ನವದೆಹಲಿ: ‘ಹವಾಮಾನ ನೀತಿ 2019’ರ ವಿಶ್ವದ 100 ಪ್ರಭಾವಶಾಲಿಗಳ ಪಟ್ಟಿಯಲ್ಲಿ ಭಾರತದ 7 ಮಂದಿ ಸ್ಥಾನವನ್ನು ಪಡೆದುಕೊಂಡಿದ್ದು, ಇದರಲ್ಲಿ ಕೇಂದ್ರ ಸಚಿವರುಗಳಾದ ಪಿಯೂಶ್ ಗೋಯಲ್, ಡಾ.ಹರ್ಷವರ್ಧನ್ ಕೂಡ ಸೇರಿದ್ದಾರೆ. ಪುಣೆ ಮೇಯರ್ ಮುಕ್ತಾ ತಿಲಕ್, ಸಂಶೋಧನಾ ಸಂಸ್ಥೆಯೊಂದರ ಮುಖ್ಯಸ್ಥೆ ಜ್ಯೋತಿ ಕಿರಿಟ್ ಪಾರಿಖ್, ಪರಿಸರ ತಜ್ಞೆ ಸುನೀತ ನರೈನ್, ಪರಿಸರ ಹೋರಾಟಗಾರ್ತಿ ವಂದನಾ ಶಿವ ಪಟ್ಟಿಯಲ್ಲಿ ಸ್ಥಾನ ಪಡೆದ ಇತರ ಭಾರತೀಯರು.
ಅತೀ ಸೂಕ್ಷ್ಮ ವಿಷಯವಾದ ಹವಾಮಾನ ವೈಪರೀತ್ಯವನ್ನು ತಗ್ಗಿಸಲು ಭಾರತ ಸರ್ಕಾರ ತೆಗೆದುಕೊಂಡಿರುವ ಪೂರ್ವಭಾವಿ ಕ್ರಮಗಳು ವಿಶ್ವದ ಗಮನವನ್ನೇ ಸೆಳೆದಿದೆ. 2014ರ ಮೇನಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯದ ಹೆಸರನ್ನು, ಪರಿಸರ, ಅರಣ್ಯ ಮತ್ತು ಹವಮಾನ ವೈಪರೀತ್ಯ ಸಚಿವಾಲಯವನ್ನಾಗಿ ಬದಲಾಯಿಸಲಾಯಿತು. ಈ ಮೂಲಕ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಹೊಸದರಲ್ಲೇ ಹವಾಮಾನ ವೈಪರೀತ್ಯವನ್ನು ಗಂಭೀರವಾಗಿ ಪರಿಗಣಿಸಿತ್ತು.
ಉನ್ನತ ಮಟ್ಟದಲ್ಲಿ ಆರ್ಥಿಕ ಪ್ರಗತಿಯನ್ನು ಹೊಂದುವುದು, ಸಮಾಜದ ಬಹುವರ್ಗಕ್ಕೆ ಉತ್ತಮ ಜೀವನವನ್ನು ಕಲ್ಪಿಸಿ ಮೇಲೆತ್ತುವುದು ಮತ್ತು ಹವಾಮಾನ ವೈಪರೀತ್ಯದ ದುಷ್ಪರಿಣಾಮಗಳನ್ನು ಕಡಿಮೆಗೊಳಿಸುವುದು ಮೋದಿ ಸರ್ಕಾರದ ಮಹತ್ತರವಾದ ಗುರಿಗಳಾಗಿವೆ, ಇದೇ ಕಾರಣದಿಂದ ಹವಾಮಾನ ವೈಪರೀತ್ಯ ರಾಷ್ಟ್ರೀಯ ಕ್ರಿಯಾ ಯೋಜನೆ( NAPCC)ಯನ್ನು ಹೊರತಂದಿತು.
ಈ ನಿಟ್ಟಿನಲ್ಲಿ ಭಾರತದ ಪ್ರಯತ್ನವನ್ನು ಗಮನಿಸಿರುವ, ರಾಜಕೀಯೇತರ, ವಿವಿಧ ಸವಾಲುಗಳ ಬಗ್ಗೆ ಸರ್ಕಾರಗಳಿಗೆ ನಾವೀಣ್ಯ ಪರಿಹಾರಗಳನ್ನು ಒದಗಿಸುವ ಸಂಸ್ಥೆ, ಹವಾಮಾನ ವೈಪರೀತ್ಯದ ತಡೆಗಟ್ಟಲು ಅತ್ಯುನ್ನತವಾದ ಕೊಡುಗೆಗಳನ್ನು ನೀಡಿರುವ ವಿಶ್ವದ 100 ಗಣ್ಯರ ಪಟ್ಟಿಯನ್ನು ಪ್ರಕಟಿಸಿದೆ. ‘Climate 100 – THE WORLD’S MOST INFLUENTIAL PEOPLE IN CLIMATE POLICY’ ಶೀರ್ಷೀಕೆಯಡಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಈ ಪಟ್ಟಿಯಲ್ಲಿ ಮೋದಿ ಸರ್ಕಾರದ ಪ್ರಮುಖ ಸಚಿವರುಗಳಾದ, ಪಿಯೂಶ್ ಗೋಯಲ್ ಮತ್ತು ಹರ್ಷವರ್ಧನ್ ಅವರು ಸ್ಥಾನ ಪಡೆದುಕೊಂಡಿದ್ದಾರೆ. ಪಿಯೂಶ್ ಅವರು, ರೈಲ್ವೇ ಮತ್ತು ಕಲ್ಲಿದ್ದಲು ಸಚಿವರಾಗಿದ್ದಾರೆ. ಇವರು ವಿದ್ಯುತ್ ಗಾಗಿ ಕಲ್ಲಿದ್ದಲು ಮೇಲೆ ಅವಲಂಬಿತರಾಗುವುದನ್ನು ಭಾರೀ ಪ್ರಮಾಣದಲ್ಲಿ ತಗ್ಗಿಸಿದ್ದಾರೆ. ಇದರಿಂದ 18 ಸಾವಿರ ಗ್ರಾಮಗಳನ್ನು ವಿದ್ಯುದೀಕರಣ ಮಾಡಲು ಸಾಧ್ಯವಾಗಿದೆ. ಎಲ್ಇಡಿ ಬಲ್ಬ್ ವಿತರಣೆಯಿಂದ ಪಳೆಯುಳಿಕೆ ಇಂಧನಗಳಿಂದ ಉತ್ಪಾದನೆಯಾಗುವ ವಿದ್ಯುತ್ ಮೇಲಿನ ಅವಲಂಬನೆ ತಗ್ಗಿದೆ. ನವೀಕರಿಸಬಹುದಾದ ಇಂಧನದಲ್ಲಿ ಇವರು ಮಹತ್ವದ ಸಾಧನೆಯನ್ನು ಮಾಡಿದ್ದಾರೆ. 2018ರಲ್ಲಿ ಕಾರ್ನೋಟ್ ಪ್ರೈಝ್ ಇವರಿಗೆ ಒಲಿದಿದೆ.
ಡಾ.ಹರ್ಷವರ್ಧನ್ ಅವರು, ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವರುಗಳಾಗಿ ಭಾರತದ ಶುದ್ಧ ಇಂಧನ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಂಶೋಧನೆಗಳನ್ನು ನಡೆಸುವಂತೆ ಇವರು ಯುವ ಜನತೆಯನ್ನು ಪ್ರೇರೇಪಿಸಿದ್ದಾರೆ. ಪರಿಸರ ಸಂರಕ್ಷಣೆಯಲ್ಲಿ ಭಾರತವನ್ನು ನಾಯಕನನ್ನಾಗಿಸಲು ಶ್ರಮಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.