯನಾರಾಯಣ
5. ಕಾಕಿನಾಡ – ಯಲ್ಲವೆಂಕಟ ರಾಮಾಮೋಹನ
ರಾವ್ (ದೋರಾಬಾಬು)
6. ಅಮಲಪುರಂ (ಎಸ್ ಸಿ) – ಅಯ್ಯಜಿ ವೀಮಾ ಮನಪಲ್ಲಿ
7. ರಾಜಮಂಡ್ರಿ – ಸತ್ಯ ಗೋಪಿನಾಥ ದಾಸ್ಪರ್ವಸ್ತು
8. ನರಸಪುರಂ – ಪೈದಕೊಂಡ ಮನಿಕಲರಾವ್
9. ಎಲುರು – ಚಿನ್ನಮ್ ರಾಮ್ಕೋಟಯ
10. ಮಚಿಲಿಪಟ್ನಮ್ – ಗುಡಿವಕ ರಾಮಂಜನಾಯುಲು
11. ವಿಜಯವಾಡ – ದಿಲೀಪ್ ಕುಮಾರ್ ಕಿಲಾರು
12. ಗುಂಟೂರು – ವಲ್ಲೂರು ಜಯಾಪ್ರಕಾಶ್ ನಾರಾಯಣ
13. ಬಾಪತ್ಲಾ (ಎಸ್ಸಿ) – ಡಾ. ಚಳಗಲಿ ಕಿಶೋರ್ ಕುಮಾರ್
14. ಒಂಗೊಲ್ – ತೋಗುಂಟಾ ಶ್ರೀನಿವಾಸ್
15. ನಂದಿಲ್ – ಡಾ. ಅದಿನಾರಾಯಣ ಇಂಟಿ
16. ಕರ್ನೂಲ್ – ಡಾ. ಪಿ.ವಿ ಪಾರ್ಥಸಾರ್ತಿ
17. ಅನಂತಪುರ್ – ಹಂಸದೇವಿನಿನಿ
18. ಹಿಂದುಪುರ – ಪೊಗಾಲಾ ವೆಂಕಟ ಪಾರ್ಥಸಾರ್ತಿ
19. ಕಡಪ – ಸಿಂಗ ರೆಡ್ಡಿ ರಾಮಚಂದ್ರ
ರೆಡ್ಡಿ
20. ನೆಲ್ಲೂರು – ಸುರೇಶ್ ರೆಡ್ಡಿ ಸನ್ನಪರೇಡಿ
21. ತಿರುಪತಿ (ಎಸ್ಸಿ) – ಬೊಮಿ ಶ್ರೀ ಹರಿ ರಾವ್
22. ರಾಜ್ಪೇತ್ – ಪಾಪಿರೆಡಿ ಮಹೇಶ್ವರ ರೆಡ್ಡಿ
23. ಚಿತ್ತೂರು (ಎಸ್ಸಿ) – ಜಯರಾಮ್ ದುಗಾನಿ
ಅಸ್ಸಾಂ:
1. ತೇಜ್ಪುರ್ – ಎಸ್.ಜಿ.ಟಿ. ಪಲ್ಲಬ್ ಲೊಚನ್ ದಾಸ್
ಮಹಾರಾಷ್ಟ್ರ:
1. ಜಲ್ಗಾಂವ್ – ಶ್ರೀಮತಿ. ಸ್ಮಿತಾ ಉದಯ್ ವಾಘ್
2. ನಾಂದೇಡ್ – ಶ್ರೀ ಪ್ರತಾಪ್ ಪಾಟೀಲ್ ಚಿಕ್ಕಾಲಿಕರ್
3. ಡಿಂಡೋರಿ (ಎಸ್ಟಿ) – ಡಾ. ಭಾರತಿ ಪವಾರ್
4. ಪುಣೆ – ಗಿರೀಶ್ ಬಾಪತ್
5. ಬಾರಮತಿ – ಶ್ರೀಮತಿ. ಕಾಂಚನ್ ರಾಹುಲ್ ಕುಲ್
6. ಸೋಲಾಪುರ (ಎಸ್ಸಿ) – ಡಾ. ಜಯಸೀಶ್ವರ ಸ್ವಾಮಿ
ಮೇಘಾಲಯ:
1. ಶಿಲ್ಲಾಂಗ್ (ಎಸ್ ಟಿ) – ಶ್ರೀ ಸಾನ್ಬರ್ ಷುಲೈ, ಎಂಎಲ್ಎ
ಒಡಿಶಾ:
1. ಬರ್ಗಢ್ – ಶ್ರೀ ಸುರೇಶ್ ಪೂಜಾರಿ
2. ಸಂಬಲ್ಪುರ – ಶ್ರೀ ನಿತೀಶ್ ಗಂಗಾ ದೇಬ್
3. ಕಾಳಹಂಡಿ – ಶ್ರೀ ಬಸಂತ ಕುಮಾರ್ ಪಾಂಡ
4. ಪುರಿ – ಡಾ. ಸ್ಯಾಬಿಟ್ ಪಾತ್ರಾ
5. ಕೊರಾಪುಟ್ (ಎಸ್ಟಿ) – ಶ್ರೀ ಜಯರಾಮ ಪಂಗಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.